Thursday, June 12, 2025
Thursday, June 12, 2025

Bharath Scouts and Guides ಸ್ಕೌಟ್ & ಗೈಡ್ಸ್ ನಲ್ಲಿ ಬದುಕುವ ಕಲೆ ಜೊತೆ ಆತ್ಮಸ್ಥೈರ್ಯ ಹೆಚ್ಚಿಸುವ ಶಕ್ತಿಯಿದೆ – ಶಕುಂತಲಾ ಚಂದ್ರಶೇಖರ್

Date:

Bharath Scouts and Guides ಆಡುತ್ತಾ ನಲಿಯುತ್ತಾ ಕಲಿಯುವುದು ಜೀವನ ಶಿಕ್ಷಣ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಂಡು, ವಿದ್ಯಾಭ್ಯಾಸದ ಜೊತೆಗೆ ಇಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಕಿವಿ ಮಾತು ಹೇಳಿದರು.

ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಜಿಲ್ಲಾ ಮಟ್ಟದ ನಿಪುಣ್ ಪರೀಕ್ಷಾ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಬದುಕುವ ಕಲೆಯ ಜೊತೆಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಶಕ್ತಿ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಇಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಮುಖ್ಯ ಆಯುಕ್ತೆ ಕೆ.ಪಿ.ಬಿಂದುಕುಮಾರ್, ಸ್ಕೌಟ್ ಮತ್ತು ಗೈಡ್ಸ್ ಎಂದರೆ ಶಿಸ್ತಿನ ಸಿಪಾಯಿಗಳ ತಂಡ ಕೊವಿಡ್ ನಂತಹ ವಿಷಮಕಾಲದಲ್ಲಿ ಜಿಲ್ಲಾಸಂಸ್ಥೆಯ ರೋವರ್ ತಂಡಗಳು ಆಹಾರ, ಔಷಧಿಯಂತಹ ಅಗತ್ಯ ವಸ್ತುಗಳನ್ನು ಶಿವಮೊಗ್ಗ ಭದ್ರಾವತಿ ವ್ಯಾಪ್ತಿಯಲ್ಲಿ ತಲುಪಿಸಿದನ್ನು ನಾವು ಇಂದು ಸ್ಮರಿಸಿಸಬೇಕು ಎಂದರು.

ಸ್ಥಾನಿಕಾ ಆಯುಕ್ತ ಕೆ.ರವಿ ಮಾತನಾಡಿ, ರೋವರ್ ರೇಂಜರ್ ಗಳು ತಮ್ಮ ಶಾಲೆಯಲ್ಲಿ ಹಾಗೂ ಗ್ರಾಮದಲ್ಲಿ ಮೊದಲು ಗಿಡ ನೆಡುವಂತ ಚಟುವಟಿಕೆಗಳಿಂದ ಪ್ರಾರಂಭಿಸಲು ತಿಳಿಸಿದರು. ಹಾಗೂ ಯುವಕರು ನಾಯಕತ್ವಗುಣ ಬೆಳೆಸಿಕೊಳ್ಳಬೇಕೆಂದು ಕರೆ ಕೊಟ್ಟರು.

Bharath Scouts and Guides ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಖಜಾಂಚಿ ಚೂಡಾಮಣಿ ಪವಾರ್, ಜಂಟಿಕಾರ್ಯದರ್ಶಿ ಲಕ್ಷ್ಮಿ ಕೆ ರವಿ, ಕೇಂದ್ರ ಸ್ತಾನಿಕಾಯುಕ್ತ ಜಿ ವಿಜಯ ಕುಮಾರ್, ಕೆ.ರವಿ. ತರಬೇತಿ ತಂಡದ ನಾಯಕ ರಾಜೇಶ್ ವಿ ಅವಲಕ್ಕಿ, ಸಹನಾಯಕ ಎಂ.ಗಣಪತಿ, ಸಿ.ಎಂ.ಪರಮೇಶ್ವರಯ್ಯ, ಚಂದ್ರಶೇಖರ್, ಮಲ್ಲಿಕಾರ್ಜುನಕಾನೂರ್, ತರಬೇತಿ ತಂಡದ ನಾಯಕಿ ಕಾತ್ಯಾಯಿನಿ, ಭಾರತಿ ಸಿಂಗಾಡೆ, ಶಾಂತಮ್ಮ.ಎಂ.ಎಲ್, ವಿವಿಧ ಕಾಲೇಜುಗಳ ಉಪನ್ಯಸಕರು ಹಾಗೂ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಕಾತ್ಯಾಯಿನಿ ಶಿಬಿರದ ಮಾಹಿತಿಯನ್ನು ತಿಳಿಸಿದರು. ರಾಜೇಶ್ ಅವಲಕ್ಕಿ ನಿರೂಪಿಸಿ, ಹೆಚ್.ಶಿವಶಂಕರ್ ಸ್ವಾಗತಿಸಿ, ಲಕ್ಷ್ಮಿ ಕೆ ರವಿ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...