Saturday, March 28, 2026
Saturday, March 28, 2026

Bharat Scout and Guide ಜಿಲ್ಲಾ ಸ್ಕೌಟ್ & ಗೈಡ್ಸ್ ವತಿಯಿಂದ ವಿ ಸ್ಕಾರ್ಫ್ ದಿನಾಚರಣೆ

Date:

Bharat Scout and Guide ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ “ವಿಶ್ವ ಸ್ಕಾರ್ಫ್ ಡೆ ಹಾಗೂ ಸ್ಕೌಟಿಂಗ್ ಸೂರ್ಯೋದಯ ದಿನಾಚರಣೆ”ಯನ್ನು ಆಚರಿಸಲಾಯಿತು.

ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಆರಂಭವಾಯಿತು. ಸಭಾ ಕಾರ್ಯಕ್ರಮವು ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀ ರಾಜೇಶ್.ವಿ.ಅವಲಕ್ಕಿ. ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ಇವರು ದಿನದ ಮಹತ್ವವನ್ನು ಸರ್ವರಿಗೂ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಕೌಟಿಂಗ್ ಚಳುವಳಿಯ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪೋವೆಲ್ ಹಾಗೂ ಶ್ರೀಮತಿ ಲೇಡಿ ಬೇಡನ್ ಪೋವೆಲ್ ಅವರ ಭಾವಚಿತ್ರಕ್ಕೆ ಸ್ಕಾರ್ಫ್ ಧರಿಸುವ ಮೂಲಕ ಗೌರವಿಸಲಾಯಿತು.

ಶ್ರೀಮತಿ ಗೀತಾ ಚಿಕ್ಮಠ್ ಜಿಲ್ಲಾ ತರಬೇತಿ ಆಯುಕ್ತರು(ಗೈಡ್) ಇವರು ಸ್ಕೌಟ್ ಗೈಡ್ ವಂದನೆಯೊಂದಿಗೆ ಪ್ರತಿಜ್ಞೆಯ ಪುನರುಚ್ಛಾರಣೆ ಮಾಡಿಸಿದರು.

Bharat Scout and Guide ನಂತರ ಅಧ್ಯಕ್ಷೀಯ ನುಡಿಯಲ್ಲಿ ಮಾತನಾಡಿದ ಜಿಲ್ಲಾಮುಖ್ಯ ಆಯುಕ್ತರಾದ ಶ್ರೀ.ಕೆ.ಪಿ.ಬಿಂದುಕುಮಾರ್ ಅವರು ವಿಶ್ವ ಸ್ಕಾರ್ಫ್ ದಿನಾಚರಣೆಯ ಪರಿಕಲ್ಪನೆಯಂತೆ ಈ ಹಿಂದೆ ಸ್ಕೌಟಿಂಗ್ ಚಳುವಳಿಯಲ್ಲಿದ್ದವರು ಹಾಗೂ ಪ್ರಸ್ತುತ ಸಕ್ರಿಯವಾಗಿ ರುವ ಎಲ್ಲಾ ಸದಸ್ಯರು ಸಾರ್ವಜನಿಕವಾಗಿ ಸ್ಕಾರ್ಫ್ ನ್ನು ಧರಿಸಿ ಎಂದೆಂದಿಗೂ ಸ್ಕೌಟಿಂಗ್ ಚಳುವಳಿಯ ತತ್ವಗಳನ್ನು ಪ್ರಚಾರಪಡಿಸ ಬೇಕೆಂದು ಹೇಳುತ್ತಾ” ಒಮ್ಮೆ ಸ್ಕೌಟ್ ಆದರೆ ಆತ ಯಾವಾಗಲೂ ಸ್ಕೌಟ್ ಆಗಿರುತ್ತಾನೆ ಎಂದು ಕರೆ ನೀಡಿದರು.

ನಗರದ ವಿವಿಧ ಶಾಲೆಗಳ ಸ್ಕೌಟ್ ಮತ್ತು ಗೈಡ್ ಮಕ್ಕಳು ಹಾಗೂ ದಳನಾಯಕರುಗಳಾದ ಶ್ರೀಮತಿ.M.L.ಶಾಂತಮ್ಮ, ಶ್ರೀಮತಿ. M.ಹೇಮಲತಾ. ಶ್ರೀಮತಿ.ಸುನಂದಮ್ಮ. ಶ್ರೀಮತಿ ನಾಗಪ್ರಿಯಾ, ಶ್ರೀ.ಕೃಷ್ಣಸ್ವಾಮಿ, ಪ್ರತಿನಿಧಿ ಭದ್ರಾವತಿ, ಶ್ರೀ. ನಾಗರಾಜ್, ಹಿರಿಯ ಸ್ಕೌಟ್ ಮಾಸ್ಟರ್, ಶ್ರೀ ವಿವೆಕಾನಂದ ಮಾನೆ , ಸ್ಕೌಟ್ ಮಾಸ್ಟರ್. ಜಿಲ್ಲಾ. ಸಹಕಾರ್ಯದರ್ಶಿ ಶ್ರೀ ವೈ.ಆರ್.ವೀರೇಶಪ್ಪ,ಹಾಗೂ ಜಿಲ್ಲಾ ಸಂಸ್ಥೆಯ ಸಿಬ್ಬಂಧಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಸಂಸ್ಥೆಯ ಕಾರ್ಯದರ್ಶಿ ಶ್ರೀ ಪರಮೇಶ್ವರ ಸ್ವಾಗತವನ್ನು ಕೋರಿದರು. ಶ್ರೀ.ಜಿ. ವಿಜಯಕುಮಾರ್.PRO. ವಂದನಾರ್ಪಣೆ ಮಾಡಿದರು. ಶ್ರೀ ರಾಜೇಶ್.ವಿ.ಅವಲಕ್ಕಿ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kote SeethaRamanjaneya Temple ವೈಭವದಿಂದ ನಡೆದ ಶ್ರೀಆಂಜನೇಯಸ್ವಾಮಿ ರಥೋತ್ಸವ

Kote SeethaRamanjaneya Temple ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ...

Department of Kannada and Culture ಶ್ರೀಅಗ್ನಿಬನ್ನಿರಾಯಸ್ವಾಮಿಯವರ ಇತಿಹಾಸವನ್ನ ನಾವೆಲ್ಲಾ ತಿಳಿದುಕೊಳ್ಳಬೇಕು- ಆನಂದ್.

Department of Kannada and Culture ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು...

Rotary Club Shimoga ಚಿನ್ನ,ಬೆಳ್ಳಿ ಧಾರಣೆ ವ್ಯತ್ಯಾಸಕ್ಕೆ ಜಾಗತಿಕ ಸಮಸ್ಯೆಗಳೇ ಕಾರಣ- ಸೆಂಥಿಲ್ ವೆಲನ್.

Rotary Club Shimoga ಚಿನ್ನ ಮತ್ತು ಬೆಳ್ಳಿ ಕಷ್ಟಕಾಲದಲ್ಲಿ ಅಪತ್ಬಾಂದವ ರೀತಿಯಲ್ಲಿ ವರ್ತಿಸುತ್ತದೆ....

S. N. Channabasappa ಮಾದಕ ದ್ಯವ್ಯ ವ್ಯಸನ ವಿರೋಧಿ ಕ್ರಮಗಳಿಗೆ ವಿಶೇಷ ಕಾರ್ಯಪಡೆ ರಚನೆ ಮಾಡಿ- ಎಸ್.ಎನ್.ಚನ್ನಬಸಪ್ಪ.

S. N. Channabasappa ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು ಮತ್ತು ಮಾದಕ...