Thursday, March 19, 2026
Thursday, March 19, 2026

Karnataka Rakshana Vedike ಕನ್ನಡಿಗರೇ “ವಿಸಿಟಿಂಗ್ ಕಾರ್ಡ್” ಆಗಿ ಕನ್ನಡದ ಕೆಲಸ ಮಾಡಬೇಕು-ಎಚ್.ಎಸ್.ಕಿರಣ್ ಕುಮಾರ್

Date:

Karnataka Rakshana Vedike ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಶಿಕಾರಿಪುರ ತಾಲೂಕು ಘಟಕ ಉದ್ಘಾಟನೆಯನ್ನು
ನಗರದ ಸುದ್ದಿ ಮನೆ ಪತ್ರಿಕಾ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ನಡೆಸಲಾಯಿತು.

ಸ್ವಾಭಿಮಾನಿ ಬಣ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ರವರು ಕಾರ್ಯಕರ್ತರು ಮತ್ತು ಪದಾಧಿಕಾರಿಗಳನ್ನು ಉದ್ದೇಶಿಸಿ
ನಾವು ವಿಸಿಟಿಂಗ್ ಕಾರ್ಡ್ ಕೊಟ್ಟು ಗೊತ್ತಾಗುವ ರೀತಿ ಇರಬಾರದು ನಾವೇ ವಿಸಿಟಿಂಗ್ ಕಾರ್ಡ್ ಅನ್ನುವ ರೀತಿ ಕನ್ನಡ
ನಾಡು-ನುಡಿ ನೆಲ ಜಲ ಸಂಸ್ಕೃತಿ ಕಾರ್ಮಿಕ ರೈತ ಮಹಿಳೆಯರ ಪರ ವಿದ್ಯಾರ್ಥಿಪರ ಶೋಷಿತರ ಕನ್ನಡ ಪರ ಸಂಘಟನೆ ಹೋರಾಟ ಮಾಡಿರಿ ಎಂದು ಜಿಲ್ಲಾಧ್ಯಕ್ಷರು ಕಿರಣ್ ಕುಮಾರ್ ಹೆಚ್.ಎಸ್. ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕಾರಿಣಿ ರಾಜ್ಯ ಸದಸ್ಯ . ಎನ್. ವಿ. ಈರೇಶ್. ಮಾತನಾಡಿ ಹಿಂದೆ ಒಟ್ಟು ಕುಟುಂಬ ಇರುತ್ತಿದ್ದವು ಈಗ ಸಂಘಟನೆಗಳೇ ಕುಟುಂಬಗಳಾಗಿವೆ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸ್ನೇಹಕ್ಕನವರು ಮಾತನಾಡಿ. ಆತ್ಮ ಪರಮಾತ್ಮ ನಮ್ಮ ಒಗ್ಗಟ್ಟು ಜೀವನದ ಮೌಲ್ಯ ಎಲ್ಲವನ್ನು ಅರಿತು ಕರ್ನಾಟಕ ರಕ್ಷಣೆ ಮಾಡುವ ಸಂಘಟನೆಯಾಗಿದ್ದು ಶಿಕಾರಿಪುರ ರಾಜ್ಯಮಟ್ಟಕ್ಕೆ ಹೆಸರು ತರುವ ಕೀರ್ತಿ ಮಾಡಿರಿ ಎಂದು ಹಿತವಚನ ನೀಡಿದರು.

Karnataka Rakshana Vedike ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್, ಮಾಲತೇಶ್ .ಮಾಧ್ಯಮ ಸಲಹೆಗಾರರು ಅನಿಲ್ ಕುಮಾರ್ ಜಿಲ್ಲಾ ಪದಾಧಿಕಾರಿಗಳು ವಿಜಯಕುಮಾರ್ ರಾಮು ನೂರುಲ್ಲಾ ಖಾನ್ ಮಹಮ್ಮದ್ ಶಫಿ ಗಣೇಶ್ ಪರಮೇಶ್ ಇವರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ .ಶಿವಯ್ಯ ಎನ್ ಶಾಸ್ತ್ರಿ ಮುಖ್ಯ ಸಲಹೆಗಾರರು ಗೌರವಾಧ್ಯಕ್ಷರು. ತಾಲೂಕು ಅಧ್ಯಕ್ಷರು ಆನಂದ ಹೆಚ್. ತಾಲೂಕು ಮಹಿಳಾ ಅಧ್ಯಕ್ಷ ನೇತ್ರಾವತಿ ನಾಗರಾಜ್ ಉಪಾಧ್ಯಕ್ಷರಾದ ಗುತ್ತಿ ಕನ್ನಪ್ಪ ಕಾರ್ಯದರ್ಶಿ ಮಾಲತೇಶ್ ಕಾರ್ಯ ಅಧ್ಯಕ್ಷ ಸುನಿಲ್ ಬನ್ನೂರ್ ಶಿವರಾಜ ಪಾಟೀಲ್ ಪರಶುರಾಮ್ ಸಂತೋಷ್ ನಗರ ಗೌರವಾಧ್ಯಕ್ಷ ಮುಕ್ತರ್ ಅಹಮದ್ ನಗರ ಅಧ್ಯಕ್ಷ ರವೀಂದ್ರ ಕುಮಾರ್ ಆರಿಫುಲ್ಲ ವೀರೇಶ್ ಸುಮಂತ್ ಗ್ರಾಮಾಂತರ ಅಧ್ಯಕ್ಷ ಶಂಭುಲಿಂಗಪ್ಪ ರಾಜು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...