Wednesday, September 16, 2026
Wednesday, September 16, 2026

Tunga River ತುಂಬಿದ ತುಂಗಾ: ಶಿವಮೊಗ್ಗದ ಇಮಾಮ್ ಬಾಡಾ ನಿವಾಸಿಗಳಿಗೆ ರಾಜಾ ಕಾಲುವೆ ನೀರಿನಿಂದ ಪರದಾಟ

Date:

Tunga River ಶಿವಮೊಗ್ಗ ನಗರದೊಳಕ್ಕೆ ತುಂಗಾ ನದಿಯು ಅಪಾಯಮಟ್ಟದಲ್ಲಿ ಹರಿಯುತ್ತಿರುವುದರಿಂದ ರಾಜಕಾಲುವೆ ನೀರಿನಿಂದ ಡ್ರೈನೇಜ್ ನೀರು ವಾಪಾಸ್ ಹೊಡೆಯುತ್ತಿದೆ. ಪರಿಣಾಮ ಇಮಾಮ್ ಬಾಡಾ ನಿವಾಸಿಗಳು ಪರದಾಡುವಂತಾಗಿದೆ.

ಇಮಾಮ್ ಬಾಡಾ ರಸ್ತೆಯ ಮಗ್ಗಲಿಗೆ ಇರುವ ಕರಿರಾಯ ಕೆಂಚರಾಯ ದೇವಸ್ಥಾನದ ಗರ್ಭಗುಡಿಯು ಒಳಗೆ ಡ್ರೈನೇಜ್ ನೀರು ಹರಿಯುತ್ತಿದೆ. ದೇವರಿಗೆ ಡ್ರೈನೇಜ್ ನೀರು ಸುತ್ತು ಆವರಿಸಿಕೊಂಡಿದೆ.
ಇದರ ಹಿಂಭಾಗದಲ್ಲಿರುವ ತಿರುಮಲ ಪ್ಲೇವುಡ್ ಸ್ಟೋರ್ ಡ್ರೈನೇಜ್ ನೀರಿನಿಂದ ಜಲಾವೃತಗೊಂಡಿದೆ. ನೀರು ದರ್ವಾಸನೆ ಹೊಡೆಯುತ್ತಿದೆ. ಈ ಕುರಿತು ಮಾತನಾಡಿರುವ ಮಾಲೀಕ ವಿಠಲ ಪ್ರತಿ ಮಳೆಗಾಲದಲ್ಲಿ ನದಿ ಅಪಾಯ ಮಟ್ಟದಲ್ಲಿ ಹರಿದರೆ ಡ್ರೈನೇಜ್ ನೀರು ವಾಪಾಸ್ ಹೊಡೆಯುತ್ತದೆ.

Tunga River ನಾಲ್ಕೈದು ದಿನದ ಹಿಂದೆ ನೀರು ಬಂದಿತ್ತು. ಆಗಲೂ ಪ್ರೇವುಡ್ ಕರ್ ಮೋಟಾರ್ ಗಳು ಸುಟ್ಟು ವೈಂಡಿಂಗ್ ಮಾಡಿಸಲಾಗಿತ್ತು. ಈಗ ಮತ್ತೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಒಂದು ಲಕ್ಷ ರೂ. ಪ್ಲೇವುಡ್ ಮತ್ತು ಮೋಟಾರು ಹಾಳಾಗಿದೆ.‌
ಸಧ್ಯಕ್ಕೆ ನದಿಯ ಒಳಹರಿವು ಇಳಿಮುಖವಾಗಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದ ರಾಜಕಾಲುವೆಯ ಬಳಿ ಇರುವ ಕುಡಿಯುವ ನೀರಿನ ಪೈಪ್ ಲೈನು ಸಹ ಜಲಾವೃತಗೊಂಡಿದೆ. ಸಧ್ಯಕ್ಕೆ ಪಾಲಿಮೆ ಬ್ಲೀಚಿಂಗ್ ಪೌಡರ್ ಹಾಕಿ ಹೋಗಿದ್ದಾರೆ.
ಈ ಕುರಿತು ಪಾಲಿಕೆ ಮಾಜಿ ಕಾರ್ಪೊರೇಟ್ ರ್ ಜಿಲಾನ್ ಮಾತನಾಡಿ, ಇಮಾಮ್ ಬಾಡಾ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಮನೆ ಬಿದ್ದವರಿಗೆ ಈ ಹಿಂದೆ ಬಿಜೆಪಿ ಸರ್ಕಾರ ನೀಡುತ್ತಿದ್ದ ಐದು ಲಕ್ಷ ರೂ ಪರಿಹಾರ ಮತ್ತು ಭಾಗಶಃ ಮನೆಗಳಿಗೆ 1.20 ಸಾವಿರ ಕೊಡಬೇಕು. ಡ್ರೈನೇಜ್ ನೀರು ಸರಿಪಡಿಸಬೇಕೆಂದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...