Wednesday, June 25, 2025
Wednesday, June 25, 2025

Shivamogga Rotary Club ಇತ್ತೀಚಿನ ಜೀವನ ಶೈಲಿ,ಆರೋಗ್ಯ ಕ್ರಮ & ಆನುವಂಶೀಯತೆಯಿಂದ ಕಣ್ಣಿನ ಸಮಸ್ಯೆ ಉದ್ಭವ- ಡಾ.ಎಂ.ಜೆ.ದೀಪಾ

Date:


Shivamogga Rotary Club ಕಣ್ಣುಗಳು ಮನುಷ್ಯನಾ ದೇಹದ ಪ್ರಮುಖ ಅಂಗ ಕಣ್ಣುಗಳನ್ನು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಅಗತ್ಯ ನಮ್ಮ ಒತ್ತಡದ ಜೀವನದಲ್ಲಿ ಕಣ್ಣುಗಳನ್ನು ನಾವು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಅದರಲ್ಲೂ ಮಧುಮೇಹ ಇರುವವರು ಕನಿಷ್ಠ ಆರು ತಿಂಗಳಿಗೊಮ್ಮೆ ಆದರೂ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ ಇತ್ತೀಚಿನ ಜೀವನ ಶೈಲಿ ಆರೋಗ್ಯ ಕ್ರಮ ಹಾಗೂ ಅಣುವಂಶಿಯತೆಯಿಂದ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆದ್ದರಿಂದ ನಾವುಗಳು ಕಣ್ಣುಗಳನ್ನ ಸರಿಯಾಗಿ ಕಾಪಾಡಿಕೊಳ್ಳಬೇಕು ಎಂದು ಆದರ್ಶ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ಪ್ರಖ್ಯಾತ ಕಣ್ಣಿನ ವೈದ್ಯರಾದ ಡಾಕ್ಟರ್ ದೀಪ ಎಂಜೆ ಅಭಿಮತ ವ್ಯಕ್ತಪಡಿಸಿದರು.

ಶಿವಮೊಗ್ಗ ರೋಟರಿ ಕ್ಲಬ್ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಲ್ ಬಿ ಎಸ್ ನಗರದಲ್ಲಿರುವ ಶಿವಮೊಗ್ಗ ರೋಟರಿ ಕ್ಲಬ್ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಸದಸ್ಯರಿಗೆ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಆರೋಗ್ಯದ ಜಾಗೃತಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು ನಾವು ಬಾಲ್ಯದಲ್ಲೇ ಮಕ್ಕಳಿಗೂ ಸಹ ಕಣ್ಣಿನ ತಪಾಸಣೆ ಮಾಡುವುದರಿಂದ ಮುಂದೆ ಆಗುವ ತೊಂದರೆಗಳನ್ನು ತಪ್ಪಿಸಬಹುದು ಎಂದ ಅವರು ಗ್ಲುಕೋಮಾದಂತ ಕಾಯಿಲೆಗಳನ್ನ ಬಾರದಂತೆ ನೋಡಿಕೊಳ್ಳಲು ಕಣ್ಣಿನ ಸಂರಕ್ಷಣೆ ಅಗತ್ಯ ಎಂದು ನುಡಿದರು.

Shivamogga Rotary Club ಇದೇ ಸಂದರ್ಭದಲ್ಲಿ ವಿಶ್ರಾಂತ ನೌಕರರ ಸಂಘದ ಅಧ್ಯಕ್ಷರಾದ ರವಿಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ಕೆ ಸೂರ್ಯನಾರಾಯಣ ಉಡುಪ ಅವರು ವಹಿಸಿ ಮಾತನಾಡುತ್ತಾ ನಮ್ಮ ದೇಹದಲ್ಲಿ ಕಣ್ಣು ತುಂಬಾ ಪ್ರಧಾನವಾದದ್ದು ಕಣ್ಣು ಇಲ್ಲದಿದ್ದರೆ ಪ್ರಪಂಚವೇ ಶೂನ್ಯ ಈ ನಿಟ್ಟಿನಲ್ಲಿ ನಾವುಗಳು ಅದರಲ್ಲೂ ಹಿರಿಯ ನಾಗರಿಕರುಗಳು ಸಕಾಲದಲ್ಲಿ ಆರೋಗ್ಯ ತಪಾಸಣೆಯ ಜೊತೆಗೆ ಕಣ್ಣಿನ ತಪಾಸಣೆಯು ಕೂಡ ಅಗತ್ಯವಾಗಿ ಮಾಡಿಸಿಕೊಳ್ಳಲೇಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನ ಸದಸ್ಯರಿಗೂ ಹಾಗೂ ಸಾರ್ವಜನಿಕರಿಗೆ ಡಾ. ದೀಪ ಎಮ್ ಜೆ ಅವರು ಕಣ್ಣಿನ ತಪಾಸಣೆ ನಡೆಸಿ. ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಉಷಾ ಏನ್ ಜಿ. ಪದಾಧಿಕಾರಿಗಳಾದ ಎನ್ ವಿ
ಭಟ್ ಹಾಗೂ ಮುಖ್ಯ ಅತಿಥಿಗಳಾದ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಪ್ಪ.ಕಾರ್ಯದರ್ಶಿ ಶ್ರೀಕಾಂತ್. ಕಿಶೋರ್ ಶಿರ್ನಾಲಿ.ವಿಜಿ ಹೆಗಡೆ. ಗಾಯಿತ್ರಿ. ಸುಮತಿಂದ್ರ. ಹಾಗೂ ರೋಟರಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Gurudatta Hegde ಅತ್ಯಾಧುನಿಕ ತಂತ್ರಾಂಶವನ್ನು ಅರಿತು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಿ : ಗುರುದತ್ತ ಹೆಗಡೆ

Gurudatta Hegde ನಾಗಾಲೋಟದಲ್ಲಿ ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಸರ್ಕಾರವು ಸುಗಮ ಆಡಳಿತಕ್ಕೆ...

MESCOM ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜೂ.26 ರಂದು ಬೆಳಿಗ್ಗೆ...

Backward Classes Welfare Department ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ...

Department of Horticulture ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Department of Horticulture ಭದ್ರಾವತಿ ತಾಲೂಕು ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ...