Friday, June 13, 2025
Friday, June 13, 2025

Indian Medical Association ಸಹಾಯ ಅಗತ್ಯವಿರುವವರಿಗೆ ಸಿಪಿಆರ್ ನೀಡುವ ಬಗ್ಗೆ ಯುವಕರು ಅರಿವು ಹೊಂದಿರಬೇಕು-ಡಾ.ಅನುಪ್

Date:

Indian Medical Association ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ತುರ್ತು ಸಂದರ್ಭದಲ್ಲಿ ಅವಶ್ಯಕ ವ್ಯಕ್ತಿಗೆ ಸಹಾಯ ಮಾಡುವ ಬದಲಾಗಿ
ಮೊಬೈಲ್ ನಲ್ಲಿ ವಿಡಿಯೋ ಫೋಟೋ ಮಾಡುವುದು ಹೆಚ್ಚಾಗಿದ್ದು ಯುವಕರು ಈ ಕೆಲಸವನ್ನು ಮಾಡದೆ ಸಹಾಯ ಬೇಕಾಗಿರುವ ವ್ಯಕ್ತಿಗೆ ಸಿಪಿಆರ್ ನೀಡುವ ಮುಖಾಂತರ ನೆರವಾಗಬೇಕು ಎಂದು ಡಾ ಅನುಪ್ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿವಮೊಗ್ಗ ಇವರ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಸಿಪಿಆರ್ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
Indian Medical Association ಪ್ರತಿಯೊಬ್ಬ ಕ್ರೀಡಾಪಟು ಮತ್ತು ತರಬೇತಿದಾರ ಸಿಪಿಆರ್ ಜ್ಞಾನ ಪಡೆದುಕೊಳ್ಳುವುದು ಬಹಳ ಉಪಯುಕ್ತ ವಾಗಿದ್ದು ತುರ್ತು ಸಂದರ್ಭದಲ್ಲಿ ಅವಶ್ಯಕ ವ್ಯಕ್ತಿಗೆ ನೆರವಾಗುವ ನಿಟ್ಟಿನಲ್ಲಿ ಸಿ ಪಿ ಆರ್ ಜ್ಞಾನ ಮುಖ್ಯವಾಗಿದ್ದು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಸಿಪಿಆರ್ ಕಾರ್ಯಗಾರ ಆಯೋಜನೆ ಬಹಳ ಅರ್ಥಪೂರ್ಣವಾಗಿದೆ ಎಂದರು ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿವಮೊಗ್ಗದ ಮಾಜಿ ಅಧ್ಯಕ್ಷರಾದ ಡಾ ಅರುಣ್ ಮತ್ತು ಐಎಂಎ ಶಿವಮೊಗ್ಗದ ಕಾರ್ಯದರ್ಶಿ ಡಾ ವಿನಯ ಶ್ರೀನಿವಾಸ್ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್
ಅಧ್ಯಕ್ಷ ಮುಕೀಬ್ ಅಹಮದ್ , ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ , ಖಜಾಂಚಿ ಇರ್ಫಾನ್ ಮತ್ತು ಜಿಲ್ಲಾ ಕರಾಟೆ ಅಸೋಸಿಯೇಷನ್ ಪದಾಧಿಕಾರಿಗಳಾದ ಬಾಲ್ರಾಜ್ ಪಂಚಪ್ಪ ಹರೀಶ್ ನರಸಿಂಹಸ್ವಾಮಿ ಕೃಷ್ಣಮೂರ್ತಿ ರಮೇಶ್ ಸಾಧಿಕ್ ಮಧುಕೇಶ್ವರ್ ಹರ್ಷಿತ್ ದಸ್ತಗೀರ ಮದನಿ ಸೇರಿದಂತೆ ಸದಸ್ಯರಾದ ಮದಿಹಾ ಇಬ್ರಾಹಿಂ ಶ್ರಾವ್ಯ ಪ್ರತಿಕ್ಷ ಪ್ರೀತಿಶ್ರೀ ಕಾವ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...