Thursday, March 19, 2026
Thursday, March 19, 2026

Karnataka Sangh Bhavan ಅಜೇಯ ಬಳಗದಿಂದ ವಿನೂತನ ಕಾರ್ಯಕ್ರಮ.”ಅಮ್ಮ ಎಂಬ ಅಚ್ಚರಿಗೆ ಅಕ್ಕರೆಯ ನಮನ

Date:

Karnataka Sangh Bhavan ಶಿವಮೊಗ್ಗ ನಗರದ ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಜ. 19ರ ನಾಳೆ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕರ್ನಾಟಕ ಸಂಘ ಭವನದಲ್ಲಿ ವಿಶಿಷ್ಟ ಕಾರ್ಯಕ್ರಮ ಒಂದನ್ನು ಹಮ್ಮಿಕೊಳ್ಳಲಾಗಿದೆ.

“ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ” ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ತಾಯಿಯ ಕುರಿತಾದ ಹಲವು ರೀತಿಯ ಅಭಿವ್ಯಕ್ತಿಗಳು ವಿವಿಧ ಗಣ್ಯರಿಂದ ಅನಾವರಣಗೊಳ್ಳಲಿವೆ.

ವೀಣಾ ಬನ್ನಂಜೆ, ಜಗದೀಶ ಶರ್ಮ ಸಂಪ, ವಸುಧೇಂದ್ರ, ಜಿ.ಎಸ್. ನಟೇಶ್, ಸಹನಾ ಚೇತನ್, ವಿಘ್ನೇಶ್ ಭಟ್ ಮೊದಲಾಗಿ ಅನೇಕ ವಿದ್ವಾಂಸರು ಅಮ್ಮನ ಕುರಿತಾದ ತಮ್ಮ ಚಿಂತನೆಗಳನ್ನು ವಿವಿಧ ಆಯಾಮಗಳಲ್ಲಿ ಪ್ರಸ್ತುತ ಪಡಿಸಲಿದ್ದಾರೆ.

Karnataka Sangh Bhavan ಇಡೀ ದಿನ, ಊಟ ತಿಂಡಿ ಪಾನೀಯ ಆದಿಯಾಗಿ ಎಲ್ಲವನ್ನೂ ಒಳಗೊಂಡು ನಡೆಯುವ ಈ ಕಾರ್ಯಕ್ರಮದಲ್ಲಿ ಕಿರು ಉಪನ್ಯಾಸ, ಕಥಾ ವಾಚನ, ಕಿರುಚಿತ್ರ, ಗಮಕ, ಸಂಗೀತ, ನೃತ್ಯ ಮೊದಲಾಗಿ ಹಲವು ಪ್ರಕಾರಗಳ ಮೂಲಕ ಅಮ್ಮನನ್ನು ಕಾಣಿಸುವ ವಿಶೇಷ ಪ್ರಯತ್ನ ಮಾಡಲಾಗಿದೆ.

ಕೇವಲ ಕೆಲವೇ ಜನರು ಪಾಲ್ಗೊಳ್ಳಲು ಅವಕಾಶವಿರುವ ಈ ಕಾರ್ಯಕ್ರಮಕ್ಕೆ ಆಗಮಿಸಲು ಬಯಸುವವರು ಫೋನ್ ನಂಬರ್ 98441 53534 ಅಥವಾ 83108 76277 ಇವುಗಳನ್ನು ಸಂಪರ್ಕಿಸಿ ಕೂಡಲೇ ಹೆಸರು ನೊಂದಾಯಿಸಬೇಕಾಗಿ ಬಳಗ ವಿನಂತಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...