Sunday, August 2, 2026
Sunday, August 2, 2026

Ravindra Kala Kshetra Bangalore ಚಿ.ಗೌರಿ ಮನೋಹರಿ ಭರತನಾಟ್ಯ ರಂಗಪ್ರವೇಶ

Date:

Ravindra Kala Kshetra Bangalore ಭದ್ರಾವತಿ ನಗರದ ಹೊಸಮನೆ ಮುಖ್ಯ ರಸ್ತೆಯ ಶ್ರೀ ಮುರುಳೀಧರ ಸಂಗೀತ ವಿದ್ಯಾಲಯ ಮತ್ತು ಬೆಂಗಳೂರಿನ ಉಲ್ಲಾಳ ಉಪ ನಗರದ ಮುರುಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯದ ಸಂಗೀತ ವಿದ್ವಾಂಸರ ಕುಟುಂಬದ ಕುಡಿ ೬ ನೇ ತರಗತಿಯ ೧೧ ವರ್ಷದ ಬಾಲಕಿ ಗೌರಿ ಮನೋಹರಿ ಭರತ ನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ.
ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಮುಂಭಾಗದ ಜೆ.ಸಿ ರಸ್ತೆಯ ಎಡಿಎ ರಂಗ ಮಂದಿರದಲ್ಲಿ ಮೇ: ೩೦ ರಂದು ಗುರುವಾರ ಸಂಜೆ ೬ ಗಂಟೆಗೆ ನಡೆಯಲಿದೆ. ಈ ಬಾಲಕಿಯು ಬೆಂಗಳೂರಿನ ಪ್ರಸಿದ್ದ ಸಂಗೀತ ವಿದ್ವಾನ್ ಗುರು ಪ್ರವೀಣ್‌ಕುಮಾರ್ ಅವರ ಶಿಷ್ಯೆಯಾಗಿದ್ದಾರೆ. ಬಾಲಕಿಯ ತಂದೆ ಇಂಜಿನಿಯರ್ ಹೆಚ್.ಎಸ್.ಕಿರಣ್ ಮತ್ತು ತಾಯಿ ಸಂಗೀತ ಕಲಾವಿದೆ ಡಾ: ವಿದ್ಯಾಲಕ್ಷ್ಮಿ ಅವರ ಪುತ್ರಿಯಾಗಿದ್ದಾಳೆ.
Ravindra Kala Kshetra Bangalore ವಿಶೇಷವೆಂದರೆ ಬಾಲಕಿಯ ಇಡೀ ಕುಟುಂಬದಲ್ಲಿ ಸುಮಾರು ೨೦ ಕ್ಕೂ ಹೆಚ್ಚು ಮಂದಿ ಸಂಗೀತ ವಿದ್ವಾಂಸರಾಗಿದ್ದಾರೆ. ಬಾಲಕಿಯ ತಾಯಿ ಡಾ: ವಿದ್ಯಾಲಕ್ಷ್ಮಿ ಅವರ ತಂದೆ (ಬಾಲಕಿಯ ಅಜ್ಜ) ಮುರುಳೀಧರ ಸಂಗೀತ ವಿದ್ಯಾಲಯದ ವಿದ್ವಾನ್ ಕೆ.ಎಸ್.ಮೋಹನ್ ಕುಮಾರ್ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ತಂದೆ (ಬಾಲಕಿಯ ಮುತ್ತಜ್ಜ) ದಿವಂಗತ ಕೆ.ಮಂಜಪ್ಪ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...