Thursday, March 19, 2026
Thursday, March 19, 2026

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Date:

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಿಜೆಪಿಗೆ ಭಾರೀ ಸಂತೋಷ ತಂದಿದೆ. ಶಿವಸೇನೆಯ ಇಬ್ಭಾಗ ಮತ್ತು ಸದ್ಯದ ರಾಜಕೀಯ ವಿದ್ಯಮಾನಗಳಿಂದ
“ಮಹಾ” ಚುನಾವಣೆ ದೊಡ್ಡ ಕುತೂಹಲ ಉಂಟುಮಾಡಿತ್ತು.
ಏಕನಾಥ ಶಿಂಧೆ ಅವರ” ಸಿಎಂ ಗಿರಿ”ಗೆ ಈ ಬಾರಿ ಮತದಾರ ಭಾರೀ ಮಣೆ ಹಾಕಿದ್ದಾನೆ. ಹಲವಾರು ಜನಪರ ಯೋಜನೆಗಳಿಂದ ಶಿಂಧೆ ಒಂದು ಕೈ ಮೇಲೆ ಇದ್ದರು. ಉದ್ಧವ್ ಠಾಕ್ರೆ ಅವರ ಚಂಚಲಿತ ನಿಲುವು, ಕಾಂಗ್ರೆಸ್, ಶರದ್ ಪವಾರ್ ಅವರ ಎನ್ ಸಿ ಪಿ‌ ಇವುಗಳ ನಡುವೆ ಭದ್ರ ಬೆಸುಗೆಯ ಕೊರತೆಯಿಂದ ಶಿಂಧೆ ಬಣದ ಶಿವಸೇನೆ ಮತ್ತು ಮೋದಿಯವರ ಮೋಡಿ ಮತ್ತೆ “ಲಕ್ “
ಸಿಗುವಂತೆ ಮಾಡಿದೆ.
Maharashtra Election ಈಗಾಗಲೇ 218 ಸ್ಥಾನ ಗಳಿಸಿ ನಿಚ್ವಳ ಬಹುಮತ ಪಡೆದ ಮಹಾಯುತಿ ಒಕ್ಕೂಟ ಮತ್ತೆ ಮಹಾರಾಷ್ಟ್ರದ ಗದ್ದುಗೆ ಹಿಡಿಯುವಲ್ಲಿ
ಸಫಲವಾಗಿದೆ. ಇನ್ನೂ ಎಣಿಕೆ ಪೂರ್ಣವಾಗಿಲ್ಲದಿದ್ದರೂ ಮತ ಎಣಿಕೆಯ
ಟ್ರೆಂಡ್ ನಲ್ಲಿ ಮಹಾಯುತಿಗೆ ಬಹುಮತ ಸಾಬೀತಾಗಿದೆ.ಬಹಳ ಭರವಸೆ ಇರಿಸಿಕೊಂಡಿದ್ಧ ಕಾಂಗ್ರೆಸ್ ಇರುವ ಮಹಾ ವಿಕಾಸ ಅಘಾಡಿ ಗೆ ಒಂದು ಥರ ಪಾರ್ಶ್ವವಾಯು ಬಡಿದಂತಾಗಿದೆ. ಅಭ್ಯರ್ಥಿಗಳ ಆಯ್ಕೆ, ಪರಸ್ಪರ ಸ್ಥಾನ ಹೊಂದಾಣಿಕೆ ಇವುಗಳಲ್ಲಿ ಮೀನಮೇಷ ಎಣಿಸಿದ್ದರ ಫಲ ಅಘಾಡಿಗೆ ಹಿನ್ನೆಡೆ ಎಂದು ಪರಿಣಿತರ ಲೆಕ್ಕಾಚಾರ. ಪೂರ್ಣ ಸ್ಥಾನಗಳ ಮಾಹಿತಿ ಇನ್ನೂ ಬಂದಿಲ್ಲ.
ಆದರೂ ಎಣಿಕೆ ಸುತ್ತು ಕಡಿಮೆಯಿರುವ ಹಿನ್ನೆಲೆಯಲ್ಲಿ ಮಹಾಯುತಿಗೆ ಜಯಭೇರಿ ಎನ್ನುವುದಕ್ಕೆ ಸಂದೇಹವಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...