Wednesday, April 23, 2025
Wednesday, April 23, 2025

Karnataka Sangh Bhavan ಅಜೇಯ ಬಳಗದಿಂದ ವಿನೂತನ ಕಾರ್ಯಕ್ರಮ.”ಅಮ್ಮ ಎಂಬ ಅಚ್ಚರಿಗೆ ಅಕ್ಕರೆಯ ನಮನ

Date:

Karnataka Sangh Bhavan ಶಿವಮೊಗ್ಗ ನಗರದ ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಜ. 19ರ ನಾಳೆ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕರ್ನಾಟಕ ಸಂಘ ಭವನದಲ್ಲಿ ವಿಶಿಷ್ಟ ಕಾರ್ಯಕ್ರಮ ಒಂದನ್ನು ಹಮ್ಮಿಕೊಳ್ಳಲಾಗಿದೆ.

“ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ” ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ತಾಯಿಯ ಕುರಿತಾದ ಹಲವು ರೀತಿಯ ಅಭಿವ್ಯಕ್ತಿಗಳು ವಿವಿಧ ಗಣ್ಯರಿಂದ ಅನಾವರಣಗೊಳ್ಳಲಿವೆ.

ವೀಣಾ ಬನ್ನಂಜೆ, ಜಗದೀಶ ಶರ್ಮ ಸಂಪ, ವಸುಧೇಂದ್ರ, ಜಿ.ಎಸ್. ನಟೇಶ್, ಸಹನಾ ಚೇತನ್, ವಿಘ್ನೇಶ್ ಭಟ್ ಮೊದಲಾಗಿ ಅನೇಕ ವಿದ್ವಾಂಸರು ಅಮ್ಮನ ಕುರಿತಾದ ತಮ್ಮ ಚಿಂತನೆಗಳನ್ನು ವಿವಿಧ ಆಯಾಮಗಳಲ್ಲಿ ಪ್ರಸ್ತುತ ಪಡಿಸಲಿದ್ದಾರೆ.

Karnataka Sangh Bhavan ಇಡೀ ದಿನ, ಊಟ ತಿಂಡಿ ಪಾನೀಯ ಆದಿಯಾಗಿ ಎಲ್ಲವನ್ನೂ ಒಳಗೊಂಡು ನಡೆಯುವ ಈ ಕಾರ್ಯಕ್ರಮದಲ್ಲಿ ಕಿರು ಉಪನ್ಯಾಸ, ಕಥಾ ವಾಚನ, ಕಿರುಚಿತ್ರ, ಗಮಕ, ಸಂಗೀತ, ನೃತ್ಯ ಮೊದಲಾಗಿ ಹಲವು ಪ್ರಕಾರಗಳ ಮೂಲಕ ಅಮ್ಮನನ್ನು ಕಾಣಿಸುವ ವಿಶೇಷ ಪ್ರಯತ್ನ ಮಾಡಲಾಗಿದೆ.

ಕೇವಲ ಕೆಲವೇ ಜನರು ಪಾಲ್ಗೊಳ್ಳಲು ಅವಕಾಶವಿರುವ ಈ ಕಾರ್ಯಕ್ರಮಕ್ಕೆ ಆಗಮಿಸಲು ಬಯಸುವವರು ಫೋನ್ ನಂಬರ್ 98441 53534 ಅಥವಾ 83108 76277 ಇವುಗಳನ್ನು ಸಂಪರ್ಕಿಸಿ ಕೂಡಲೇ ಹೆಸರು ನೊಂದಾಯಿಸಬೇಕಾಗಿ ಬಳಗ ವಿನಂತಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....