Tuesday, February 3, 2026
Tuesday, February 3, 2026

Akhil Bharatiya Sahitya Parishad ಆದಿಕವಿ & ವಾಗ್ದೇವಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ಮಾಹಿತಿ ಕೋರಿ ಅಭಾಸಾಪ ಪ್ರಕಟಣೆ

Date:

Akhil Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರತೀ ವರ್ಷ ಸಾಹಿತ್ಯದ ಹಿರಿಯ ಸಾಧಕರಿಗೆ “ಆದಿಕವಿ ಪ್ರಶಸ್ತಿ”ಯನ್ನೂ ಕಿರಿಯ ಸಾಧಕರಿಗೆ “ವಾಗ್ದೇವಿ ಪ್ರಶಸ್ತಿ”ಯನ್ನೂ ಪ್ರದಾನಿಸುತ್ತಿರುವುದು ತಮ್ಮ ಗಮನದಲ್ಲಿ ಇದ್ದೇ ಇದೆ. ಹಾಗೆಯೇ ಸಂಸ್ಕೃತ ಕ್ಷೇತ್ರದ ಸಾಧಕರನ್ನೂ ಸಮ್ಮಾನಿಸುತ್ತಿದೆ. ಈ ಮೂರೂ ಪ್ರಶಸ್ತಿ – ಸಮ್ಮಾನಗಳು ಒಂದು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತವೆ. ಇದರ ಆಯ್ಕೆ ಪ್ರಕ್ರಿಯೆಗೆ ಪೂರಕವಾಗಿ ಈ ಹಿಂದೆ ನಮ್ಮ ನಮ್ಮ ಜಿಲ್ಲೆಯ/ವಿಭಾಗದ ವ್ಯಾಪ್ತಿಯಲ್ಲಿ ಇರುವ ಸಾಧಕರನ್ನು ಗುರುತಿಸಿ ಅವರ ಸಮಗ್ರ ವಿವರಗಳನ್ನು ಕಳಿಸುತ್ತಾ ಬಂದಿರುವಿರಿ.

ಈ ವರ್ಷ ಸಾಧಕರನ್ನು ಗುರುತಿಸುವ ಮತ್ತು ಆಯ್ಕೆ ಮಾಡುವ ಪ್ರಕ್ರಿಯೆ ಆಗಬೇಕಿದೆ. ಈ ಬಾರಿಯೂ ಇವುಗಳಿಗೆ ಸಂಬಂಧಿಸಿದ ಈವರೆಗಿನ ವಿವರಗಳನ್ನು ೨೦೨೪ ಸೆಪ್ಟೆಂಬರ್ ೧೦ರೊಳಗೆ ಕಳಿಸಿಕೊಡಬೇಕಾಗಿ ಮನವಿ.

Akhil Bharatiya Sahitya Parishad ಹಾಗೆಯೇ ಕನ್ನಡ ಶಾಲೆಗಳ ಸಮ್ಮಾನ ಕಾರ್ಯಕ್ರಮವೂ ಈ ಬಾರಿ ೨೦೨೪ ನವೆಂಬರ್ ೧೦ ರಂದು ಕಲ್ಲಡ್ಕದ ಶ್ರೀರಾಮ ಶಾಲೆಯ ಆವರಣದಲ್ಲಿ ನಡೆಯಲಿದೆ. ಅದಕ್ಕಾಗಿ ರಾಜ್ಯದಲ್ಲಿ ಇರುವ ಅನುದಾನರಹಿತ, ರಾಷ್ಟ್ರೀಯ ವಿಚಾರಧಾರೆಯಲ್ಲಿ ಕೆಲಸ ಮಾಡುವ, ನಮ್ಮ ಸಂಸ್ಕೃತಿ – ಪರಂಪರೆಗಳನ್ನು ಅನುಸರಿಸುವ ಕನ್ನಡ ಶಾಲೆಗಳನ್ನು ಗುರುತಿಸಬೇಕು. ನಮ್ಮ ನಮ್ಮ ಜಿಲ್ಲೆಗಳಲ್ಲಿ ಇರುವ ಇಂತಹ ಕನ್ನಡ ಶಾಲೆಗಳ ವಿವರಗಳನ್ನೂ ಸೆಪ್ಟೆಂಬರ್ ೧ರೊಳಗೆ ಕಳಿಸಿದರೆ ಅನುಕೂಲ.

ಎರಡೂ ವಿವರಗಳನ್ನು ಪ್ರಾಂತ ಜಾಲತಾಣ ಪ್ರಮುಖರಾದ ಶ್ರೀ ಗಣೇಶ ಅಡಿಗರಿಗೆ ಕಳಿಸಬೇಕು.
(ಗಣೇಶ ಅಡಿಗ +919036178263)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...