Sunday, December 14, 2025
Sunday, December 14, 2025

Shivamogga Police ಟಿಟಿ ವಾಹನ ಬಾಡಿಗೆಗೆ ಕರೆದು ಚಾಲಕನ ಮೇಲೆ ಹಲ್ಲೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Date:

Shivamogga Police ಟೆಂಪೋ ಟ್ರಾವಲರ್ ಬಾಡಿಗೆಗೆ ಬೇಕೆಂದು ಕರೆಯಿಸಿಕೊಂಡು ನಂತರ ಪ್ರಯಾಣಿಸುವಾಗ ಚಾಲಕ ದರ್ಶನ್‌ನನ್ನು ಹೆದರಿಸಿ ಮಾಲಕನನ್ನು ಕರೆಯಿಸು ಎಂದು ಬೆದರಿಸಿ ಆತನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ, ವಾಹನವನ್ನು ಹಾನಿಗೊಳಿಸಿದ ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಜುಲೈ 10ರ ರಾತ್ರಿ ಈ ಘಟನೆ ಸಂಭವಿಸಿದೆ. ಕೆಎ ೦೫ ಎಎಫ್ ೧೪೩೧ರ ಟಿಟಿ ಬಾಡಿಗೆ ಇದೆ ಹೋಗು ಎಂದು ಮಾಲೀಕ ಕಾರ್ತಿಕ್ ಚಾಲಕನಿಗೆ ತಿಳಿಸಿದ್ದಾರೆ. ಅದರಂತೆ ಬೊಮ್ಮನಕಟ್ಟೆಯ ಲಾಸ್ಟ್ ಬಸ್ ಸ್ಟಾಪ್ ನಿಂದ ಬಾಡಿಗೆಯವರನ್ನು ಹತ್ತಿಸಿಕೊಂಡ ಚಾಲಕ ಬಸವಗಂಗೂರಿನ ಮೂಲಕ ಕುಂಸಿ ಕಡೆ ಹೊರಟಿದ್ದನು. ಈ ವೇಳೆ ಟಿಟಿಯಲ್ಲಿದ್ದ ತಂಡ ವಾಹನದ ಮಾಲೀಕನನ್ನು ಕರೆಯಿಸು ಎಂದು ಸೂಚಿಸಿದ್ದಾರೆ.

ಯಾಕೆ ಎಂದು ಪ್ರಶ್ನಿಸಿದ ಟಿಟಿ ಚಾಲಕನಿಗೆ ವೀಲ್ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಚಾಲಕನನ್ನು ಸೀಟಿನಿಂದ ಎಳೆದುಹಾಕಿದ್ದಾರೆ.
ಬಸವನಗಂಗೂರಿನಿಂದ ಕುಂಸಿಗೆ ಹೋಗುವ ದಾರಿ ಮಧ್ಯದಲ್ಲಿ ಬರುವ ಬಾರ್ ಎದುರು ಗಾಡಿ ನಿಲ್ಲಿಸಿ ವಾಹನವನ್ನು ಹಾಳು ಮಾಡಿದ್ದಾರೆ.

ಎಲ್ಲರೂ ಬಾರ್ ಗೆ ಇಳಿದು ಹೋದ ವೇಳೆ ಟಿಟಿ ಚಾಲಕ ಉಪಾಯದಿಂದ ತಪ್ಪಿಸಿಕೊಂಡು ಬಂದು ಮಾಲೀಕನಿಗೆ ವಿಷಯ ತಿಳಿಸಿದ್ದಾರೆ.

Shivamogga Police ಆಗ ಮಾಲೀಕರು ಯಾರು ಬಾಡಿಗೆಗೆ ಕರೆದಿದ್ದರೋ ಅವರಿಗೆ ಕರೆ ಮಾಡಿದಾಗ ಸ್ಚಿಚ್ ಆಫ್ ಬಂದಿದೆ. ವೀಲ್ ರಾಡಿನಿಂದ ನಂತರ ಯುವಕನ ಮೇಲೆ ಹಲ್ಲೆ ನಡೆಸಿದ ೧೦-೧೨ ಜನ ಅಪರಿಚಿತ ಯುವಕರ ವಿರುದ್ಧ ಚಾಲಕ ದರ್ಶನ್ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...