Sunday, June 22, 2025
Sunday, June 22, 2025

Kannada short film ಕಿರುಚಿತ್ರ ನಿರ್ದೇಶಕ ವರಪ್ರಸಾದ್ ಶರ್ಮಾರಿಗೆ ‘ ಕನ್ನಡ ಕೌಸ್ತುಭ’ ಪ್ರಶಸ್ತಿ ಪ್ರದಾನ

Date:

Kannada short film ಕಿರುಚಿತ್ರ ನಿರ್ದೇಶಕ ವರಪ್ರಸಾದ್ ಶರ್ಮಾರವರಿಗೆ “ಕನ್ನಡ ಕೌಸ್ತುಭ” ಪ್ರಶಸ್ತಿ ಪ್ರಧಾನ ಶಿವಮೊಗ್ಗ : ಕಿರುಚಿತ್ರ, ಹೊಸ ಬಿಡುಗಡೆಯ ಸಿನಿಮಾಗಳ ಬಗ್ಗೆ ವೀಕ್ಷಕ ಸಮುದಾಯದ ರಿವ್ಹೀವ್ಸ್, ಉದ್ಯಮಗಳ ಪ್ರಮೋಷನ್ಸ್, ಹೀಗೆ ಸದಭಿರುಚಿಯ ಕಿರುತೆರೆಯ ಹಿಂದಿನ ನಿರ್ದೇಶಕ, ಸಂಭಾಷಣೆ, ಸಂಕಲನ ರೂವಾರಿಯಾಗಿ ಅದರ ನಿರ್ಮಾಣ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸಬ್ ಸ್ಕೈಬರ್ ಹೊಂದಿರುವ ಯುವ ಮುಂದಾಳು ವರಪ್ರಸಾದ್ ಶರ್ಮಾರವರಿಗೆ “ಗಾರಾ ಫೌಂಡೇಶನ್” ನಿಂದ ನೀಡಲಾಗುವ “ಕನ್ನಡ ಕೌಸ್ತುಭ” ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮೊದಲಿಗೆ ಕನ್ನಡದ ಧ್ವಜ ಭಾವುಟವನ್ನು ನಟ ರಘುರಾಜ್ ಮಲ್ನಾಡ್ ರವರು ಆಹ್ವಾನಿಸಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ನಗರದ ಉದ್ಯಮಿಗಳಾದ ಉಮಾಕಾಂತ್ ರವರು ಕನ್ನಡ ಧ್ವಜಕ್ಕೆ ಪುಷ್ಪವನ್ನು ಅರ್ಪಿಸುವುದರ ಮುಖೇನ ನೆರವೇರಿಸಿದರು, ಅವರು ಈ ಸಂದರ್ಭದಲ್ಲಿ ಮಾತಾನಾಡಿ ಸಾಹಿತ್ಯ, ಪತ್ರಿಕಾ ಹಾದಿ, ಸೇವೆಯ ಹಾದಿಯಲ್ಲಿ ನಡೆವುದು ಬಲು ಅಸಾಧ್ಯ ಆದರೂ ಅದನ್ನು ಸಂಘಟಿಸುತಲಿ ಸಾಗುತ್ತಿರುವುದು ಶ್ಲಾಘನೀಯ, ವರಪ್ರಸಾದ್ ಶರ್ಮಾ ಇನ್ನೂ ಬೆಳೆಯುತ್ತಿರುವ ಯುವಕ ಬಿಡುವಿಲ್ಲದೆ ಕಿರುಚಿತ್ರಗಳ ಬಗ್ಗೆ, ಎಡಿಟಿಂಗ್, ಸಿನಿಮಾಗಳ ಕುರಿತಂತೆ ಇರುವ ಆಸಕ್ತಿ Kannada short film ನಿಜಕ್ಕೂ ಮೆಚ್ಚುವಂತಹದ್ದಾಗಿದ್ದು ಈ ಪ್ರಶಸ್ತಿ ಅವರಿಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸುವಂತೆ ಮಾಡಿದೆ, ಮುಂದೆ ಕರುನಾಡಿನಲ್ಲಿ ಶ್ರೇಷ್ಟ ನಿರ್ದೇಶಕನಾಗಿ ಹೊರಹೊಮ್ಮಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ನಟ ರಘುರಾಜ್ ಮಲ್ನಾಡ್, ಅನಿಲ್ ವರ್ಣೇಕರ್, ಚಾಂದೂ, ರಾಮಣ್ಣ, ಗಾರಾ ಫೌಂಡೇಶನ್ ನ ಮ್ಯಾನೇಜ್ಮೆಂಟ್ ಟ್ರಸ್ಟಿ ಗಾರಾ.ಶ್ರೀನಿವಾಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರಪ್ರಸಾದ್ ಕುಟುಂಬದವರು ಹಾಗೂ ನೆರೆಹೊರೆಯವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...