Monday, February 2, 2026
Monday, February 2, 2026

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Date:

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಿಜೆಪಿಗೆ ಭಾರೀ ಸಂತೋಷ ತಂದಿದೆ. ಶಿವಸೇನೆಯ ಇಬ್ಭಾಗ ಮತ್ತು ಸದ್ಯದ ರಾಜಕೀಯ ವಿದ್ಯಮಾನಗಳಿಂದ
“ಮಹಾ” ಚುನಾವಣೆ ದೊಡ್ಡ ಕುತೂಹಲ ಉಂಟುಮಾಡಿತ್ತು.
ಏಕನಾಥ ಶಿಂಧೆ ಅವರ” ಸಿಎಂ ಗಿರಿ”ಗೆ ಈ ಬಾರಿ ಮತದಾರ ಭಾರೀ ಮಣೆ ಹಾಕಿದ್ದಾನೆ. ಹಲವಾರು ಜನಪರ ಯೋಜನೆಗಳಿಂದ ಶಿಂಧೆ ಒಂದು ಕೈ ಮೇಲೆ ಇದ್ದರು. ಉದ್ಧವ್ ಠಾಕ್ರೆ ಅವರ ಚಂಚಲಿತ ನಿಲುವು, ಕಾಂಗ್ರೆಸ್, ಶರದ್ ಪವಾರ್ ಅವರ ಎನ್ ಸಿ ಪಿ‌ ಇವುಗಳ ನಡುವೆ ಭದ್ರ ಬೆಸುಗೆಯ ಕೊರತೆಯಿಂದ ಶಿಂಧೆ ಬಣದ ಶಿವಸೇನೆ ಮತ್ತು ಮೋದಿಯವರ ಮೋಡಿ ಮತ್ತೆ “ಲಕ್ “
ಸಿಗುವಂತೆ ಮಾಡಿದೆ.
Maharashtra Election ಈಗಾಗಲೇ 218 ಸ್ಥಾನ ಗಳಿಸಿ ನಿಚ್ವಳ ಬಹುಮತ ಪಡೆದ ಮಹಾಯುತಿ ಒಕ್ಕೂಟ ಮತ್ತೆ ಮಹಾರಾಷ್ಟ್ರದ ಗದ್ದುಗೆ ಹಿಡಿಯುವಲ್ಲಿ
ಸಫಲವಾಗಿದೆ. ಇನ್ನೂ ಎಣಿಕೆ ಪೂರ್ಣವಾಗಿಲ್ಲದಿದ್ದರೂ ಮತ ಎಣಿಕೆಯ
ಟ್ರೆಂಡ್ ನಲ್ಲಿ ಮಹಾಯುತಿಗೆ ಬಹುಮತ ಸಾಬೀತಾಗಿದೆ.ಬಹಳ ಭರವಸೆ ಇರಿಸಿಕೊಂಡಿದ್ಧ ಕಾಂಗ್ರೆಸ್ ಇರುವ ಮಹಾ ವಿಕಾಸ ಅಘಾಡಿ ಗೆ ಒಂದು ಥರ ಪಾರ್ಶ್ವವಾಯು ಬಡಿದಂತಾಗಿದೆ. ಅಭ್ಯರ್ಥಿಗಳ ಆಯ್ಕೆ, ಪರಸ್ಪರ ಸ್ಥಾನ ಹೊಂದಾಣಿಕೆ ಇವುಗಳಲ್ಲಿ ಮೀನಮೇಷ ಎಣಿಸಿದ್ದರ ಫಲ ಅಘಾಡಿಗೆ ಹಿನ್ನೆಡೆ ಎಂದು ಪರಿಣಿತರ ಲೆಕ್ಕಾಚಾರ. ಪೂರ್ಣ ಸ್ಥಾನಗಳ ಮಾಹಿತಿ ಇನ್ನೂ ಬಂದಿಲ್ಲ.
ಆದರೂ ಎಣಿಕೆ ಸುತ್ತು ಕಡಿಮೆಯಿರುವ ಹಿನ್ನೆಲೆಯಲ್ಲಿ ಮಹಾಯುತಿಗೆ ಜಯಭೇರಿ ಎನ್ನುವುದಕ್ಕೆ ಸಂದೇಹವಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...