Tuesday, March 31, 2026
Tuesday, March 31, 2026

19th Asian Selection Tournament ಏಷಿಯನ್ ಸೆಲೆಕ್ಷನ್ ಕರಾಟೆ ಪಂದ್ಯಾವಳಿಯಲ್ಲಿ ಜೀವಾತ್ಮ.ಜಿ.ಬಿರ್ಜೆ ಗೆ ದ್ವಿತೀಯ ಸ್ಥಾನ

Date:

19th Asian Selection Tournament ಕೇರಳ ರಾಜ್ಯದ ತಿರುವನಂತಪುರದಲ್ಲಿ ಇತ್ತೀಚೇಗೆ ಆಯೋಜಿಸಿದ್ದ 19ನೇ ಏಷಿಯನ್ ಸೆಲೆಕ್ಷನ್ ಟೂರ್ನಮೆಂಟ್‌ನಲ್ಲಿ ಕರಾಟೆ ವಿದ್ಯಾರ್ಥಿ ಜೀವಾತ್ಮ ಜಿ.ಬಿರ್ಜೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಟ್ರೋಫಿ ಹಾಗೂ ಪ್ರಮಾಣ ಪತ್ರ ಪಡೆದಿರುತ್ತಾರೆ.

50-55 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಸಾಧನೆ ಮಾಡಿರುವ ಜೀವಾತ್ಮ ಜಿ.ಬಿರ್ಜೆ ಅವರು ಶಿವಮೊಗ್ಗದ ಗಾಡಿಕೊಪ್ಪದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡಪ್ರಭ ಪತ್ರಕರ್ತ ಗಿರಿಧರ ಎಂ.ಗಾಡಿಕೊಪ್ಪ ಹಾಗೂ ಶಿಕ್ಷಕಿ ಬಿ.ಎಸ್.ಸರಸ್ವತಿ ಬಾಯಿ ದಂಪತಿ ಪುತ್ರ.

19th Asian Selection Tournament ಫ್ಲಾರೆನ್ಸ್ ಇಂಗ್ಲಿಷ್ ಪಬ್ಲಿಕ್ ಸ್ಕೂಲ್‌ನಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಕರಾಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಜೀವಾತ್ಮ ಜಿ.ಬಿರ್ಜೆ ಅವರ ಸಾಧನೆಗೆ ಡಬ್ಲ್ಯೂಕೆಒ ಇಂಡಿಯಾದ ಕರ್ನಾಟಕ ಇನ್‌ಸ್ಟಕ್ಟçರ್ ಹಾಗೂ ಸ್ಟುಡಿಯೋ ಮಾಸ್ಟರ್ ಬಾಬು ಎಸ್., ಕರ್ನಾಟಕ ಬ್ರಾಂಚ್ ಮುಖ್ಯಸ್ಥ ಫೆರೋಜ್ ಖಾನ್ ಹಾಗೂ ಪೋಷಕರಾದ ಗಿರಿಧರ ಎಂ.ಗಾಡಿಕೊಪ್ಪ, ಸರಸ್ವತಿ ಬಾಯಿ ಅಭಿನಂದಿಸಿದ್ದಾರೆ.

ಜೀವಾತ್ಮ ಅವರು ಬೆಂಗಳೂರಿನ ಆರ್‌ಜಿ ಫಿಟ್‌ನೆಸ್ ಅಂಡ್ ಪರ್ಸನಲ್ ಟ್ರೈನಿಂಗ್ ಸ್ಟುಡಿಯೋದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಎಲ್ಲರೂ ಸಹಬಾಳ್ವೆ,ಸಹಕಾರ ಸೇವಾ ಮನೋಭಾವನೆಯಿಂದ ಬಾಳಬೇಕೆಂಬುದೇ ಮಹಾವೀರರ ಸಂದೇಶ- ಕೆ. ರಂಗನಾಥ್

ನಮ್ಮೂರ ಬಳಗದ ವತಿಯಿಂದ ಭಾರತೀಯ ಧಾರ್ಮಿಕ ಸುಧಾರಕರು ಮತ್ತು ಆಧ್ಯಾತ್ಮಿಕ ನಾಯಕರು...

Adichunchabagiri Education Trust ದೇಹ ಆರೋಗ್ಯವಾಗಿದ್ದರೆ, ದೇಶವೂ ಆರೋಗ್ಯ- ಶ್ರೀನಾದಮಾಯಾನಂದನಾಥಶ್ರೀ

ದೇಹದ ಆರೋಗ್ಯ ಉತ್ತಮವಾಗಿದ್ದರೆ, ದೇಶದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಶ್ರೀ ಆದಿ...

Klive Special Article ಮರೆಯಲಾಗದ ಮಾನವೀಯ ಸಂದೇಶ ಸಾರಿದ ಶ್ರೀಮಹಾವೀರ. ...

Klive Special Article ಜನ ಸಂಸ್ಕೃತಿಗಳು ನಿಂತ ನೀರಾದಾಗಲೆಲ್ಲಾ ಅದನ್ನು...