Sunday, February 23, 2025
Sunday, February 23, 2025

Natanam Bharatnatyam Dance ಶಿವಮೊಗ್ಗದಲ್ಲಿ ನಟನಂ ಕಲಾ ಸಂಸ್ಕೃತಿ‌‌‌ ಉತ್ಸವ- 2025

Date:

Natanam Bharatnatyam Dance ಶಿವಮೊಗ್ಗ ರಾಜೇಂದ್ರ ನಗರದ ಪ್ರತಿಷ್ಠಿತ ನಟನಂ ಬಾಲ ನಾಟ್ಯ ಕೇಂದ್ರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ.ಎಸ್. ಕೇಶವಕುಮಾರ್ ಪಿಳ್ಳೈ ಅವರ ನೇತೃತ್ವದಲ್ಲಿ ಫೆ 10ರ ಸೋಮವಾರ ಸಂಜೆ 5:00ಗೆ ಕುವೆಂಪುರಂಗ ಮಂದಿರದಲ್ಲಿ “ನಟನಂ ಕಲಾ ಸಂಸ್ಕೃತಿ ಉತ್ಸವ- 2025” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಭರತನಾಟ್ಯ ವಿಧುಷಿ ಶ್ರೀವಲ್ಲಿ ಅಂಬರೀಶ್ ಹಾಗೂ ಅಂಬರೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ನಟನಂ ಬಾಲನಾಟ್ಯ ಕೇಂದ್ರದ ಕಾರ್ಯದರ್ಶಿ ಆರ್. ಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಇಡೀ ಉತ್ಸವದ ನಿರ್ದೇಶನವನ್ನು ಡಾ. ಎಸ್. ಕೇಶವಕುಮಾರ್ ಪಿಳ್ಳೈ ವಹಿಸಲಿದ್ದಾರೆ.
ಇದರಲ್ಲಿ ವಿಶೇಷವಾಗಿ ಒಡಿಸ್ಸಿ ನೃತ್ಯವನ್ನು ಬೆಂಗಳೂರಿನ ನವಭಾವ ನೃತ್ಯ ಶಾಲೆಯ ಫೌಂಡರ್ ಗುರು ಸೌಮ್ಯ ರಂಗಸ್ವಾಮಿ ಪ್ರದರ್ಶಿಸಲಿದ್ದಾರೆ. ಅಂತೆಯೇ ಬೆಂಗಳೂರಿನ ನಾಟ್ಯಪ್ರಿಯ ಕಲಾನಿಕೇತನ ಕೇಂದ್ರದ ಫೌಂಡರ್ ವಿದುಷಿ ಸುಪ್ರಿಯ ಕಾರ್ತಿಕೇಯನ್ ಕೂಚುಪುಡಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.
ಮೋಹಿನಿ ಆಟಂ ನಾಟ್ಯವನ್ನು ಶಿವಮೊಗ್ಗ ಬೊಮ್ಮನಕಟ್ಟೆಯ ಶ್ರೀ ಶಿವಾನಿ ಭರತನಾಟ್ಯ ಕಲಾ ಕೇಂದ್ರದ ವಿದುಷಿ ಚೈತ್ರ ಕಾರ್ತಿಕ್ ಪ್ರದರ್ಶಿಸಲಿದ್ದು, ಭರತನಾಟ್ಯಂ ಅನ್ನು ನಟನಂ ಕೇಂದ್ರದ ವಿಧುಷಿ ನಾಟ್ಯಶ್ರೀ ಚೇತನ್ ಹಾಗೂ ವಿದ್ವಾನ್ ಚೇತನ್ ಎಸ್. ಸಿ. ಪ್ರದರ್ಶಿಸಲಿದ್ದು, ಅದೇ ಬಗೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಾಟ್ಯಶಂಕರ ನೃತ್ಯಾಲಯದ ವಿದ್ವಾನ್ ಮಾಲತೇಶ್ ಟಿಕಾರೆ ಪ್ರದರ್ಶಿಸಲಿದ್ದಾರೆ.
ವಿಶೇಷ ಆಕರ್ಷಣೆಯಾಗಿ ದಕ್ಷ ಯಜ್ಞ ನೃತ್ಯ ರೂಪಕವನ್ನ ವಿದ್ವಾನ್ ಡಾ. ಎಸ್. ಕೇಶವಕುಮಾರ್ ಪಿಳ್ಳೈ ಪ್ರದರ್ಶಿಸಲಿದ್ದಾರೆ. ಈ ಸಂದರ್ಭದಲ್ಲಿ ಜಪಾನಿನ ಫ್ಯಾನ್ ಡ್ಯಾನ್ಸ್ ಹಾಗೂ ಈಜಿಪ್ಟಿನ ವಿಂಗ್ ಡ್ಯಾನ್ಸನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರನ್ನು ನಟನಂ ಬಾಲನಾಟ್ಯ ಕೇಂದ್ರ ಹಾಗೂ ಕಲಾವಿದರು, ಪೋಷಕರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ :ಹಿತರಕ್ಷಣಾ ವೇದಿಕೆ ಮುಖ್ಯಸ್ಥ ಸುರೇಶ್

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ. ಪೊಲೀಸ್ ಇಲಾಖೆ ಸೇರಿದಂತೆ ರಾಜಕಾರಣಿಗಳು...

ಫೆ.25 ಎಂದು ಆಶ್ರಯ ಮನೆಗಳ ಹಂಚಿಕೆ ವಿಧಾನ ಪರಿಷತ್ ಶಾಸಕಿ ಬಲ್ಕಿಶ್ ಬಾನು ಮಾಹಿತಿ

ಫೆ.25 ರಂದು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಗೋವಿಂದಾ...