Tuesday, February 3, 2026
Tuesday, February 3, 2026

Chamber of Commerce Shivamogga ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೀಗ ಶಿವಮೊಗ್ಗದಲ್ಲಿ “ಪ್ರಾಣಶಕ್ತಿ ಚಿಕಿತ್ಸಾ ಕಾರ್ಯಾಗಾರ

Date:

Chamber of Commerce Shivamogga ಯಾವುದೇ ಬಗೆಯ ಮಾನಸಿಕ ಹಾಗೂ ದೈಹಿಕ ಸಂಬಂಧದ ಆರೋಗ್ಯ ಸಮಸ್ಯೆಗಳಿಗೆ ಡಾ. ಲತಾಶೇಖರ್ ಅವರು ಕಳೆದ ಎರಡು ದಶಕಗಳಿಂದ ನಿಖರ ಫಲಿತಾಂಶದ ಭಾರತೀಯ ಪ್ರಾಚೀನ ಪರಂಪರೆಯ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆಗಳನ್ನು ಒದಗಿಸಿ ಜನಸಾಮಾನ್ಯರಿಗೆ ರಾಸಾಯನಿಕ ಮಾತ್ರೆ-ಔಷಧಮುಕ್ತ ಜೀವನಶೈಲಿಯನ್ನು ಕಲ್ಪಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 10 ರಂದು ಪ್ರಪ್ರಥಮ ಬಾರಿಗೆ ಡಾ. ಲತಾಶೇಖರ್ ಅವರ ಒಂದು ದಿನದ ಚಿಕಿತ್ಸಾ ಕಾರ್ಯಗಾರವನ್ನು ಶಿವಮೊಗ್ಗ ನಗರದ ಚೇಂಬರ್ ಆಫ್ ಕಾಮಸ್೯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಗಾರದಲ್ಲಿ ದೇಹ ಮತ್ತು ಮನಸ್ಸನ್ನು ಕ್ರೋಢೀಕರಿಸುವ ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಮುದ್ರಾ ಸಹಿತ ವಿವಿಧ ಬಗೆಯ ಪರ್ಯಾಯ ಚಿಕಿತ್ಸಾ ಕ್ರಮಗಳನ್ನು ಪ್ರಯೋಗ ಮಾಡಲಾಗುವುದು.

Chamber of Commerce Shivamogga ನಿಮ್ಮಲ್ಲಿರುವ ಸಮಸ್ಯೆಗಳಾದ ಮಾನಸಿಕ ಖಿನ್ನತೆ, ಭಯ, ನಿದ್ರಾಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ, ನರ ದೌರ್ಬಲ್ಯ, ಅರ್ಧ ತಲೆನೋವು, ಮಂಡಿ ನೋವು, ಸ್ತ್ರೀಯರ ಎಲ್ಲಾ ಬಗೆಯ ಸಮಸ್ಯೆಗಳು, ವಯೋವೃದ್ಧರ ಯಾವುದೇ ಬಗೆಯ ಸಮಸ್ಯೆಗಳು, ಮಕ್ಕಳ ಸಮಸ್ಯೆಗಳು, ಹಾಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸರಳ ಹಾಗೂ ಸೂಕ್ತ ಚಿಕಿತ್ಸೆಯನ್ನು ಶಿಬಿರದಲ್ಲಿ ಪಡೆಯಬಹುದು.
ಸಾವ೯ಜನಿಕರು ನ್ಯಾಯವಾದ ಚಿಕಿತ್ಸಾ ಶುಲ್ಕವನ್ನು ಪಾವತಿಸಿ ಅಪರೂಪದ ಪ್ರಾಣಶಕ್ತಿ ಚಿಕಿತ್ಸಾ ಕಾರ್ಯಾಗಾರದ ನೋಂದಣಿಯನ್ನು ಮಾಡಿಕೊಳ್ಳಬಹುದು.

ಶಿಬಿರದ ವಿವರ
ದಿನಾಂಕ : 10 ನವೆಂಬರ್ ಬೆಳಿಗ್ಗೆ 8.30 ರಿಂದ ಸಂಜೆ 7 ಗಂಟೆ ವರೆಗೆ 2024 ಭಾನುವಾರ
ಸ್ಥಳ : ಛೇಂಬರ್ ಆಫ್ ಕಾಮಸ್೯ ಸಭಾಂಗಣ ಶಿವಮೊಗ್ಗ ಸಿಟಿಕ್ಲಬ್ ಹಿಂಭಾಗ
ಡಿಸ್ಟ್ರಿಕ್ಟ್ ಲೈಬ್ರರಿ ಪಕ್ಕ, ಶಿವಮೊಗ್ಗ.

ಹೆಚ್ಚಿನ ಆರೋಗ್ಯಕರ ಮಾಹಿತಿ ಹಾಗೂ ಸಲಹೆಗಳಿಗೆ ನಮ್ಮನ್ನು ಸಂಪರ್ಕಿಸಿ.
9353755841/831077452

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...