Monday, February 2, 2026
Monday, February 2, 2026

Klive Special Article ಕೆ ಲೈವ್ ವಿಶೇಷ ಮೆಚ್ಚುವಂಥ ಮತದಾರನ ಬುದ್ಧಿಮತ್ತೆ

Date:

Klive Special Article ಹದಿನೆಂಟನೇ ಲೋಕಸಭೆ ರಚನೆಗೆ ನಡೆದ ಚುನಾವಣೆ ಭಾರತದ ಎಚ್ಚೆತ್ತ ಮತದಾರರ ಸಂಕೇತವಾಗಿದೆ.

ನರೇಂದ್ರ ಮೋದೀಜಿ ಅವರ “ಚಾರ್ ಸೌ ಪಾರ್ ” ಸ್ಲೋಗನ್
ಬಗ್ಗೆ ಅದೊಂದು ಮೈಂಡ್ ಗೇಮ್ ಅಂತ ವಿಶ್ಲೇಷಕರ ಅಂಬೋಣ.

ಆದರೂ ಕಳೆದೆರಡು ಸಾರ್ವತ್ರಿಕ ಚುನಾವಣೆಗಳಲ್ಲಿ
ಅಭೂತಪೂರ್ವ ಮುನ್ನಡೆ ಪಡೆದ ನರೇಂದ್ರ ಮೋದಿ ಅವರ. ಚರಿಶ್ಮಾ ಈ ಬಾರಿ ಕೆಲಸ ಮಾಡಲಿಲ್ಲ.

ಸುಮಾರು 293 -5 ರ ನಡುವೆಯೇ ಲೋಲಕದಂತಿರುವ ಸಂಖ್ಯೆ “ತೀನ್ ಸೌ ಪಾರ್ ” ಕೂಡ ಆಗಿಲ್ಲ.

ಮೋದಿ ಮೊದಲಿಗೆ ‘ಹಿಂದುತ್ವ”ಪ್ಲೆ ಕಾರ್ಡ್
ಹಿಡಿದರು. ಗೆದ್ದರು.
ನಂತರ “ಮಂದಿರ’ ಗೆದ್ದರು. ಈ ಅವಧಿಯಲ್ಲಿ ಅನೇಕ
ತಲ್ಲಣ,ಆತಂಕಗಳನ್ನ
‘ಕೋವಿಡ್ ‘ ನಿಂದಾಗಿ ದೇಶದ ಜನ ಅನುಭವಿಸುವಂತಾಯಿತು.
ಈ ಸಂಕಷ್ಟ ಪರಿಸ್ಥಿತಿಯನ್ನ ತುಂಬಾ ಗಂಭೀರವಾಗಿಯೇ ಮೋದಿ ನಿರ್ವಹಿಸಿದರು.
ತಾವು ಭಾರತ ಪ್ರಜಾಪ್ರಭುತ್ವದ ಚೌಕಿದಾರ್ ಎಂದು ಕರೆದುಕೊಂಡರು.

ವಿರೋಧಿಗಳಿಗೆ ಇಲ್ಲಿಯವರೆಗೂ ಬಿಜೆಪಿಯ ಹಿಂದುತ್ವ ವಾದವೊಂದೇ ಕೋಮುವಾದವಾಗಿ
ಅವರ ಪ್ರಣಾಳಿಕೆಯಾಗಿರುತ್ತಿತ್ತು.

ಆದರೆ ತ್ರಿವಳಿ ತಲಾಖ್ ನಂತಹ ಪದ್ಧತಿಯನ್ನ ಅಮಾನ್ಯ, ಜಮ್ಮು ಕಾಶ್ಮೀರ 370 ನೇ ವಿಧಿ ರದ್ದು ಇತ್ಯಾದಿ ಪ್ರಮುಖ ಸುಧಾರಣೆಗಳನ್ನ ಕೈಗೊಂಡಾಗ ವಿಪಕ್ಷಗಳು‌ ಮಾತಿಲ್ಲದೇ ಮೂಕವಾದವು.
ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ರಂಜಿತ ಧ್ವಜ ಹಾರಾಡಿತು.

ಜಮ್ಮುಕಾಶ್ಮೀರ ಚುನಾವಣೆಯಲ್ಲಿ ಅನಭಿಷಕ್ತ ನಾಯಕ ಓಮರ್ ಅಬ್ದುಲ್ಲಾ ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಅವರ ವಿರುದ್ಧ ರಶೀದ್ ಎಂಬ
ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.

ಇವೆಲ್ಲಾ ಭಾವನಾತ್ಮಕ ಒಂದೇ ಅಲ್ಲ. ಸಾಮಾಜಿಕವಾಗಿ ಆಗಬೇಕಾದ ಬದಲಾವಣೆಗಳಾಗಿದ್ದವು.
ಪುಲ್ವಾಮ ದಾಳಿ ನಿರ್ವಹಣೆ. ಚಂದ್ರಯಾನದ ಯಶಸ್ಸು ಹೀಗೆ ಒಂದೇ ಎರಡೆ?
ಮೋದಿ ಅವರನ್ನ ಮತ್ತೆ ಓರ್ವ ಸ್ಫುಟ ನಾಯಕ ಮಣಿಯಂತೆ ಮಾಡಿದವು.

ವಿಪಕ್ಷಗಳು ಟೀಕಾಸ್ತ್ರಕ್ಕಾಗಿ‌ ಕಾಯುತ್ತಿದ್ದವು. ಸಿಕ್ಕದ್ದೇ ಅದಾನಿ ಅಂಬಾನಿ.

ಈ ಬಾರಿಯ ಚುನಾವಣೆಯಲ್ಲಿ
ದೇಶದ ಇತರ ಬಿಜೆಪಿ ವಿರೋಧ ಪಕ್ಷಗಳನಗನ ಕಲೆಹಾಕಿ ಮುಖ್ಯ ಭೂಮಿಕೆಯನ್ನ ಕಾಂಗ್ರೆಸ್ ರಚಿಸಿತು.
ಇಂಡಿ ತಂಡವು ಆರಂಭ ಶೂರತ್ವ ಅನಿಸಿತು.
ಕಾಂಗ್ರೆಸ್ ನಾಯಕರಲ್ಲಿ ಅನುಭವಿ ಮಲ್ಲಿಕಾರ್ಜುನ ಖರ್ಗೆ ಒಬ್ಬರೇ ಅಧಿಕಾರಯುತವಾಗಿ
ಬಿಜೆಪಿಯ ಮೇಲೆ ಮೋದೀಜಿಯ ಮೇಲೆ ವಾಗ್ದಾಳಿ ನಡೆಸಿದರು.
ರಾಹುಲ್ ಭಾಷಣಗಳೆಲ್ಲವೂ
ಅರೆಬರೆ ವಿಷಯಗಳ‌ಅಗಿದ್ದು ಆಳವೇ ಇರಲಿಲ್ಲ.
ಕೊನೆಗೆ ಮೋದಿವರ
ಉಡುಪು, ಭಾಷಣ ಮಾತಿನ ವಾಕ್ಯಗಳು
ಮುಖಭಂಗಿ‌ ಇವೆ ರಾಹುಲ್ ಗರ ಅಣಕು‌ ಮಾಡುವ ವಸ್ತುಗಳಾದವು.
ಜೊತೆಗೆ ಗ್ಯಾರಂಟಿ ಹೇಳುವಾಗ ಕೈಯಲ್ಲಿ ಅಧಿಕಾರ ಸಿಕ್ಕೇಬಿಟ್ಟಿದೆ ಎಂದು
ವರ್ಷಕ್ಕೆ ಕುಟುಂಬದ ಓರ್ವ ಮಹಿಳೆಗೆ ಒಂದು ವರ್ಷಕ್ಕೆ ಲಕ್ಷರೂಪಾಯಿಯನಗನ ಟಕಾಟಕ್ ಬ್ಯಾಂಕ್ ಖಾತೆಗೆ ಹಾಕುವುದಾಗಿ ಪ್ರಣಾಳಿಕೆ ಮಾತನ್ನೇ ಭಾಣವನ್ನಾಗಿಸಿದರು.
ಸಾಲದಾದರೆ ಒಂದಲ್ಲ ಎರಡು ಲಕ್ಷ ಹಾಕುತ್ತೇವೆ ಎಂದೂ ಹಿಂದೆಮುಂದೆ ನೋಡದೇ ಭರವಸೆ ನೀಡಿದರು.
ಅಧಿಕಾರ ಹಿಡಿದ ಮಾರನೇ ದಿನವೇ ಹಣ‌ ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿಬಿಟ್ಟರು. ಇಂದಿನ ಫಲಿತಾಂಶ ನೋಡಿದರೆ ನಮ್ಮ ಮತದಾರ ಪಕ್ಷಗಳ ಪ್ರಣಾಳಿಕೆಗಿಂತ ಬುದ್ದಿಮತ್ತೆ ತೋರಿದ್ದಾರೆ.

Klive Special Article ಭಾವನಾತ್ಮಕ ವಿಷಯಗಳನ್ನ ಸಾಕು ಮಾಡಿ. ಉಚಿತ ಕೊಡುಗೆಗಳನ್ನ ನೀಡಿ
ಪರಾವಲಂಬಿಗಳನ್ನಾಗಿ ಮಾಡಬೇಡಿ. ಸಾಮಾಜಿಕ ಸಮಸ್ಯೆಗಳು,ದೇಶದ
ಅಭಿವೃದ್ಧಿ , ಅಂತಾರಾಷ್ಟ್ರೀಯ ಅಗತ್ಯಗಳ ಬಗ್ಗೆ ‌ಕೆಲಸಮಾಡಿ .
ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ಬೇಡ. ಆಡಳಿತ ಮತ್ತು ವಿರೋಧ ಪಕ್ಷಗಳು ಆದಷ್ಟೂ ಸಮವಲ್ಲದಿದ್ದರೂ ಸಮರ್ಥವಾಗಿರಲಿ ಎಂದು ‌ಮತ ತೀರ್ಪು ನೀಡಿದಂತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...