Tuesday, May 26, 2026
Tuesday, May 26, 2026

Klive Special Article ಮಹಿ ಮಾತಿಶಯದ ಯತಿ ಧೀರೇಂದ್ರ ತೀರ್ಥರು ಲೇ.ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

Date:

Klive Special Article ಶ್ರೀಧೀರೇಂದ್ರತೀರ್ಥ ಶ್ರೀಪಾದಂಗಳವರು..ಭಕ್ತಿಯ ಮಹಿಮೆಯ ಚಿಂತನೆ

ಪವಿತ್ರ ವರದಾನದಿ ಹರಿದಿರುವ “ರಿತ್ತಿ”ಕ್ಷೇತ್ರದಲ್ಲಿ ನೆಲೆಸಿರುವ ರಾಯರು ಶ್ರೀಧೀರೇಂದ್ರತೀರ್ಥರು.ಇವರು ರಿತ್ತಿರಾಯರೆಂದೇ ಖ್ಯಾತರಾಗಿದ್ದಾರೆ.ರಿತ್ತಿಯಲ್ಲಿ ಶ್ರೀಸುಶೀಲೇಂದ್ರತೀರ್ಥರೂ ನೆಲೆಸಿದ್ದಾರೆ. ತಮ್ಮ ಪ್ರೀತಿಯ ಇಬ್ಬರು ಶಿಷ್ಯ ಯತಿಗಳು ಇರುವ ಈ ಸ್ಥಳದಲ್ಲಿ
ಶ್ರೀರಾಘವೇಂದ್ರಗುರುಸಾರ್ವಭೌಮರೂ ಭಕ್ತರನ್ನು ಹರಸಲು ವಿರಾಜಮಾನರಾಗಿದ್ದಾರೆ
ಶ್ರೀಧೀರೇಂದ್ರತೀರ್ಥರು ಶ್ರೀರಾಯರಮಠದ ಪರಂಪರೆಯಲ್ಲಿ ಶ್ರೀರಾಯರ ನಂತರ ಎಂಟನೆಯ ಪೀಠಾಧಿಪತಿಗಳಾಗಿ ವೇದಾಂತ ಸಾಮ್ರಾಜ್ಯವನ್ನಾಳಿದ ಯತಿವರೇಣ್ಯರು. ಇಂದು ಶ್ರೀಗಳವರ ಪೂರ್ವಾರಾಧನೆಯ ಪರ್ವದಿನ.
ಪೂರ್ವಾರಾಧನೆಯ ನಿಮಿತ್ತ ಶ್ರೀಗಳವರ ಮಹಿಮೆಯ ಸ್ಮರಣೆ.
Klive Special Article ಇದು ಬಹಳ ಹಿಂದೆ ನಡೆದ ಒಂದು ಘಟನೆ.ರಿತ್ತಿಯಲ್ಲಿ ಬಾಗಲುಕೋಟೆ ಶೀನಪ್ಪ ಎಂಬುವರು ಇದ್ದರು.ಇವರು
ಶ್ರೀರಾಯರ ಮತ್ತು ಧೀರೇಂದ್ರತೀರ್ಥರ ಭಕ್ತರಾಗಿದ್ದರು ಇವರು ಆ ಊರಿಗೆ ಒಬ್ಬ ನಾಯಕರಂತೆಯೂ ಇದ್ದರು. ಇವರು ಒಂದು ಸಲ ಬದರೀ ಯಾತ್ರೆಗೆ ಹೋಗಿರುತ್ತಾರೆ. ಅಲ್ಲಿ ಅವರಿಗೆ ಆಯಾಸದಿಂದ ತುಂಬಾ ಜ್ವರ ಬಂದು
ಬಿಡುತ್ತದೆ.ಅಲ್ಲಿ ಔಷಧೋಪಚಾರ ನಡೆಯಿತು,ಆದರೂ ಅನಾರೋಗ್ಯ ಕಡಿಮೆಯಾಗಲಿಲ್ಲ.ಏನು ಮಾಡಬೇಕೆಂದು
ತಿಳಿಯದಂತಾಗುತ್ತದೆ.ರಾತ್ರಿ ಶೀನಪ್ಪನವರು ರಿತ್ತಿರಾಯರನ್ನು(ಶ್ರೀಧೀರೇಂದ್ರತೀರ್ಥರನ್ನು) ಸ್ಮರಣೆ
ಮಾಡಿ ಮಲಗಿದರು.ಸ್ವಪ್ನದಲ್ಲಿ ಗುರುಗಳು ಕಾಣಿಸಿಕೊಂಡು “ನಿನ್ನ ಮಕ್ಕಳು ಮಠಕ್ಕೆ ಬಂದಿಲ್ಲ,ಅವರಿಗೆ ಬಂದು ದರ್ಶನ ಮಾಡಲು ತಿಳಿಸು” ನಿನಗೆ ಸಂಪೂರ್ಣ ಗುಣವಾಗುವುದು ಎಂದು ಸೂಚಿಸುತ್ತಾರೆ.ಶೀನಪ್ಪನವರು ಬೆಳಿಗ್ಗೆ ಎದ್ದೊಡನೆಯೇ
ಮಾಡಿದ ಮೊದಲ ಕೆಲಸವೆಂದರೆ ಮಕ್ಕಳಿಗೆ ಫೋನಿನ ಮೂಲಕ ವಿಷಯ ತಿಳಿಸಿದರು. ಫೋನಿನಲ್ಲಿ ವಿಷಯವನ್ನು ಕೇಳಿದ್ದೇ ತಡ ಮಕ್ಕಳು ಮಠಕ್ಕೆ ಬಂದು ಭಕ್ತಿಯಿಂದ ಸೇವೆ ಮಾಡುತ್ತಾರೆ.ಈ ಕಡೆ ಬದರಿಯಲ್ಲಿ
ಶೀನಪ್ಪನವರು ಗುಣಮುಖರಾಗುತ್ತಾರೆ.ಅಲ್ಲಿ ಬದರೀನಾರಾಯಣನಿಗೆ ಭಕ್ತಿಯಿಂದ ನಮಸ್ಕಾರಮಾಡಿ ತಮ್ಮ ಊರಿಗೆ ಹಿಂದಿರುಗಿದರು.
ಈ ಶೀನಪ್ಪನವರ ವಿಷಯ ಕೇಳಿದ ಮೇಲಂತೂ ಜನರಿಗೆ ಗುರುಗಳ ಮೇಲೆ ಭಕ್ತಿ,ನಂಬಿಕೆ ಇನ್ನೂ ಹೆಚ್ಚಾಗಿ ಬೆಳೆಯಿತು.
ಇಂತಹ ಮಹಾಮಹಿಮರು ಶ್ರೀಧಿರೇಂದ್ರತೀರ್ಥ ಗುರುಗಳು.ಇವರು ಮಂತ್ರಾಲಯ ಕ್ಷೇತ್ರದಲ್ಲಿ ಶ್ರೀರಾಯರ ಪಕ್ಕದ ವೃಂದಾವನದಲ್ಲಿ ವಿರಾಜಮಾನರಾಗಿರುವ ಶ್ರೀವಾದೀಂದ್ರತೀರ್ಥ ಗುರುಗಳ ಪೂರ್ವಾ ಶ್ರಮದ ಮಕ್ಕಳು. ಇವರ ಹೆಸರು ಶ್ರೀ ಜಯರಾಮಾ
ಚಾರ್ಯರೆಂಂದು.
ಶ್ರೀಗಳವರ ಪೂರ್ವಾರಾಧನೆಯ ಸಂದರ್ಭದಲ್ಲಿ ಭಕ್ತಿಯಿಂದ ಸ್ಮರಿಸಿ ನಮ್ಮ ನಮನಗಳನ್ನು ಅರ್ಪಿಸಿ ಅವರ ಅನುಗ್ರಹ ಪಡೆಯೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಕ್ರಿಕೆಟ್ ಪಟು ಅಕ್ಷಯ್ ನಿಧನಕ್ಕೆ ಭಗೀರಥ ಸ್ಪೋರ್ಟ್ಸ್ ಅಕಾಡೆಮಿ ಸಂತಾಪ.

Breaking News ಕ್ರಿಕೆಟ್ ಆಟ ಆಡುವಾಗಲೇ ರಣಜಿ ಕ್ರಿಕೆಟ್ ನ ಮಾಜಿ...

Aryabhata Award ಪ್ರಶಾಂತ್ ಕುಮಾರ್ ಸಿ ರಾಯ್ಕರ್ ಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ.

Aryabhata Award ಜ್ಞಾನೇಶ್ವರ ಗೋಶಾಲಾ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಸಿ...

Shimoga News ಹಾವು ಕಡಿತ ಚಿಕಿತ್ಸೆ; ನಾಟಿ ವೈದ್ಯರ ವಿರುದ್ಧ ಸೂಕ್ತ ಕ್ರಮ -ವಿ.ಅಭಿಷೇಕ್.

Shimoga News ಹಾವು ಕಡಿತ ಉಂಟಾದ ತಕ್ಷಣ ಹತ್ತಿರದ ಪಿಹೆಚ್‌ಸಿ ಅಥವಾ...

Shimoga News ಜೂನ್ 28. ಪಲ್ಸ್ ಪೋಲಿಯಿ ಲಸಿಕಾ ಅಭಿಯಾನ ಯಶಸ್ವಿಯಾಗಿ ಅನುಷ್ಠಾನಗೊಳಿಸಿ- ಅಪರ ಜಿಲ್ಲಾಧಿಕಾರಿ ವಿ‌.ಅಭಿಷೇಕ್

Shimoga News ಶಿವಮೊಗ್ಗ ಜಿಲ್ಲೆಯಲ್ಲಿ 2026-27ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ...