Monday, December 15, 2025
Monday, December 15, 2025

Bharat Scouts and Guides ಸಂಚಾರ ಕಾನೂನು ಅರಿತ ನಂತರ ವಾಹನ ಖರೀದಿ‌ಸಿ, ಚಾಲನೆ ಮಾಡಿ- ಅನಿಲ್ ಕುಮಾರ್ ಭೂಮರೆಡ್ಡಿ

Date:

Bharat Scouts and Guides ಪ್ರತಿಯೊಬ್ಬರೂ ವಾಹನ ಕೊಂಡುಕೊಳ್ಳುವಾಗ ಅದರ ಕಾಯ್ದೆ ಕಾನೂನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಅದರ ಕಾಯ್ದೆ, ಕಾನೂನು ತಿಳಿದುಕೊಂಡ ಬಳಿಕವಷ್ಟೇ ವಾಹನ ಕೊಂಡು ಚಲಾಯಿಸಿ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದ್ದಾರೆ. ಇಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಿವಮೊಗ್ಗ ನಗರ ಸಂಚಾರ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

ಪ್ರತಿಯೊಬ್ಬರೂ ಅದರಲ್ಲೂ ಯುವಕ-ಯುವತಿಯರು ನಿಯಾಮವಳಿಗಳನ್ನು ಪಾಲನೆ ಮಾಡುವುದರ ಮೂಲಕ ವಾಹನ ಚಲಾವಣೆಗೆ ಮುಂದಾಗಬೇಕು. ಪರವಾನಿಗಿ ಇದ್ದರಷ್ಟೇ ವಾಹನ ಚಲಾಯಿಸಬೇಕು. ರಸ್ತೆ ನಿಯಾಮಾವಳಿ ಮತ್ತು ಪರವಾನಿಗೆ ಹೊಂದ ಬಳಿಕವಷ್ಟೇ ವಾಹನ ಚಲಾಯಿಸಬೇಕೆಂದು ಕಿವಿ ಮಾತು ಹೇಳಿದರು.

ಇನ್ನು 18 ವರ್ಷ ವಯಸ್ಸಿನೊಳಗೆ ಇರುವವರು ಯಾರೂ ಕೂಡ ವಾಹನ ಚಲಾಯಿಸಬಾರದು. ಪರವಾನಿಗೆ ಇದ್ದವರು ವಾಹನ ಚಲಾಯಿಸಬೇಕಾದಲ್ಲಿ ಎಲ್ಲಾ ದಾಖಲೆಗಳು ಹೊಂದಿರಬೇಕು. ನಮ್ಮ ದಾರಿಯಲ್ಲಿ ನಾವು ಸರಾಗವಾಗಿ ಸಾಗಿದರೆ, ರಸ್ತೆ ಸುರಕ್ಷತೆ ಕಾಪಾಡಿದಂತಾಗುತ್ತದೆ. ಎಲ್ಲರೂ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು. ಮಕ್ಕಳು ಕೂಡ ಹೆಲ್ಮೆಟ್ ಧರಿಸಿಯೇ ವಾಹನದಲ್ಲಿ ಸಾಗಬೇಕು. ಇತರರಿಗೂ ವಾಹನ ಚಲಾವಣೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್, ಇದರಲ್ಲಿ ಹೊಸತನವಿದೆ. ಜೀವನದಲ್ಲಿ ಹೊಸತನ ಕಲಿಯಬೇಕು. ಹಾಗೆ ನಾನು ಸ್ಕೌಟ್ಸ್ ಸೆಲ್ಯೂಟ್ ಬಗ್ಗೆ ಇಂದು ತಿಳಿದುಕೊಂಡಿದ್ದೆನೆ. ಬಹಳಷ್ಟು ಧೈರ್ಯ ಶಾಲಿಗಳಾಗಲು ಈ ರೀತಿಯ ಕೈಕುಲುಕುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಸೇವೆ ಸಲ್ಲಿಸುತ್ತಾರೆ. ಪ್ರತಿದಿನ ಕಲಿಕೆ ಎಂಬುದು ಇರುತ್ತದೆ. ಇಲ್ಲಿ ಸೆಲ್ಯೂಟ್ ಬಗ್ಗೆ ಕಲಿಕೆ ಉತ್ತಮ ಪ್ರಯೋಜನಕಾರಿಯಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

Bharat Scouts and Guides ಕಾರ್ಯಕ್ರಮದಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಕೌಟ್ಸ್ ಮತ್ತು ಬುಲ್ ಬುಲ್ಸ್ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಸ್ಕೌಟ್ ಆಯುಕ್ತ ಎಸ್.ಜಿ. ಆನಂದ್, ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ, ರೋವರ್ ಜಿಲ್ಲಾ ಆಯುಕ್ತ ಕೆ. ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯ ಕುಮಾರ್, ಚಂದ್ರಶೇಖರ್, ಚೂಡಾಮಣಿ ಪವಾರ್, ಡಿ.ವೈಎಸ್.ಪಿ. ಸಂಜೀವ್ ಕುಮಾರ್, ಟ್ರಾಫಿಕ್ ಇನ್ಸ್ ಪೆಕ್ಟರ್ ಸಂತೋಷ್.. ರಾಜೇಶ್ ಅವಲಕ್ಕಿ. ಶಿವಶಂಕರ್. ಮಲ್ಲಿಕಾರ್ಜುನ್ ಖಾನೂರ್. ಗೀತಾ ಚಿಕ್ಕಮಠ. ವೈ ಆರ್ ಕಾರ್ಯದರ್ಶಿ ಚಂದ್ರಶೇಖರ್ . ಕಾತ್ಯಾಯಿನಿ.. ರಾಮಚಂದ್ರ ಸೇರಿದಂತೆ ಇತರರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...