Rangayana Shimoga ರಂಗಾಯಣ ಶಿವಮೊಗ್ಗ ಹಾಗೂ ನಮ್ಮ ಹಳ್ಳಿ ಥಿಯೇಟರ್ ಇವರ ಸಹಯೋಗದಲ್ಲಿ ಮಾ.8 ರಿಂದ 9 ರವೆಗೆ ಸಂಜೆ 6.30 ಕ್ಕೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಎರಡು ದಿನಗಳ ರಂಗೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಹೆಗ್ಗೋಡು ರಂಗಕರ್ಮಿಯಾದ ಎಸ್. ಹೆಚ್ ಫಣಿಯಮ್ಮ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಂಗಾಯಣ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ಅಧ್ಯಕ್ಷತೆ ವಹಿಸಲಿದ್ದು, ಪೇಸ್ ಯುಎಂಪಿಯು ಕಾಲೇಜಿನ ಹೆಚ್. ಎಲ್. ಡಾ.ಮೈತ್ರೀಯಿ ಆಗಮಿಸುವರು.
ಮಾ.8 ರ ಸಂಜೆ 6.30 ಕ್ಕೆ ಬೈಂದೂರಿನ ಸುರಭಿ ತಂಡದಿAದ ಡಾ.ಕೆ.ಶಿವರಾಮ ಕಾರಂತರ ರಚನೆಯ ಗಣೇಶ್ ಮಂದಾರ್ತಿ ನಿರ್ದೇಶನದ “ಚೋಮನ ದುಡಿ” ಹಾಗೂ ಮಾ.9 ರ ಸಂಜೆ 6.30ಕ್ಕೆ ಬೆಂಗಳೂರಿನ ರಂಗಪಯಣ ತಂಡದಿAದ ಡಾ.ಗಿರೀಶ್ ಕಾರ್ನಾಡ್ ರಚನೆಯ ರಾಜಗುರು ವಿನ್ಯಾಸ ಮತ್ತು ನಿರ್ದೇಶನದ “ಒಂದಾನೊAದು ಕಾಲದಲ್ಲಿ” ನಾಟಕ ಪ್ರದರ್ಶನ ನಡೆಯಲಿದ್ದು, ಟಿಕೆಟ್ ದರ ಪ್ರತಿ ನಾಟಕಕ್ಕೆ ಒಬ್ಬರಿಗೆ ರೂ.30 ಹಾಗೂ ಎರಡು ನಾಟಕಕ್ಕೆ ಸೇರಿ ರೂ. 50 ನಿಗದಿ ಪಡಿಸಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ ತಿಳಿಸಿದ್ದಾರೆ.