Monday, December 15, 2025
Monday, December 15, 2025

Department of Labor ನಿಯಮ ಬಾಹಿರವಾಗಿ ವಿತರಿಸಿದ ಕೆಲವು ಲ್ಯಾಪ್ ಟಾಪ್ ಗಳ ಬಗ್ಗೆ ಆಕ್ಷೇಪ

Date:

Department of Labour ಕಾರ್ಮಿಕ ಇಲಾಖೆಯಿಂದ 2024 ನೇ ಸಾಲಿನಲ್ಲಿ 56 ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್‌ನ್ನು ನೀಡಲಾ ಗಿತ್ತು. ಇವುಗಳಲ್ಲಿ ೬ ಲ್ಯಾಪ್ ಟಾಪ್ ಇವುಗಳಲ್ಲಿ ೨೬ ಫಲಾನುಭವಿಗಳನ್ನು ಸಂಘಟನೆಯಿಂದ ಪರಿಶೀಲಿಸಿದಾಗ ೬ ಲ್ಯಾಪ್ ಟಾಪ್‌ನ್ನು ಅರ್ಹರಲ್ಲದವರಿಗೆ ನೀಡಲಾಗಿದೆ. ನಿಜ ಫಲಾನು ಭವಿಗಳಿಗೆ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಕುರಿತು ಸಚಿವರಿಗೆ, ಕಾರ್ಮಿಕ ಇಲಾಖೆಗೆ, ಶಾಸಕರಿಗೆ ದೂರು ಸಲ್ಲಿಸಲಾಗಿದೆ ಎಂದು ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಎಂ.ಬಿ. ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ನಾವು ೫೬ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ಮಾತ್ರ ಹಂಚಿಕೆಯಾಗಿದೆ. ಇದರಲ್ಲೂ ೬ ಲ್ಯಾಪ್ ಟಾಪ್ ನ್ನು ನಿಯಮ ಬಾಹಿರ ವಾಗಿ, ನಕಲಿ ಕಾರ್ಮಿಕ ಮಕ್ಕಳಿಗೆ ನೀಡಲಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ತನಿಖೆಯಾU ಬೇಕು. ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯ ಸಿಗಬೇಕು ಎಂದರು.
Department of Labour ನಮ್ಮ ಸಂಘದ ಸದಸ್ಯರಿಗೆ ನ್ಯಾಯ ಸಿಗದ ಕಾರಣ ಸರ್ಕಾರಕ್ಕೆ ಪತ್ರ ಬರೆದ ಮೇಲೆ ಕಾರ್ಮಿಕ ನಿರೀಕ್ಷಕರು ಸ್ಥಳ ಪರಿಶೀಲನೆ ಮಾಡಿ, ಛಾಯಾ ಚಿತ್ರ ಮತ್ತು ವಿಡಿಯೋ ತೆಗೆದುಕೊಳ್ಳಲಾ ಗಿದೆ. ಅನರ್ಹ ಫಲಾನು ಭವಿಗಳು ಮಂಡಳಿಯ ಸೌಲಭ್ಯಗಳನ್ನು ಪಡೆದುಕೊಂಡಲ್ಲಿ ಕಚೇರಿಗೆ ಅಗತ್ಯ ದಾಖಲೆಗಳನ್ನು ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಮ್ಮ ಆರೋಪದ ನಂತರ ತಿಳಿಸಿರುತ್ತಾರೆ. ಕಾರ್ಮಿಕ ನಿರೀಕ್ಷಕರೂ ನಮಗೆ ನ್ಯಾಯ ಒದಗಿಸುವಲ್ಲಿ ವಿಫಲ ರಾಗಿದ್ದಾರೆ ಎಂದು ದೂರಿದರು.ನ್ಯಾಯಕ್ಕಾಗಿ ಸಂಘಟನೆ ಯಿಂದ ಹೋ ರಾಟ ನಡೆಸುವು ದಾಗಿ ಹೇಳಿ ದರು. ಸಂಘದ ಗೌರವಾಧ್ಯಕ್ಷ ರಾಮಚಂದ್ರ ಮೇಸ್ತ್ರಿ, ಪ್ರಧಾನ ಕಾರ್ಯ ದರ್ಶಿ ಸತೀಶ್, ಪ್ರಮುಖರಾದ ಉಮೇಶ್ ಸೂರಗುಪ್ಪೆ, ಸತೀಶ್ ಅಂಗಡಿ, ಅಣ್ಣಪ್ಪ ಕೆಳದಿ, ಶಂಕರಪ್ಪ, ಶಾಂತಾರಾಮ್ ಬೆಳೆಯೂರು, ಕೃಷ್ಣಮೂರ್ತಿ ಮೆಳವರಿಗೆ, ವೀರಪ್ಪ ಹಿರೇನೆಲ್ಲೂರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...