Sunday, December 14, 2025
Sunday, December 14, 2025

Klive Special Article ಈಶ್ವರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಈಶ್ವರಪ್ಪ

Date:

Klive Special Article ಶಿವಮೊಗ್ಗ ಲೋಕಸಭಾಕ್ಷೇತ್ರದ ಚುನಾವಣೆ ರಾಜ್ಯದ ಗಮನ ಸೆಳೆದಿದೆ. ಏಕೆಂದರೆ ಇಲ್ಲಿ ಅಭ್ಯರ್ಥಿಗಳಲ್ಲಿ ಈರ್ವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು. ಮತ್ತೊಂದು ಮಾಜಿ ಉಪಮುಖ್ಯಮಂತ್ರಿಯೇ ಅಭ್ಯರ್ಥಿ.

ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪನವರು ಪುತ್ರನಿಗೆ ಹಾವೇರಿ ಟಿಕೆಟ್ ನಿರೀಕ್ಷಿಸಿದ್ದರು.
ಆದರೆ ಒಳರಾಜಕಾರಣದಿಂದ ಫಲಿಸಲಿಲ್ಲ. ನೇರವಾಗಿ ಮಾಜಿ‌ ಮುಖ್ಯಮಂತ್ರಿ ಯಡಿಯೂರಪ್ಪನವರನ್ನೇ ಗುರಿಯಾಗಿಸಿದರು.
ಶಾಸಕ ಬಿ.ವೈ.ವಿಜಯೇಂದ್ರನ ಮೇಲೂ ಕೋಪ ಬಂತು. ಹಾಲಿ ಸಂಸದ ಬಿ.ವೈ.ರಾಘವೇಂದ್ರ ನ ಮೇಲೂ ಸೇಡು ಬಂತು.
ಒಟ್ಟಿನಲ್ಲಿ ಕುಟುಂಬ ರಾಜಕಾರಣದ ನೆಪ ಹೇಳಿ ವ್ಯಗ್ರರಾದರು.
ಬಂಡಾಯ ಅಂತ ಹೇಳಲಿಲ್ಲ. ಕಳೆದ ವಿಧಾನ ಸಭ ಚುನಾವಣೆಯ ಸೀಸನ್ನಿನಲ್ಲಿ
ಬಿಜೆಪಿಯಲ್ಲಿ ಹಿರಿತನದ ಪಟ್ಟ ಪಡೆದು , ಅಘೋಷಿತ ಚುನಾವಣಾ ರಾಜಕೀಯ ಸನ್ಯಾಸ
ಪಡೆದಿದ್ದರು.
ಆದರೆ ಈಗ ದೋಸೆ ಮಗುಚಿದಂತಾಗಿದೆ.
ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಧುಮುಕೇ ಬಿಟ್ಟರು.

ರಾಜ್ಯದ ಬಿಜೆಪಿ ಕಾರ್ಯಕರ್ತರ ನೋವಿನ ಧ್ವನಿಯಾಗಿ ಸ್ಪರ್ಧೆ ಎಂದರು. ಹಿಂದುತ್ವದ ಪರ ಧ್ವನಿ ಎಂದರು. ತಮ್ಮದು ರಾಷ್ಟ್ರಭಕ್ತರ ಸಮಿತಿ . ಬಿಜೆಪಿ ತೊರೆಯುವುದಿಲ್ಲ. ನನಗೆ ಬಿಜೆಪಿ ತಾಯಿ ಇದ್ದಂತೆ ಎಂದರು.ಆದರೆ ತಾಯಿ ಪಕ್ಷದ ಅಣತಿಯನ್ನ ಧಿಕ್ಕರಿಸಿದರು. ನಾಮಪತ್ರ ವಾಪಸ್ ಪಡೆಯಲಿಲ್ಲ.

ಅಬ್ಬರದ ಪ್ರಚಾರ ನಡೆಯಿತು. ಹಾಲಿ ಸಂಸದರ ಮೇಲೆ ಅಪ ಪ್ರಚಾರದ ದೂರನ್ನೂ ದಾಖಲಿಸಿದರು. ಪ್ರಚಾರದ ಎಲ್ಲ ಗಿಮಿಕ್ಕುಗಳನ್ನೂ ಎಲ್ಲರಂತೆ ಮಾಡಬೇಕಾಯಿತು. ಮಾಡಿದರು. ಕಾಂಗ್ರೆಸ್,ಜೆಡಿಎಸ್ ,ಮುಸ್ಲೀಮರು ತಮಗೆ ಪರವಾಗಿದ್ದಾರೆಂದೂ ಸಾರಿದರು. ಅಂತೂ ಶಿವಮೊಗ್ಗ ರಾಜಕೀಯ ರಣರಂಗದಲ್ಲಿ ಒಂದು ರೀತಿ ಧೂಳೆಬ್ಬಿಸಿದ ಹಾಗೆ ಆಯಿತು.

Klive Special Article ಮೊನ್ನೆ ಮಾಧ್ಯಮಗಳೊಂದಿಗೆ
ಅವರೇ ಹೇಳಿದರಂತೆ
” ಈಶ್ವರಪ್ಪ ಅಂದ್ರೆ ಬಿಜೆಪಿ. ಬಿಜೆಪಿ ಅಂದ್ರೆ ಈಶ್ವರಪ್ಪ. ಬಹಳಷ್ಟು ಮಂದಿ ಕಮಲಕ್ಕೇ ಮತ ನೀಡಿಬಿಟ್ಟಿದ್ದಾರೆ.
ಈಶ್ವರಪ್ಪ ಪಕ್ಷೇತರ ಅಂತ ಬಹಳ ಮತದಾರರಿಗೆ ತಿಳಿದೇ ಇಲ್ಲ.”

ಚುನಾವಣೆ, ಪ್ರಚಾರದ ಎಲ್ಲ ಮಗ್ಗುಲುಗಳನ್ನ ತಿಳಿದ ,ಪಳಗಿದ ಹುಲಿ ಈಶ್ವರಪ್ಪ. ಇಲ್ಲೇಕೆ ಮುಗ್ಗರಿಸಿದರು? ಎಂಬುದೇ ಪ್ರಶ್ನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...