Sunday, December 14, 2025
Sunday, December 14, 2025

State karate championship ರಾಜ್ಯಮಟ್ಟದ ಜೂಡೋ ಕರಾಟೆ ಸ್ಪರ್ಧೆಯಲ್ಲಿ ಶಿಕಾರಿಪುರದ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳ ಹೆಮ್ಮೆಯ ಸಾಧನೆ

Date:

State karate championship ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಜೂಡೋ ಕ್ರೀಡಾಕೂಟದಲ್ಲಿ
ಶಿಕಾರಿಪುರದ ಡಾ.ಬಿ ಆರ್ ಅಂಬೇಡ್ಕರ್ ಪರಿಶಿಷ್ಟಜಾತಿ/ಪಂಗಡಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ೧೦ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿಪದಕಗಳನ್ನು ಗಳಿಸಿದ್ದಾರೆ. ಕರ್ನಾಟಕದಲ್ಲಿ ಜೂಡೋ ಮತ್ತು ಕರಾಟೆ ತರಭೇತಿ ನೀಡುತ್ತಿರುವ ಮೊಟ್ಟಮೊದಲ ವಿದ್ಯಾರ್ಥಿನಿಲಯ ಇದಾಗಿದ್ದು, ನಿಲಯದ ವಿದ್ಯಾರ್ಥಿಳ ಈ ಸಾಧನೆ ಶಿವಮೊಗ್ಗ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಜಿಲ್ಲಾ ಮಟ್ಟದ ಜುಡೋ ಮತ್ತು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಲಯದ ೨೦ ವಿದ್ಯಾರ್ಥಿಗಳಲ್ಲಿ ಗೌತಮ್, ಪವನ, ಅಭಿ. ಬೀರೇಶ್, ಪವನ ಕೆ. ಇವರುಗಳು ಪ್ರಥಮ ಬಹುಮಾನ ವಾಗಿ ಚಿನ್ನದ ಪದಕ ಗಳಿಸಿದ್ದರೆ, ಗಗನ್, ಉಲ್ಲಾಸ್, ವಿಘ್ನೇಶ್, ಗಣೇಶ್ ಜಾನುಲಮಾಣಿ ಮತ್ತು ಕಾರ್ತಿಕ್ ಓ. ಅವರುಗಳು ದ್ವೀತಿಯ ಸ್ಥಾನಪಡೆದು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳು ಇದೇ ತಿಂಗಳ ದಿ:೧೮, ೧೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಜೂಡೋ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿವರು.
State karate championship ಏಕಲವ್ಯ ಜೂಡೋ ಮತ್ತು ಕರಾಟೆ ತರಭೇತಿ ಸಂಸ್ಥೆಯ ಮಿಥುನ್ ಡಿ.ಬಿ ಇವರ ಸಾರಥ್ಯದಲ್ಲಿ ತರಭೇತಿ ನೀಡಲಾಗಿದ್ದು, ಕೇವಲ ಎರಡು ತಿಂಗಳ ಅವಧಿಯಲ್ಲಿ ನಮ್ಮ ನಿಲಯಾರ್ಥಿಗಳು ಎರಡು ಮೂರು ವರ್ಷಗಳಿಂದ ತರಬೇತಿ ಪಡೆದ ಎದುರಾಳಿಗಳನ್ನು ಮಣಿಸಿ ಅದ್ಭುತ ವಿಜಯ ಸಾಧಿಸಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ವಾರ್ಡನ್ ನೃಪತುಂಗಾನಾಯ್ಕ್ ಅವರು ಇದಕ್ಕೆ ಪ್ರೋತ್ಸಾಹಿಸಿದ ರಾಜ್ಯ ಸರ್ಕಾರಕ್ಕೆ , ಪೋಷಕರಿಗೆ ,ಮತ್ತು ವಿದ್ಯಾರ್ಥಿನಿಲಯದ ಅಡುಗೆ ಸಿಬ್ಬಂದಿಗಳಿಗೆ ವಿದ್ಯಾರ್ಥಿನಿಲಯ ದ ವಾರ್ಡನ್ ನೃಪತುಂಗಾನಾಯ್ಕ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...