Sunday, August 2, 2026
Sunday, August 2, 2026

Shivamogga Rangayana ಶಿವಮೊಗ್ಗ ರಂಗಾಯಣದಲ್ಲಿ ರಂಗ ಸಂಕ್ರಾಂತಿ

Date:

Shivamogga Rangayana ಶಿವಮೊಗ್ಗ ರಂಗಾಯಣ, ಸಮುದಾಯ ಹಾಗೂ ಕಡೆಕೊಪ್ಪಲು ಪತ್ರಿಷ್ಠಾನದ ಸಹಯೋಗದೊಂದಿಗೆ ಜ.20 ರಿಂದ 22 ವರೆಗೆ ಸಂಜೆ 6.30 ಕ್ಕೆ ಅಶೋಕನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗ ಸಂಕ್ರಾಂತಿ 2025 ಶಿರ್ಷೀಕೆ ಆಡಿಯಲ್ಲಿ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.
ನಾಟಕೋತ್ಸವವನ್ನು ನಾಟಕ ಅಂಕಣಕಾರರಾದ ಬಿ.ಚಂದ್ರೇಗೌಡ ಉದ್ಘಾಟಿಸಲಿದ್ದು, ರಂಗಾಯಣ ನಿರ್ದೇಶಕ ಪ್ರಸನ್ನ ಡಿ ಸಾಗರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮುದಾಯದ ಕಾರ್ಯದರ್ಶಿ ಡಾ.ಕೆ.ಜಿ.ವೆಂಕಟೇಶ್, ಕಡೆಕೊಪ್ಪಲ ಪ್ರತಿಷ್ಠಾನದ ಮ್ಯಾನೆಜಂಗ್ ಟ್ರಸ್ಟಿ ಡಾ.ಕೆ.ಮಧುಸೂಧನ್ ಆಗಮಿಸಲಿದ್ದು, ರಂಗಾಯಣ ಅಡಳಿತಾಧಿಕಾರಿ ಡಾ.ಎ.ಸಿ.ಶೈಲಜಾ ಉಪಸ್ಥಿತರಿರುವರು.
Shivamogga Rangayana ಜ.20 ರ ಸಂಜೆ 6.30ಕ್ಕೆ ಬೆಂಗಳೂರಿನ ಅನೇಕತಂಡದಿಂದ ‘ಅಂಗವಿಲ್ಲದ ದೇಹದಲ್ಲಿ ಭಂಗೀಹುಳ ನಾಟಕ ನಡೆಯಲಿದ್ದು, ನಾಟಕದ ಮೂಲ ಕೆ.ಟಿ.ಗಟ್ಟಿ, ಮರುರಚನೆ ಹಾಗೂ ನಿರ್ದೇಶನ ಪರಿಕಲ್ಪನೆ ಸುರೇಶ ಆನಗಳ್ಳಿ, ಸಂಗೀತ ಭರತ್, ಸಹ ನಿರ್ದೇಶನ ಅಂಜನಾ.
ಜ.21 ರ ಸಂಜೆ 6.30ಕ್ಕೆ ನಿರ್ದಿಗಂತ ತಂಡದಿಂದ ‘ರಸೀದಿ ಟಿಕೇಟ್’ ನಾಟಕ ನಡೆಯಲಿದ್ದು, ನಾಟಕದ ಮೂಲ ಅಮೃತಾ ಪ್ರೀತಂ, ರಚನೆ ಸುಧಾ ಆಡುಕಳ, ಅಭಿಯನ ಶಾಲೋಮ್ ಸುನ್ನತ, ವಿನ್ಯಾಸ ಹಾಗೂ ನಿರ್ದೇಶನ ಡಾ.ಸವಿತಾರಾಣಿ, ಕಲೆ ಖಾಜುಗುತ್ತಲ, ಸಂಗೀತ ಮುನ್ನ ಮೈಸೂರು.
ಜ.22 ರ ಸಂಜೆ 6.30ಕ್ಕೆ ಮಣಿಪಾಲಿನ ಸಂಗಮ ಕಲಾವಿದರ ತಂಡದಿಂದ ನಿರಂಜನರ ಕಾದಂಬರಿಯ ರಂಗರೂಪ ‘ಮೃತ್ಯುಂಜಯ’ ನಾಟಕ ನಡೆಯಲಿದ್ದು, ರಂಗರೂಪ ಸಚಿನ್ ಅಂಕೋಲ, ನಿರ್ದೇಶನ ರೋಹಿತ್ ಎಸ್ ಬೈಕಾಡಿ ಮಾಡಿದ್ದಾರೆ. ಪ್ರತಿ ನಾಟಕಕ್ಕೂ ರೂ. 30 ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...