Monday, December 15, 2025
Monday, December 15, 2025

Yoga ಮೇ 22 ರಿಂದ ಜೂನ್ 2 ರವರೆಗೆ ಮಲ್ಲಾಡಿಹಳ್ಳಿಯಲ್ಲಿ ಪಾತಂಜಲ ಮೂಲ ಯೋಗ ತರಬೇತಿ ಶಿಬಿರ

Date:

Yoga ಮಲ್ಲಾಡಿಹಳ್ಳಿಯಲ್ಲಿ ಮೇ 22-05-2024 ರಿಂದ 2-06-2024 ರವರೆಗೆ ಯೋಗಾಚಾರ್ಯ, ತಿರುಕ ನಾಮಾಂಕಿತ, ಅಭಿನವ ಧನ್ವಂತರಿ ಪರಮಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಕೃಪಾಶೀರ್ವಾದದ ಪಾತಂಜಲ ಮೂಲಯೋಗ ತರಬೇತಿ ಶಿಬಿರ ನಡೆಯಲಿದೆ.
ಆಶ್ರಮದ ಸುಂದರ ವಾತಾವರಣದಲ್ಲಿ ವಸತಿಯುತ ಶಿಬಿರ.
ಬೆಳಿಗ್ಗೆ 6.00ಗಂಟೆಗೆ ಯೋಗಾಭ್ಯಾಸದ ಕಲಿಕೆಯ ಮೂಲಕ ಪ್ರಾರಂಭವಾಗುವ ದಿನಚರಿ ರಾತ್ರಿ 8.00ಗಂಟೆಯವರೆಗೆ ವಿವಿಧ ತರಬೇತಿಗಳೊಂದಿಗೆ ನಡೆಯುತ್ತದೆ.

ಪ್ರತಿನಿತ್ಯ ಯೋಗತಜ್ಞರಿಂದ ಶ್ರೀ ರಾಘವೇಂದ್ರ ಸ್ಬಾಮೀಜಿಯವರ ಮಾದರಿಯಲ್ಲಿ ಪ್ರಾಯೋಗಿಕ ಮತ್ತು ಭೌದ್ಧಿಕ ತರಗತಿಗಳು.
ವಿಶೇಷ ಉಪನ್ಯಾಸಕರುಗಳಿಂದ ಬೆಳಿಗ್ಗೆ 10.30 ರಿಂದ 1.00 ರವರೆಗೆ ಯೋಗ ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ.

ಶಿಬಿರಕ್ಕೆ ಭಾಗವಹಿಸಿದ ಎಲ್ಲರಿಗೂ ವೈದ್ಯಕೀಯ ತಪಾಸಣೆ ಮತ್ತು ಸೂಕ್ತ ಪರಿಹಾರ ಮಾರ್ಗಸೂಚಿ.
ಸ್ತ್ರೀ ಪುರುಷರಿಗೆ ಪ್ರತ್ಯೇಕ ವಸತಿ ಸೌಲಭ್ಯ.
ಪ್ರತಿನಿತ್ಯ ಸಾಯಂಕಾಲ ಅಂಗಮರ್ದನ ತರಗತಿ ಜೊತೆಯಲ್ಲಿ ವೈದ್ಯರ ಮಾರ್ಗದರ್ಶನ ದಲ್ಲಿ ತಯಾರಿಸಿದ ವಿಶೇಷ ಕಷಾಯ.
ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಸಾತ್ವಿಕ ಭೋಜನ.

ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಟಿ-ಷರ್ಟ್, ಯೋಗಪುಸ್ತಕಗಳು, ಕ್ರಿಯಾ ವಸ್ತುಗಳು ಹಾಗೂ ಕೊನೆಯಲ್ಲಿ ಸರ್ಟಿಫಿಕೇಟ್ ಕೊಡಲಾಗುವುದು.

ಒಟ್ಟು ಶಿಬಿರ ಶುಲ್ಕ : 5500/-ರೂ.
ಶಿಬಿರದಲ್ಲಿ ಭಾಗವಹಿಸುವವರು, ಯೋಗಮ್ಯಾಟ್, ಮೇಲು ಹೊದಿಕೆ ತರುವುದು.
ಶಿಬಿರಾರ್ಥಿಗಳು ಬೆಲೆ ಬಾಳುವ ಸಾಮಾಗ್ರಿಗಳನ್ನು ತರಬಾರದು. ಸರಳ ಉಡುಪುಗಳನ್ನು ಮಾತ್ರ ತರುವುದು.
ಷುಗರ್,ಬಿ.ಪಿ., ಇತರೆ ಕಾಯಿಲೆಗಳಿಗೆ ಸೂಕ್ತ ಆಸನಗಳ ಮಾರ್ಗದರ್ಶನ.
ಸೂರ್ಯನಮಸ್ಕಾರದ ಜೊತೆಗೆ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ರಚಿತ ಗುರುನಮಸ್ಕಾರದ ಅಭ್ಯಾಸ ಬೋಧನೆ.

Yoga ಗಂಭೀರವಾದ ಕಾಯಿಲೆ ಇರುವವರು ಶಿಬಿರದ ಮೇಲ್ವಿಚಾರಕರಿಗೆ ಮೊದಲೇ ಮಾಹಿತಿ ನೀಡಬೇಕು.
ಶಿಬಿರಕ್ಕೆ ಬರುವಾಗ ಆಧಾರ್ ಕಾರ್ಡ್ ಮತ್ತು ಒಂದು ಪಾಸ್ ಪೋರ್ಟ್ ಸೈಜಿನ ಫೋಟೋ ತರವುದು.
ಮೇ 12 ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*
9448233921 ಸಂತೋಷ್ ಕುಮಾರ್
9972443134-ಕಿರಣ್ ಬಿ.ಪಿ
9980620938-ರಾಘವೇಂದ್ರ ಅವರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...