Monday, March 23, 2026
Monday, March 23, 2026

Kumar Bangarappa ನಿಮ್ಮ ನಟನೆ,ಡಾನ್ಸ್ ಎಲ್ಲವೂ ಸಿನಿಮಾರಂಗದಲ್ಲಿರಲಿ ರಾಜಕಾರಣದೊಂದಿಗೆ ಬೆರೆಸ ಬೇಡಿ- ಕುಮಾರ್ ಬಂಗಾರಪ್ಪ

Date:

Kumar Bangarappa ರಾಜಕಾರಣದಲ್ಲಿ ಡ್ಯಾನ್ಸ್ ಬೇಡ ಎಂದು ಕಾಂಗ್ರೆಸ್ ನ ಅಭ್ಯರ್ಥಿ ಗೀತರವರ ಪತಿ ಹಾಗೂ ನಟ ಶಿವರಾಜ್ ಕುಮಾರ್ ಗೆ ಸಲಹೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ‌ಮಾತನಾಡಿದ ಅವರು,
ಗೀತರಿಗೆ ಆಶೀರ್ವಾದ ಮಾಡಿದರೆ ಐದು ವರ್ಷ ನಿಮ್ಮೊಂದಿಗೆ ಇದ್ದು ಡ್ಯಾನ್ಸು, ಹಾಡು ಎಲ್ಲಾ ಮಾಡುವೆ ಎಂದು ಪ್ರಚಾರದಲ್ಲಿ ನಟ ಶಿವರಾಜ್ ಕುಮಾರ್ ಹೇಳ್ತಾ ಬಂದಿದ್ದಾರೆ. ನಿಮ್ಮ ನಟನೆ, ಡ್ಯಾನ್ಸ್ ಎಲ್ಲವೂ ಸಿನಿಮಾ ರಂಗದಲ್ಲಿ ಇರಲಿ ರಾಜಕಾರಣದೊಂದಿಗೆ ಬೆರಸಬೇಡಿ ಎಂದು ಸಲಹೆ ನೀಡಿದರು.
10 ವರ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೀತರವರನ್ನ ಕಣಕ್ಕಿಳಿಸಲಾಗಿತ್ತು. ಆದರೆ ತಮ್ಮ‌ ಮತಗಳನ್ನ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಕ. 2013 ರಲ್ಲಿ ಇವರುಗಳು ಸ್ವಾರ್ಥ ರಾಜಕಾರಣ ನಡೆಸಿರುವುದು ಅಚ್ಚಹಸಿರಾಗಿದೆ. ನಮ್ಮ ತಾಯಿ ಶಂಕುತಲಾ ದೇವಿಯನ್ನ 2013 ರಲ್ಲಿ ಕೀಮೋ ಥೆರಪಿ ಮಾಡಿಸಿಕೊಂಡು ಅಂಬ್ಯುಲೆನ್ಸ್ ಮೂಲಕ‌ ಭದ್ರಾವತಿಗೆ ಕರೆತಂದು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಇದು ಸ್ವಾರ್ಥ ಅಲ್ಲವೇ ಎಂದು ದೂರಿದರು.
ಬಗುರ್ ಹುಕುಂ ವಿಚಾರದಲ್ಲಿ ತೀನಾ‌ಶ್ರೀನಿವಾಸ್ ನನ್ನ ವಿರುದ್ಧ ಆರೋಪಿಸಿದ್ದಾರೆ.‌ ನ್ಯಾಯಾಲಯದ ಪ್ರಕರಣವನ್ನ ನಾನು ತೀರ್ಮಾನಿಸಲಾಗುತ್ತದಾ? ತೀನಾ ಅವರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದರು.

Kumar Bangarappa ಚಿತ್ರರಂಗ ನನ್ನ‌ಹಿಂದೆ ಎಂದು ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ.‌ ಇದು ಸತ್ಯಕ್ಕೆ ದೂರವಾದ ಮಾತು ಕಳೆದ ಬಾರಿ ದರ್ಶನ್ ಸುಮಲತಾರ ಪರ ಪ್ರಚಾರ ಮಾಡಿದ್ದರು‌ಈ ಬಾರಿ ಕಾಂಗ್ರೆಸ್ ನಲ್ಲಿಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಎಲ್ಲರೂ ಶಿವರಾಜ್ ಕುಮಾರ್ ಬೆನ್ನ‌ಹಿಂದೆ ಇಲ್ಲ ಎಂದರು.

ಶಿವರಾಜ್ ಕುಮಾರ್ ತನ್ನ ಪತ್ನಿಯನ್ನಗೆಲ್ಲಿಸಲು ಬಂದಿರುವುದಾಗಿ ಹೇಳ್ತಾರೆ. ರಾಜಕಾರಣ ಹೆಚ್ಚು ಗೊತ್ತಿಲ್ಲ ಎನ್ನುತ್ತಾರೆ.‌ ಸರಿ ಅಭ್ಯರ್ಥಿಗೆ ಕೇಳಿದರೆ ನನಗೂ ಗೊತ್ತಿಲ್ಲ ಎನ್ನುತ್ತಾರೆ ಮರು ಪ್ರಶ್ನಿಸಿದರೆ ನಾನು ಹೇಳುವಷ್ಟು ಬರೆದುಕೊಳ್ಳಿ ಎಂದು ತಾಕೀತು ಮಾಡ್ತಾರೆ. ದಬ್ವಾಳಿಕೆಯ ರಾಜಕಾರಣವನ್ನ ಸಹಿಸಲು ಆಗೊಲ್ಲ ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ...

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ...

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801...

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ...

Cheetah Attack ಮುತ್ತಗಿ ಗ್ರಾಮದ ರೈತನ ಮೇಲೆ ಚಿರತೆ ಹಠಾತ್ ದಾಳಿ. ಮೆಗ್ಗಾನ್ ಆಸ್ಪತ್ರೆಗೆ ರೈತ ದಾಖಲು.

Cheetah Attack ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದ ರೈತರ...