Akshay Co-Operative Society ಅಕ್ಷಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಜಿಲ್ಲಾ ಸಂಘ ವತಿಯಿಂದ ಇಲ್ಲಿನ ಸಂಘದ ಕಚೇರಿಯಲ್ಲಿ ಬಂಗಾರದ ಅಡಮಾನ ಸಾಲದ ಯೋಜನೆಗೆ ಚಾಲನೆ ನೀಡಲಾಯಿತು.
ಸಹಕಾರಿ ಸಂಘ ಸ್ಥಾಪನೆಗೊಂಡು 12 ವರ್ಷ ಪೂರ್ಣಗೊಂಡಿದೆ. ಸಂಸ್ಥೆಯು ಲಾಭದಾಯಕವಾಗಿ ಸಾಗುತ್ತಿದ್ದು, ಷೇರುದಾರರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲಕರವಾಗಿ ಬಂಗಾರ ಅಡಮಾನ ಸಾಲದ ಯೋಜನೆಯನ್ನು ಜಾರಿಗೆ ತಂದಿದೆ. ಸಹಕಾರಿ ಸಂಘ ಅಧ್ಯಕ್ಷ ಡಾ. ಸುರೇಶ್ ಕೆ.ಬಾಳೆಗುಂಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಸಂಘದ ಉಪಧ್ಯಕ್ಷ ಜಿ.ಎಚ್.ಮಂಜುನಾಥ್, ಮಾಜಿ ಅಧ್ಯಕ್ಷ ಎಚ್.ಎನ್.ಮಹೇಂದ್ರ, ಮಾಜಿ ಉಪಾಧ್ಯಕ್ಷ ಡಿ.ಕಿಶೋರ್ ಕುಮಾರ್, ಸಂಘದ ನಿರ್ದೇಶಕರಾದ ಎಚ್ಕೆ..ಪುರುಶೋತ್ತಮ,ಎಚ್.ರಾಮಲಿಂಗಪ್ಪ, ಎಂ.ಶ್ರೀದೇವಿ, ಜಾನಕಿ ದೇವರಾಜ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಎಂ.ಆನಂದ್ ಸೇರಿ ಸಿಬ್ಬಂದಿ ವರ್ಗ ಇದ್ದರು.
Akshay Co-Operative Society ಬಂಗಾರದ ಅಡಮಾನ ಸಾಲದ ಯೋಜನೆಯನ್ನು ಷೇರುದಾರರು ಹಾಗೂ ಸದಸ್ಯರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: ೦೮೧೮೨-೩೫೫೫೬೮ ಸಂಪರ್ಕಿಸಬಹುದು.