Thursday, June 18, 2026
Thursday, June 18, 2026

Shivamogga News ಮಾದರಿಯಾಗಿ ನಿಂತ ಶಿವಮೊಗ್ಗ ಸ್ನೇಹಬಳಗ.”ಪ್ರಸಾದಂ” ಗೆ.ವರ್ಷಾಚರಣೆಯ ಸಂತಸ

Date:

Shivamogga News ಕಳೆದ ಒಂದು ವರ್ಷಗಳಿಂದ ಸ್ನೇಹ ಬಳಗದವರು ವಾರದಲ್ಲಿ ಒಂದು ದಿನ ಭಾನುವಾರ ರಂದು 150 ರಿಂದ 200 ಜನಕ್ಕೆ ಉಚಿತವಾಗಿ “ಪ್ರಸಾದಂ” ಎಂಬ ಅಭಿದಾನದಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ತಾ.4-8-24 ರಂದು “ಪ್ರಸಾದಂ “
52ನೇ ವಾರಕ್ಕೆ ಕಾಲಿಟ್ಟಿದೆ. ಉಚಿತವಾಗಿ ಊಟ ನೀಡುತ್ತಿರುವುದು
ಹಸಿದವರಿಗೆ ಮಾತ್ರ.
ಇದರಲ್ಲಿ ಬಡವರು ,ಸಿರಿವಂತರು ಭೇಧವಿಲ್ಲ. ಹಸಿದ ಮಧ್ಯಾಹ್ನದ ಸಮಯದಲ್ಲಿ ಊಟದ ವಿತರಣೆ ನಡೆಯುತ್ತಿದೆ ಎಂದು “ಪ್ರಸಾದಂ”ಗೆ ಪ್ರೇರಕರಾದ ‌
ಹಿರಿಯ ಎ.ಜೆ ರಾಮಚಂದ್ರ ಹೇಳಿದ್ದಾರೆ.
ಸ್ನೇಹ ಬಳಗದ ಕಟ್ಟಾಳು
ಕೆ.ಜೆ ಕೃಷ್ಣಾನಂದ ಅವರು ಹಲವಾರು ದಾನಿಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ. ಈ ರೀತಿ ನಗರದ ಹಲವಾರು ಕಡೆ ಹಸಿವು ದಣಿಸುವ ಕೆಲಸ ಮಾಡಿದರೆ ಹೆಮ್ಮೆಪಡುತ್ತೇವೆ ಎಂದು ತಿಳಿಸಿದರು.

ಈ ರೀತಿಯ ಕಾರ್ಯ ಕ್ರಮಗಳನ್ನು ಮಾಡುವುದರಿಂದ ಹಲವಾರು ದಾನಿಗಳು ಮುಂದೆ ಬರುತ್ತಿದ್ದಾರೆ. ಪ್ರತಿ ವಾರ ಒಬ್ಬೊಬ್ಬರು ದಾನಿಗಳು ಇದ್ದರೆ. ಶನಿವಾರ ಹಾಗೂ ಭಾನುವಾರಸಹ ಮಧ್ಯಾಹ್ನದ ಊಟವನ್ನು ಮುಂದುವರಿಸಬಹುದು ಎಂದು ಮಾಧವ್ ಶಿವಮೊಗ್ಗ ಅವರು ಹೇಳಿದ್ದಾರೆ.

Shivamogga News ಡಾ.ತಿಮ್ಮಪ್ಪ ವೈದ್ಯಕೀಯ ಅಧೀಕ್ಷಕರು ಮೆಚ್ಚುಗೆ ಮಾತುಗಳನ್ನಾಡಿದರು,
ಕಳೆದ ಒಂದು ವರ್ಷಗಳಿಂದ ಮೆಗನ್ ಆಸ್ಪತ್ರೆಗೆ ಬಂದ ರೋಗಿಗಳ ಸಂಬಂಧಿಗಳಿಗೆ ಸ್ನೇಹ ಬಳಗದಿಂದ ಅನ್ನದಾನ ಮಾಡುತ್ತಿದ್ದಾರೆ. ಮುಖ್ಯವಾಗಿ ರುಚಿ ಮತ್ತು ಶುಚಿಯಾದ ಊಟ ನೀಡುವುದೇ ಅಲ್ಲದೆ ಸ್ವಚ್ಛತೆಯನ್ನ ಸ್ನೇಹ ಬಳಗದವರು ನಿಗಾವಹಿಸಿದ್ದಾರೆ.
” ಪ್ರಸಾದಂ” ವಾರ್ಷಿಕ
ಊಟದ ವಿತರಣೆಯನ್ನ ಶಾಸಕ ಡಿ.ಎಸ್.ಅರುಣ್ ಅವರ ಪತ್ನಿ ಶ್ರೀಮತಿ ಅರುಣ್ ನೆರವೇರಿಸಿದರು.
ಪ್ರಸಾದಂ ಮುಂದಾಳು
ನಗರಗದ್ದೆ ಶ್ರೀನಾಥ್ ಅವರು ದಾನಿಗಳ ನೆರವಿನಿಂದ ಪ್ರಸಾದಂ ವರ್ಷದ ಹೊಸ್ತಿಲು ಮುಟ್ಟಿದೆ. ನಿರಂತರ ನಡೆಸುವ ಅಪೇಕ್ಷೆ ಇದೆ ಎಂದು ಹೇಳಿ
ದಾನಿಗಳಿಗೆಲ್ಲ ಸ್ಮರಣಫಲಕ ,ಪುಷ್ಪಹಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆಲ್ಲರಿಗೂ ‌ವಂದನೆ ಅರ್ಪಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...