Sunday, December 7, 2025
Sunday, December 7, 2025

Indian Medical Association ಸಹಾಯ ಅಗತ್ಯವಿರುವವರಿಗೆ ಸಿಪಿಆರ್ ನೀಡುವ ಬಗ್ಗೆ ಯುವಕರು ಅರಿವು ಹೊಂದಿರಬೇಕು-ಡಾ.ಅನುಪ್

Date:

Indian Medical Association ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ತುರ್ತು ಸಂದರ್ಭದಲ್ಲಿ ಅವಶ್ಯಕ ವ್ಯಕ್ತಿಗೆ ಸಹಾಯ ಮಾಡುವ ಬದಲಾಗಿ
ಮೊಬೈಲ್ ನಲ್ಲಿ ವಿಡಿಯೋ ಫೋಟೋ ಮಾಡುವುದು ಹೆಚ್ಚಾಗಿದ್ದು ಯುವಕರು ಈ ಕೆಲಸವನ್ನು ಮಾಡದೆ ಸಹಾಯ ಬೇಕಾಗಿರುವ ವ್ಯಕ್ತಿಗೆ ಸಿಪಿಆರ್ ನೀಡುವ ಮುಖಾಂತರ ನೆರವಾಗಬೇಕು ಎಂದು ಡಾ ಅನುಪ್ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿವಮೊಗ್ಗ ಇವರ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಸಿಪಿಆರ್ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
Indian Medical Association ಪ್ರತಿಯೊಬ್ಬ ಕ್ರೀಡಾಪಟು ಮತ್ತು ತರಬೇತಿದಾರ ಸಿಪಿಆರ್ ಜ್ಞಾನ ಪಡೆದುಕೊಳ್ಳುವುದು ಬಹಳ ಉಪಯುಕ್ತ ವಾಗಿದ್ದು ತುರ್ತು ಸಂದರ್ಭದಲ್ಲಿ ಅವಶ್ಯಕ ವ್ಯಕ್ತಿಗೆ ನೆರವಾಗುವ ನಿಟ್ಟಿನಲ್ಲಿ ಸಿ ಪಿ ಆರ್ ಜ್ಞಾನ ಮುಖ್ಯವಾಗಿದ್ದು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಸಿಪಿಆರ್ ಕಾರ್ಯಗಾರ ಆಯೋಜನೆ ಬಹಳ ಅರ್ಥಪೂರ್ಣವಾಗಿದೆ ಎಂದರು ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿವಮೊಗ್ಗದ ಮಾಜಿ ಅಧ್ಯಕ್ಷರಾದ ಡಾ ಅರುಣ್ ಮತ್ತು ಐಎಂಎ ಶಿವಮೊಗ್ಗದ ಕಾರ್ಯದರ್ಶಿ ಡಾ ವಿನಯ ಶ್ರೀನಿವಾಸ್ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್
ಅಧ್ಯಕ್ಷ ಮುಕೀಬ್ ಅಹಮದ್ , ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ , ಖಜಾಂಚಿ ಇರ್ಫಾನ್ ಮತ್ತು ಜಿಲ್ಲಾ ಕರಾಟೆ ಅಸೋಸಿಯೇಷನ್ ಪದಾಧಿಕಾರಿಗಳಾದ ಬಾಲ್ರಾಜ್ ಪಂಚಪ್ಪ ಹರೀಶ್ ನರಸಿಂಹಸ್ವಾಮಿ ಕೃಷ್ಣಮೂರ್ತಿ ರಮೇಶ್ ಸಾಧಿಕ್ ಮಧುಕೇಶ್ವರ್ ಹರ್ಷಿತ್ ದಸ್ತಗೀರ ಮದನಿ ಸೇರಿದಂತೆ ಸದಸ್ಯರಾದ ಮದಿಹಾ ಇಬ್ರಾಹಿಂ ಶ್ರಾವ್ಯ ಪ್ರತಿಕ್ಷ ಪ್ರೀತಿಶ್ರೀ ಕಾವ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...