News Week
Magazine PRO

Company

Thursday, May 1, 2025

Klive Special Article “ಸೀತಾಪಹರಣ” ಸಿಹಿಮೊಗೆ ರಸಿಕರ ಮನಗೆದ್ದ ಯಕ್ಷಗಾನ

Date:

ಡಾ.ಸುಧೀಂದ್ರ. ಪ್ರಧಾನ ಸಂಪಾದಕ ಕೆ ಲೈವ್ ಪೋರ್ಟಲ್ ಶಿವಮೊಗ್ಗ.

Klive Special Article ಇಡಗುಂಜಿ ಮೇಳ ಅಂದರೆ ನಮಗೆ ಅಲ್ಲಿನ ಶ್ರೀಮಹಾಗಣಪತಿಯ ಭವ್ಯ ಮೂರ್ತಿ…
ಅಲ್ಲಿನ ಪರಿಸರದಲ್ಲಿ ಮರ್ಮರಿಸುವ ಯಕ್ಷಗಾನದ ಚಂಡೆ,ಮದ್ದಳೆ, ಭಾಗವತರ ಕಂಚಿನ ಕಂಠ, ವೇಷತೊಟ್ಟ ಯಕ್ಷಗಾನ ಕಲಾವಿದರು, ಅವರ ಮಾತು, ಹಾವಭಾವ ಏನೆಲ್ಲ ಯಕ್ಷಗಾನದ ವೇದಿಕೆ ಥಟ್ಟನೆ ನೆನಪಾಗುತ್ತದೆ.

ಸ್ಥಾಪಕ ಶಿವರಾಮ ಹೆಗಡೆ ನಂತರ ಪುತ್ರರಾದ ಕೆರೆಮನೆ ಶಂಭು ಹೆಗಡೆ, ಶಂಭುಹೆಗಡೆ ಪುತ್ರ ಶಿವಾನಂದ ಹೆಗಡೆ ಅಲ್ಲದೆ ಯುವ ಪೀಳಿಗೆಯ ಶ್ರೀಧರ ಹೆಗಡೆ ತನಕ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ತನ್ನ ಕಲಾ ಪರಂಪರೆಯ
ಮಡಿಹಾಸಿನ ಮೇಲೆ ಕುಣಿದು ಕುಪ್ಪಳಿಸಿದೆ. ಯಕ್ಷಗಾನ ಪ್ರಿಯರ ಮನದಾಳದಲ್ಲಿ ಇಡಗುಂಜಿ ಮೇಳದ ಆಟ ಎಂದರೆ ಬಹುದಿನಗಳ ಹಸಿವೆಗೆ ದೊರಕುವ ರಸದೂಟವೇ ಸರಿ.

ಈಗ ಇಡಗುಂಜಿ ಮೇಳಕ್ಕೆ ಈಗ
ಒಂಭತ್ತು ದಶಕಗಳು ಪೂರೈಸಿದ ಸಂಭ್ರಮ.
ಕರ್ನಾಟಕವೇ ಅಲ್ಲದೇ ಹೊರ ರಾಜ್ಯಗಳಲ್ಲಿ ಮೇಳ ಸುಳಿದಾಡಿ
ತನ್ನದೇ ಯಕ್ಷಗಾನದ ಪ್ರತಿಭೆಯಿಂದ ರಸಿಕರ ಮನಸೂರೆಮಾಡಿದೆ. ರಾಷ್ಟ್ರೀಯ ಉತ್ಸವಗಳಲ್ಲಿ ರಾರಾಜಿಸಿದ ಇಡಗುಂಜಿಯ ಮೇಳ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ.

ಈ ವರ್ಷ ಯುನಸ್ಕೋದಿಂದ ಜಾಗತಿಕವಾಗಿ
ಪಾರಂಪರಿಕ ಕಲಾತಂಡವೆಂಬ
ಮನ್ನಣೆ ಪಡೆದು ಮತ್ತಷ್ಟೂ ನಭದತ್ತ ತನ್ನ ಯಕ್ಷ ಚಿತ್ತಾರ ಹರಡಿದೆ.

ಇಂತಹ ಸಂದರ್ಭದಲ್ಲಿಯೇ ಅಭ್ಯುದಯ,ಶ್ರೀಮಯ-90 ಸಾರಥಿಗಳು‌ . ಯಕ್ಷಗಾನ ರಸಿಕರು
ಎಲ್ಲರೂ ಒಂದಾಗಿ‌ ಯಕ್ಷಗಾನ ಕಲಾ ಸಂಘಟಕ ಶಿವಾನಂದ ಹೆಗಡೆ ಅವರಿಗೆ‌ ಆತ್ಮೀಯ ಸನ್ಮಾನ‌ವನ್ನ ಜನವರಿ 26 ರಂದು ಏರ್ಪಡಿಸಿತ್ತು.

ಈಗ ಸನ್ಮಾನ ,ಸತ್ಕಾರ ಅಂದರೆ ಅದು‌ ಮಾಮೂಲಿನ ವಿಷಯವಾಗಿದೆ. ಅದಕ್ಕೆಂದೇ
ಒಂದುಷ್ಟು ಕಲಾರಸದೌತಣವಿರಲಿ
ಎಂಬ ಆಶಯದ‌” ಸೀತಾಪಹರಣ”
ಪ್ರಸಂಗದ ಪ್ರದರ್ಶನವನ್ನು ಅಣಿಗೊಳಿಸಲಾಗಿತ್ತು.

ಕತೆ ಹೂರಣ ಸರ್ವವಿದಿತ.ಆದರೆ‌
ಶಿವಾನಂದ ಹೆಗಡೆ ಅವರ ತಾಲೀಮಿನಲ್ಲಿ‌ ಅಂದು ಸೀತಾಪಹರಣ ಕತೆ, ( ನನ್ನ ಮಟ್ಟಿಗಂತೂ)ವಿನೂತನವಾಗಿ‌
ನಿರೂಪಿಸಲ್ಪಟ್ಟಿತು.

Klive Special Article ರಂಗಪೂಜೆಯ ಸಂಪ್ರದಾಯದ ನಂತರ‌ದ ಕ್ಷಣದಲ್ಲೇ ಕಥಾರಂಭ.
ಇದೊಂದು‌ ವಿಶಿಷ್ಟ. ಮೊದಲಲ್ಲೇ‌ ರಾಮ ಲಕ್ಷ್ಮಣ ವೇಷಗಳು ಸಮೃದ್ಧವಾಗಿ ಪ್ರೇಕ್ಷಕರ ಕಣ್ತುಂಬಿಕೊಂಡವು. ರಾಮನ ಪಾತ್ರಧಾರಿ‌ ಶಿವಾನಂದ‌ಹೆಗಡೆ
ತುಂಬಿದ‌ಕೊಡದಂತೆ ಮಾತು, ಅಭಿನಯ, ಆಭೂಷಣಗಳಿಂದ
ರಾಮನೇ ಮೈವೆತ್ತಿ ಕೊಂಡಂತೆ ಭಾಸ. ಅವರದು ಲೀಲಾಜಾಲ‌ ನಟನೆ. ಲಕ್ಷ್ಮಣನಾಗಿ‌ ಅವರ ಪುತ್ರ ಶ್ರೀಧರ ಹೆಗಡೆ ಅಷ್ಟೇ ಸಮನಾಗಿ
ಅಭಿನಯದ ತೂಕ ನೀಡಿ ,ಅನುಭವಸ್ಥ ಪಾತ್ರಧಾರಿಯ‌ ಜೊತೆ‌
ಹಾಲು ಜೇನಂತೆ ಬೆರೆತು‌ ಇಡೀದೃಶ್ಯ
ಕಟ್ಟಿಕೊಡುವಲ್ಲಿ ಯಶಸ್ವಿಯಾದರು.
ಶ್ರೀಧರ ಹೆಗಡೆ ,ನಾಳಿನ ನಕ್ಷತ್ರ ಅಲ್ಲ
ಇಂದೇ ಬೆಳಗುವ‌ ತಾರೆ‌‌ ಎಂಬ ಭರವಸೆ ಮೂಡಿಸಿದರು.

ಪಂಚವಟಿಯಲ್ಲಿ ಸೀತೆಯು ಲಕ್ಷ್ಮಣನಿಗೆ ರಾಮನು‌ ಸಂಕಷ್ಟದಲ್ಲಿರುವಂತಿದೆ ತೆರಳು ಎಂದಾಗ‌ ಆವನು ರಾಮನ ಮಾತಿಗೆ‌ ಕಟ್ಟುಬಿದ್ದಿದ್ದೇನೆ ಎಂಬ ಇಬ್ಬಂದಿಸ್ಥಿತಿಯಲ್ಲಿದ್ದಾಗ ಸೀತೆ ಅಪಾರ್ಥಮಾಡಿಕೊಳ್ಳುವ ಸನ್ನಿವೇಶದಲ್ಲಿ ಹತಾಶನಾಗಿ‌ ನೆಲಕ್ಕೆ ಬೀಳುವ‌ ಅಭಿನಯ ಶ್ರೀಧರ‌ಹೆಗಡೆ ತನ್ಮಯತೆ ಮತ್ತು
ಮನೋಜ್ಞತೆಯನ್ನ ಬಿಂಬಿಸಿತು.

ರಾಮ ಸೀತೆಯರ‌ ಮಾಯಾಮೃಗದ
ಕುರಿತ ಸಂಭಾಷಣೆ ರಸಿಕರಿಗೆ ಕಚಗುಳಿಯಾಗಿತ್ತು. ಅಂದಿನ ಕತೆಯಲ್ಲಿ‌ ಇಂದಿನ ಸ್ತ್ರೀಯರ ಹಳದಿಲೋಹದ ವ್ಯಾಮೋಹಗಳನ್ನ ಎಳೆಎಳೆಯಾಗಿ ಬಿಡಿಸಿಟ್ಟದ್ದು
ರಸಿಕಾಂಗಣಕ್ಕೆ ಒಂದಿಷ್ಟು ಹೊತ್ತು
ಲವಲವಿಕೆ ನೀಡಿತು.
ರಾವಣನ‌ ಆಗಮನ ( ಪಾತ್ರಧಾರಿ:
ಕೆ.ಜಿ.ಮಂಜುನಾಥ) ‌ಪ್ರಸಂಗಕ್ಕೆ ತಿರುವು .ಅದರಲ್ಲೂ ಶೂರ್ಪನಖಿ‌
ಎದೆನಡುಗಿಸುವ‌ ವೇಷ. ಅವರೀರ್ವರ ಸಂಭಾಷಣೆ ಬೇಸರ ತರಿಸದೇ ಚುರುಕಾಗಿ‌ ಕತೆಯನ್ನು
ಸಾಗಿಸಿತು. ಶೂರ್ಪನಖಿ ಪಾತ್ರಧಾರಿ
( ವಿಘ್ನೇಶ್ವರ ಹಾಲುಗೋಡಿ ) ರಂಗವನ್ನ‌ ಆಕ್ರಮಿಸುವಂತೆ
ಆರ್ಭಟ. ಸೂಕ್ತ ಆಂಗಿಕ, ಆಹಾರ್ಯಗಳಿಂದ‌‌ ಪ್ರೇಕ್ಷಕರನ್ನ‌ ಸೆಳೆದರು.
ಮತ್ತೊಂದು‌ಘಟ್ಟವೆಂದರೆ ರಾವಣನು‌ ,ಮಾವ ಮಾರೀಚನ‌ ನೆರವು‌‌ಬೇಡುವ‌ ಪ್ರಸಂಗ. ಸಂಪೂರ್ಣ ಲೋಕಧರ್ಮೀ ಅಭಿನಯ‌‌ ತುಂಬಿದ ದೃಶ್ಯ. ಈರ್ವರ ಮಾತುಕತೆ ನಮ್ಮ‌ಲೌಕಿಕ ಜೀವನಕ್ಕೆ ಹಿಡಿದ ಕನ್ನಡಿ. ಮಾರೀಚನಾಗಿ ತಿಮ್ಮಪ್ಪ‌ಹೆಗಡೆ ಶಿರಳಗಿ‌ಕೂಡ ಪ್ರೇಕ್ಷರೊಂದಿಗೆ‌
ಸಂವಾದ ಮಾಡುವಂತಿತ್ತು. ಪಾಪಿಯ‌ ಕೈ ಸಾವಿಗಿಂತ‌ ದೇವರಾಮನ‌‌ ಬಾಣಕ್ಕೆ‌‌ ಎದೆಕೊಡುವುದೇ ಸೂಕ್ತ ಎಂಬ‌ ನಿರ್ಧಾರ ತಾಳುವಲ್ಲಿ‌ ಸಹೃದಯ‌ನೇ
ಆ ಪಾತ್ರಕ್ಕೆ ಭೇಷ್‌ ಹೇಳಿ ಬಿಡುವಂತಿದೆ.

ಹೀಗೆಯೇ ಮಾಯಾಮೃಗ‌ ಸನ್ನಿವೇಷ. ಅದಂತೂ‌ ಸಂಪೂರ್ಣ ಲೋಕಧರ್ಮೀ ಅಭಿನಯಕ್ಕೆ‌ ಸೋದಾಹರಣ ನಿರೂಪಣೆ. ಇಂದಿನ ರಮಣಿಯರ ಬಂಗಾರದ ವ್ಯಾಮೋಹಗಳನ್ನ ತರತರವಾಗಿ‌
ಲಘುಹಾಸ್ಯ ಮಿಶ್ರಿತವಾಗಿ ಮಾತಾಡುವ ರಾಮ( ಶಿವಾನಂದ ಹೆಗಡೆ) ಅಷ್ಟೇ ಸಂವಾದಿಯಾಗಿ
ಅಭಿನಯಿಸಿದ ಸೀತೆ‌( ಪಾತ್ರಧಾರಿ;
ಸದಾಶಿವ ಭಟ್ಟ) ಸಮಯ ಸರಿದದ್ದೇ‌ ತಿಳಿಯುವುದಿಲ್ಲ.

ಸಹೃದಯರಲ್ಲಿ ಅಂತಹ ಸೀತೆಯೇ ಬಂಗಾರಕ್ಕೆ ಆಸೆ ಪಟ್ಟಳಲ್ಲ‌ ಎಂದು‌
ವರ್ತಮಾನಕ್ಕೂ‌‌ ಬೆಸುಗೆ ಹಾಕುತ್ತದೆ. ಇದೇ‌ ಅಭಿನಯದ ಪ್ಲಸ್ ಪಾಯಿಂಟ್.
ಮಾಯಾಜಿಂಕೆಯಾಗಿ ಬಂದ‌‌
( ಪಾತ್ರಧಾರಿ; ಎನ್.ಚಂದ್ರಶೇಖರ್)
ರಂಗದ ಸಂಪೂರ್ಣ ಸ್ಥಳವನ್ನ ಬಳಸಿಕೊಂಡ ಏಕೈಕ‌ಪಾತ್ರ. ಜಿಂಕೆಯಾಗಿ‌ ಆಹಾರ್ಯದಲ್ಲಿ‌ ಯಶ. ಆಂಗಿಕದಲ್ಲಂತೂ‌ ಮತ್ತಷ್ಟು‌
ಸಿದ್ಧಿಪಡೆದ ಕಲಾವಿದ.
ಜಟಾಯು‌ ಪುಟ್ಟ ಪಾತ್ರವಾದರೂ
ಅದರ ಪ್ರವೇಶ ಮತ್ತು‌ ಅಭಿನಯ
ಸರಿಯಾದ ತೂಕದಲ್ಲಿತ್ತು.
ಪಾತ್ರಧಾರಿ, ಗಣಪತಿ‌ ಕುಣಬಿ ಕೂಡ
ಚೊಕ್ಕದಾದ ಪ್ರವೇಶ ಮತ್ತು‌ ಪರಿಣಾಮಕಾರಿ ಅಭಿನಯ.

ಕತೆಯ ಸರಿದಾಟ ಅರಿವಿಗೇ ಬರುವುದಿಲ್ಲ. ಪ್ರೇಕ್ಷಕರೇ ಮುಂದಿನ ಘಟನೆಗಳನ್ನ ನಿರೀಕ್ಷಿಸುವಂತೆಯೇ
ಆಟ ಮೋಡಿಯಂತೆ ನಡೆಯುತ್ತಿರುತ್ತದೆ. ಶಿಖರ ಘಟ್ಟವೇ
ಸೀತಾಪಹರಣ.
ಸನ್ಯಾಸಿ ರಾವಣನಾಗಿ‌ ಬಂದ ದೃಶ್ಯ‌
ಒಂದಷ್ಟು ಕ್ಷಣ ಅನಿಮಿಷನಾಗಿ
ಬಿಡುತ್ತಾನೆ‌ ಪ್ರೇಕ್ಷಕ. ಸೀತೆ‌ ಮೂರುಗೆರೆ ದಾಟುವ‌ ‌ಚಲನೆ, ರಾವಣ ( ಪಾತ್ರಧಾರಿ: ಈಶ್ವರ ಹಂಸಳ್ಳಿ) ದಿಟ್ಟ ನಿಲುವಿನಿಂದ, ವಂಚನೆಯ‌ ಮಾತುಗಳಿಂದ ಖಳನಾಯಕನಾಗಿ ನಮ್ಮ ಭಾವಕೋಶವನ್ನ‌‌ ಆಕ್ರಮಿಸಿ ಬಿಡುತ್ತಾನೆ.
ಅಪಹರಣದ ಸನ್ನಿವೇಷದಲ್ಲಿ
ಸೀತೆಯ ಆಕ್ರಂದನ‌ ಎಂಥವರಿಗೂ
ಮನ ಕಲಕದೇ ಇರದು.ಅಷ್ಟು ಸಹಜತೆ‌ ಆ ದೃಶ್ಯದಲ್ಲಿ ತುಂಬಿಕೊಂಡಿತ್ತು.
ಇಲ್ಲಿ ಭಾಗವತರ‌‌ ಬಗ್ಗೆ ಹೇಳದಿದ್ದರೆ
ಕರ್ತವ್ಯಚ್ಯುತಿಯಾದೀತು.
ಸಂಗೀತಜ್ಞರಲ್ಲದವರೂ‌ ಆ ರಾಗ,ಆಲಾಪಕ್ಕೆ ಶರಣಾಗಬೇಕು
( ಅನಂತ ಹೆಗಡೆ,ನರಸಿಂಹ ಹೆಗಡೆ, ರಾಮನ್ ಹೆಗಡೆ) ಹಾಗಿತ್ತು ಅವರ ಭಾಗವತಿಕೆ.
ಚಂಡೆಮದ್ದಳೆ ಅದೇ ಆಟದ ಜೀವಂತಿಕೆ.ಸಹೃದಯನ ಎದೆಬಡಿತಕ್ಕೆ ಸಂವಾದಿಯಾಗಿ‌
ಪ್ರಸಂಗ ಚಾಲಕನಾಗುವ ಶಕ್ತಿ.
ಬಂಗಾರದ ಜಿಂಕೆಯ ಚಲನೆಗೆ
ಹಾಕುವ ಮಟ್ಟುಗಳು ಕಳೆಕೊಟ್ಟವು.

ಒಟ್ಟಿನಲ್ಲಿ ಇದೊಂದು ಪ್ರಯೋಗ.
ಯಾಕೆಂದರೆ ಆಟವೆಂದರೆ ರಾತ್ರಿಯಿಡೀ ನಡೆಯುವ ದೀರ್ಘ ಪ್ರಸಂಗ.
ಆದರೆ ಈಗಿನ ಕಾಲಮಾನಕ್ಕೂ
ಯಕ್ಷಗಾನ ಪ್ರಸಂಗವನ್ನ. ಹೃಸ್ವವಾಗಿಸಿ, ಲೋಪಬಾರದಂತೆ
ಎರಡೇ ಗಂಟೆಗಳಲ್ಲೂ‌ ಯಕ್ಷಗಾನವನ್ನ ಪರಿಣಾಮಕಾರಿ
ಆಗಿಸಬಹುದು‌ ಎಂಬ ವಾದಕ್ಕೆ ಪುಷ್ಠಿ ಮತ್ತು ಮಾದರಿ.

ಇರುಳಿಡೀ ಪ್ರಸಂಗ ಒಂದು ಟೆಸ್ಟ್ ಕ್ರಿಕೆಟ್ ಮ್ಯಾಚ್. ಆದರೆ ಇಂತಹ‌ ಹೃಸ್ವ ಪ್ರಯೋಗಗಳು ಟಿ-20
ಮ್ಯಾಚ್ ಇದ್ದಂತೆ. ಎರಡರಲ್ಲೂ ಅದರದೇ ವಿಶೇಷತೆಗಳಿವೆ. ಆಕರ್ಷಣೆಗಳಿವೆ ಅಲ್ಲವೆ?

ಇದೆಲ್ಲವೂ ಸೂತ್ರಧಾರ ಶಿವಾನಂದ‌ಹೆಗಡೆ ಅವರ ಕರ್ತೃತ್ವಶಕ್ತಿ , ಸೃಜನಶೀಲತೆಗೆ ಸಾಕ್ಷಿ.
ನಮಗೆ ನಮ್ಮ ಕಲೆ, ಸಂಸ್ಕೃತಿ ,ಪರಂಪರೆ ಬೇಕು. ಬೇಕಿದ್ದರೆ ಮೊದಲು ಅವು‌ ಉಳಿಯ ಬೇಕು.
ಅಂತಹ ಬೇರನ್ನು ಪಳೆಯುಳಿಕೆ ಮಾಡದೇ ಜೀವಂತ‌ ಇರಿಸುವ ಛಲಗಾರಿಕೆಯನ್ನ. ಈ ಕ್ಷೇತ್ರದಲ್ಲಿ
ಶಿವಾನಂದ ಹೆಗಡೆ ತೋರಿಸುತ್ತಿದ್ದಾರೆ.
ಆ ಪಟ್ಟುಬಿಡದ ಶ್ರಮದ ಸಂಕೇತವಾಗಿ ಶ್ರೀಮಹಾಗಣಪತಿ‌ ಯಕ್ಷಗಾನ ಮಂಡಳಿಗೆ “ಯುನೆಸ್ಕೊ” ಮಾನ್ಯತೆ ನೀಡಿ
ಗೌರವಿಸಿದೆ. ಕನ್ನಡನಾಡಿಗೂ ಇದು‌ ಹೆಮ್ಮೆಯ ಸಂಗತಿಯಾಗಿದೆ.

ಇದು ಸುಲಭದ ಸಾಧನೆಯಲ್ಲ ದೇಶೀಯವಾಗಿ
ಈ ಮನ್ನಣೆ ಆರೇಳು ತಂಡಗಳಿಗೆ ಸಿಕ್ಕಿವೆ. ಈ ಸಾಧನೆಯ ಹಿಂದೆ ಕೆರೆಮನೆ ಕುಟುಂಬದ ಶ್ರಮ, ತ್ಯಾಗ, ಅರ್ಪಣಾ ಮನೋಭಾವ ಮತ್ತು ಇಡೀ ಊರಿನವರ ಸಹಕಾರ ಘನವಾಗಿ ನಿಂತಿದೆ.

ಹೊನ್ನಾವರ ಸನಿಹದ ಗುಣವಂತೆ ಎಂಬ ಪುಟ್ಟಗ್ರಾಮದಲ್ಲಿ ಕೆರೆಮನೆ ಶಂಭುಹೆಗಡೆ ಕಲಾಲೋಕವೇ ಮೈದಳೆದು ನಿಂತಿದೆ. ಯಕ್ಷಗಾನವನ್ನ ಒಂದು ಶೈಕ್ಷಣಿಕ ಶಿಸ್ತಾಗಿ ಅಧ್ಯಯನ ಮಾಡುವ
ಅಕಾಡೆಮಿಕ್ ಪ್ರಯತ್ನ ಅಲ್ಲಿ ಸಾಕಾರಗೊಂಡಿದೆ.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ,ಯಕ್ಷಗಾನ ಗುರುಕುಲ,ಪ್ರಾತ್ಯಕ್ಷತೆ ಆಟವೇ ಪಾಠ,ಕಾರ್ಯಾಗಾರಗಳು,ತರಬೇತಿ..ಒಂದೆ ಎರಡೆ ಹೀಗೆ ಹತ್ತು ಹಲವು ಆಯಾಮಗಳಿಂದ ಇಡೀ ಯಕ್ಷಗಾನ ಕಲೆಗಿರುವ ಸಹಸ್ರ ಮುಖಗಳ ಬಗ್ಗೆ ಎಲ್ಲರೂ ನೋಡುವಂತೆ ಮಾಡಲಾಗುತ್ತಿದೆ
ಯಕ್ಷಗಾನ ಕಲಾಪ್ರಪಂಚದ ದಿಗ್ಗಜರೆಲ್ಲರೂ ಈ ಕಲಾವೇದಿಕೆಯ ಹೊನಲು‌ಬೆಳಕಿನಲ್ಲಿ ಬಣ್ಣಹಚ್ಚಿದ್ದಾರೆ. ಕಂಚು‌ಕಂಠದ ಭಾಗವತರು ಪಾತ್ರಗಳಿಗೆ ರಾಗ ಕಂಠ ನೀಡಿದ್ದಾರೆ. ಮದ್ದಳೆ ಪ್ರವೀಣರ ಮಾಂತ್ರಿಕ ಕೈಗಳು ಇಲ್ಲಿ ಸೋತಿಲ್ಲ.. ಅದಕ್ಕೆ ಹೊಯ್ ಕೈಯಾಗಿ ಪಾತ್ರಧಾರಿಗಳ ಮಾತುಗಾರಿಕೆ ಹೆಜ್ಜೆಗಳೂ ದಣಿದಿಲ್ಲ.

ಪ್ರಸ್ತುತ ಇಡಗುಂಜಿ ಮೇಳದ ನಿರ್ದೇಶಕರಾಗಿರುವ ಕೆರೆಮನೆ ಶಿವಾನಂದ ಹೆಗಡೆ ಅವರ ಅವಿರತ ಶ್ರಮದಿಂದಾಗಿ ಗುಣವಂತೆ ಜಾಗತಿಕ ಯಕ್ಷ ನಕ್ಷೆಯಲ್ಲಿ ಮಿನುಗುವಂತಾಗಿದೆ.
ಶಿವಮೊಗ್ಗದ ಯಕ್ಷಗಾನ ಪ್ರೇಮಿಗಳಿಗೆ ಇಡಗುಂಜಿ ಮೇಳ ಬಹಳ ಆಪ್ತವಾಗಿರುವ ಕಲಾತಂಡ. ಅದರ ಕಲಾವಿದರಂತೂ
ಮಿತ್ರರಂತೆ ಬೆರೆತುಹೋಗಿದ್ದಾರೆ.

ಶಿವಮೊಗ್ಗದ ಸಾಂಸ್ಕೃತಿಕ ಚಟುವಟಿಕೆಯ ಮುಂಚೂಣಿಯಲ್ಲಿರುವ ಅಭ್ಯುದಯ ಸಂಸ್ಥೆಯ ಲಷ್ಮೀನಾರಾಯಣ ಕಾಶಿ. ಎನ್.ರಾಮಚಂದ್ರ,ಡಾ.ರತ್ನಾಕರ್, ಬಾಬಣ್ಣ, ಡಾ.ಟಿ.ಜೆ.ಲಕ್ಷ್ಮೀನಾರಾಯಣ.
ಡಾ.ಅನಿಲ್ ಕುಮಾರ್, ಶ್ರೀನಿವಾಸ ಕಾರಂತ್ ಮುಂತಾದವರ ಶ್ರಮ ಸಾರ್ಥಕವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News
  • United States+1
  • United Kingdom+44
  • Afghanistan+93
  • Albania+355
  • Algeria+213
  • American Samoa+1
  • Andorra+376
  • Angola+244
  • Anguilla+1
  • Antigua & Barbuda+1
  • Argentina+54
  • Armenia+374
  • Aruba+297
  • Ascension Island+247
  • Australia+61
  • Austria+43
  • Azerbaijan+994
  • Bahamas+1
  • Bahrain+973
  • Bangladesh+880
  • Barbados+1
  • Belarus+375
  • Belgium+32
  • Belize+501
  • Benin+229
  • Bermuda+1
  • Bhutan+975
  • Bolivia+591
  • Bosnia & Herzegovina+387
  • Botswana+267
  • Brazil+55
  • British Indian Ocean Territory+246
  • British Virgin Islands+1
  • Brunei+673
  • Bulgaria+359
  • Burkina Faso+226
  • Burundi+257
  • Cambodia+855
  • Cameroon+237
  • Canada+1
  • Cape Verde+238
  • Caribbean Netherlands+599
  • Cayman Islands+1
  • Central African Republic+236
  • Chad+235
  • Chile+56
  • China+86
  • Christmas Island+61
  • Cocos (Keeling) Islands+61
  • Colombia+57
  • Comoros+269
  • Congo - Brazzaville+242
  • Congo - Kinshasa+243
  • Cook Islands+682
  • Costa Rica+506
  • Croatia+385
  • Cuba+53
  • Curaçao+599
  • Cyprus+357
  • Czech Republic+420
  • Côte d’Ivoire+225
  • Denmark+45
  • Djibouti+253
  • Dominica+1
  • Dominican Republic+1
  • Ecuador+593
  • Egypt+20
  • El Salvador+503
  • Equatorial Guinea+240
  • Eritrea+291
  • Estonia+372
  • Eswatini+268
  • Ethiopia+251
  • Falkland Islands+500
  • Faroe Islands+298
  • Fiji+679
  • Finland+358
  • France+33
  • French Guiana+594
  • French Polynesia+689
  • Gabon+241
  • Gambia+220
  • Georgia+995
  • Germany+49
  • Ghana+233
  • Gibraltar+350
  • Greece+30
  • Greenland+299
  • Grenada+1
  • Guadeloupe+590
  • Guam+1
  • Guatemala+502
  • Guernsey+44
  • Guinea+224
  • Guinea-Bissau+245
  • Guyana+592
  • Haiti+509
  • Honduras+504
  • Hong Kong+852
  • Hungary+36
  • Iceland+354
  • India+91
  • Indonesia+62
  • Iran+98
  • Iraq+964
  • Ireland+353
  • Isle of Man+44
  • Israel+972
  • Italy+39
  • Jamaica+1
  • Japan+81
  • Jersey+44
  • Jordan+962
  • Kazakhstan+7
  • Kenya+254
  • Kiribati+686
  • Kosovo+383
  • Kuwait+965
  • Kyrgyzstan+996
  • Laos+856
  • Latvia+371
  • Lebanon+961
  • Lesotho+266
  • Liberia+231
  • Libya+218
  • Liechtenstein+423
  • Lithuania+370
  • Luxembourg+352
  • Macau+853
  • Madagascar+261
  • Malawi+265
  • Malaysia+60
  • Maldives+960
  • Mali+223
  • Malta+356
  • Marshall Islands+692
  • Martinique+596
  • Mauritania+222
  • Mauritius+230
  • Mayotte+262
  • Mexico+52
  • Micronesia+691
  • Moldova+373
  • Monaco+377
  • Mongolia+976
  • Montenegro+382
  • Montserrat+1
  • Morocco+212
  • Mozambique+258
  • Myanmar (Burma)+95
  • Namibia+264
  • Nauru+674
  • Nepal+977
  • Netherlands+31
  • New Caledonia+687
  • New Zealand+64
  • Nicaragua+505
  • Niger+227
  • Nigeria+234
  • Niue+683
  • Norfolk Island+672
  • North Korea+850
  • North Macedonia+389
  • Northern Mariana Islands+1
  • Norway+47
  • Oman+968
  • Pakistan+92
  • Palau+680
  • Palestine+970
  • Panama+507
  • Papua New Guinea+675
  • Paraguay+595
  • Peru+51
  • Philippines+63
  • Poland+48
  • Portugal+351
  • Puerto Rico+1
  • Qatar+974
  • Romania+40
  • Russia+7
  • Rwanda+250
  • Réunion+262
  • Samoa+685
  • San Marino+378
  • Saudi Arabia+966
  • Senegal+221
  • Serbia+381
  • Seychelles+248
  • Sierra Leone+232
  • Singapore+65
  • Sint Maarten+1
  • Slovakia+421
  • Slovenia+386
  • Solomon Islands+677
  • Somalia+252
  • South Africa+27
  • South Korea+82
  • South Sudan+211
  • Spain+34
  • Sri Lanka+94
  • St Barthélemy+590
  • St Helena+290
  • St Kitts & Nevis+1
  • St Lucia+1
  • St Martin+590
  • St Pierre & Miquelon+508
  • St Vincent & Grenadines+1
  • Sudan+249
  • Suriname+597
  • Svalbard & Jan Mayen+47
  • Sweden+46
  • Switzerland+41
  • Syria+963
  • São Tomé & Príncipe+239
  • Taiwan+886
  • Tajikistan+992
  • Tanzania+255
  • Thailand+66
  • Timor-Leste+670
  • Togo+228
  • Tokelau+690
  • Tonga+676
  • Trinidad & Tobago+1
  • Tunisia+216
  • Turkey+90
  • Turkmenistan+993
  • Turks & Caicos Islands+1
  • Tuvalu+688
  • US Virgin Islands+1
  • Uganda+256
  • Ukraine+380
  • United Arab Emirates+971
  • United Kingdom+44
  • United States+1
  • Uruguay+598
  • Uzbekistan+998
  • Vanuatu+678
  • Vatican City+39
  • Venezuela+58
  • Vietnam+84
  • Wallis & Futuna+681
  • Western Sahara+212
  • Yemen+967
  • Zambia+260
  • Zimbabwe+263
  • Åland Islands+358

Popular

More like this
Related

Sri Adichunchanagiri Education Trust ಬಿಜಿಎಸ್ ಪಿಯು ವಾಣಿಜ್ಯ ಕಾಲೇಜಿಗೆ ಶೇ 100 ಫಲಿತಾಂಶ

Sri Adichunchanagiri Education Trust ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್...

Department of Science and Technology ಹೊಳಲೂರು ಏತ ನೀರಾವರಿಗೆ ₹ 4.8 ಕೋಟಿ ಬಜೆಟ್ ನಿಗದಿಮಾಡಿದ ಸಚಿವರ ಕ್ರಮಕ್ಕೆ ರೈತರ ಕೃತಜ್ಞತೆ

Department of Science and Technology ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಶಿವಮೊಗ್ಗ...

Sri Shankaracharya Jayanti ಮೇ 2. ಭಕ್ತಿಪೂರ್ವಕ ಶಂಕರ ಜಯಂತಿ ಆಚರಣೆಗೆ ಜಿಲ್ಲಾಡಳಿತ ಸರ್ವ ಸಿದ್ಧತೆ

Sri Shankaracharya Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ...

Akshaya Tritiya ಅಕ್ಷಯ ತೃತೀಯ, ಕೆಲವು ಸಾಮಾಜಿಕ ಆತಂಕಗಳು

Akshaya Tritiya ಅಕ್ಷಯ ತೃತೀಯ ಎಂದರೆ ಬಂಗಾರ ಖರೀದಿಗೆ, ಗೃಹ ಪ್ರವೇಶ,...