Saturday, December 6, 2025
Saturday, December 6, 2025

Tunga River ತುಂಬಿದ ತುಂಗಾ: ಶಿವಮೊಗ್ಗದ ಇಮಾಮ್ ಬಾಡಾ ನಿವಾಸಿಗಳಿಗೆ ರಾಜಾ ಕಾಲುವೆ ನೀರಿನಿಂದ ಪರದಾಟ

Date:

Tunga River ಶಿವಮೊಗ್ಗ ನಗರದೊಳಕ್ಕೆ ತುಂಗಾ ನದಿಯು ಅಪಾಯಮಟ್ಟದಲ್ಲಿ ಹರಿಯುತ್ತಿರುವುದರಿಂದ ರಾಜಕಾಲುವೆ ನೀರಿನಿಂದ ಡ್ರೈನೇಜ್ ನೀರು ವಾಪಾಸ್ ಹೊಡೆಯುತ್ತಿದೆ. ಪರಿಣಾಮ ಇಮಾಮ್ ಬಾಡಾ ನಿವಾಸಿಗಳು ಪರದಾಡುವಂತಾಗಿದೆ.

ಇಮಾಮ್ ಬಾಡಾ ರಸ್ತೆಯ ಮಗ್ಗಲಿಗೆ ಇರುವ ಕರಿರಾಯ ಕೆಂಚರಾಯ ದೇವಸ್ಥಾನದ ಗರ್ಭಗುಡಿಯು ಒಳಗೆ ಡ್ರೈನೇಜ್ ನೀರು ಹರಿಯುತ್ತಿದೆ. ದೇವರಿಗೆ ಡ್ರೈನೇಜ್ ನೀರು ಸುತ್ತು ಆವರಿಸಿಕೊಂಡಿದೆ.
ಇದರ ಹಿಂಭಾಗದಲ್ಲಿರುವ ತಿರುಮಲ ಪ್ಲೇವುಡ್ ಸ್ಟೋರ್ ಡ್ರೈನೇಜ್ ನೀರಿನಿಂದ ಜಲಾವೃತಗೊಂಡಿದೆ. ನೀರು ದರ್ವಾಸನೆ ಹೊಡೆಯುತ್ತಿದೆ. ಈ ಕುರಿತು ಮಾತನಾಡಿರುವ ಮಾಲೀಕ ವಿಠಲ ಪ್ರತಿ ಮಳೆಗಾಲದಲ್ಲಿ ನದಿ ಅಪಾಯ ಮಟ್ಟದಲ್ಲಿ ಹರಿದರೆ ಡ್ರೈನೇಜ್ ನೀರು ವಾಪಾಸ್ ಹೊಡೆಯುತ್ತದೆ.

Tunga River ನಾಲ್ಕೈದು ದಿನದ ಹಿಂದೆ ನೀರು ಬಂದಿತ್ತು. ಆಗಲೂ ಪ್ರೇವುಡ್ ಕರ್ ಮೋಟಾರ್ ಗಳು ಸುಟ್ಟು ವೈಂಡಿಂಗ್ ಮಾಡಿಸಲಾಗಿತ್ತು. ಈಗ ಮತ್ತೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಒಂದು ಲಕ್ಷ ರೂ. ಪ್ಲೇವುಡ್ ಮತ್ತು ಮೋಟಾರು ಹಾಳಾಗಿದೆ.‌
ಸಧ್ಯಕ್ಕೆ ನದಿಯ ಒಳಹರಿವು ಇಳಿಮುಖವಾಗಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದ ರಾಜಕಾಲುವೆಯ ಬಳಿ ಇರುವ ಕುಡಿಯುವ ನೀರಿನ ಪೈಪ್ ಲೈನು ಸಹ ಜಲಾವೃತಗೊಂಡಿದೆ. ಸಧ್ಯಕ್ಕೆ ಪಾಲಿಮೆ ಬ್ಲೀಚಿಂಗ್ ಪೌಡರ್ ಹಾಕಿ ಹೋಗಿದ್ದಾರೆ.
ಈ ಕುರಿತು ಪಾಲಿಕೆ ಮಾಜಿ ಕಾರ್ಪೊರೇಟ್ ರ್ ಜಿಲಾನ್ ಮಾತನಾಡಿ, ಇಮಾಮ್ ಬಾಡಾ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಮನೆ ಬಿದ್ದವರಿಗೆ ಈ ಹಿಂದೆ ಬಿಜೆಪಿ ಸರ್ಕಾರ ನೀಡುತ್ತಿದ್ದ ಐದು ಲಕ್ಷ ರೂ ಪರಿಹಾರ ಮತ್ತು ಭಾಗಶಃ ಮನೆಗಳಿಗೆ 1.20 ಸಾವಿರ ಕೊಡಬೇಕು. ಡ್ರೈನೇಜ್ ನೀರು ಸರಿಪಡಿಸಬೇಕೆಂದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...