Monday, May 13, 2024
Monday, May 13, 2024

B.Y. Raghavendra ಜನ ಕಾಂಗ್ರೆಸ್”ಗ್ಯಾರಂಟಿ” ನೋಡಲ್ಲ. ಬಿಜೆಪಿ”ಗ್ಯಾರಂಟಿ” ನೋಡಿ ಮತ ಹಾಕುತ್ತಾರೆ-ಬಿ.ವೈ.ರಾಘವೇಂದ್ರ

Date:

B. Y. Raghavendra ಜನ ಕಾಂಗ್ರೆಸ್​ನ ಗ್ಯಾರಂಟಿ ನೋಡಲ್ಲ, ಮೋದಿ ಗ್ಯಾರಂಟಿ ನೋಡಿ ಮತ ಹಾಕುತ್ತಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜನ ಯಾವುದೇ ಗ್ಯಾರಂಟಿಯನ್ನು ನೋಡದೆ, ಮೋದಿ ಗ್ಯಾರಂಟಿ ನೋಡುತ್ತಿದ್ದಾರೆ. ಮೋದಿ ಗ್ಯಾರಂಟಿ ಅಂದ್ರೆ ಕೇವಲ ಅಕ್ಕಿ, ಬೇಳೆ ಅಲ್ಲ ದೇಶದ ರಕ್ಷಣೆ, ಇದರಿಂದ ಈ ಭಾರಿ ಜನ ಮೋದಿಗೆ ಬೆಂಬಲ ನೀಡುತ್ತಾರೆ ಎಂದರು.

B. Y. Raghavendra ಕಾಂಗ್ರೆಸ್​ ಪಕ್ಷದಿಂದ ಗ್ಯಾರಂಟಿಯಾಗಿ ಮಹಿಳೆಯರಿಗೆ 1 ಲಕ್ಷ ರೂ. ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಮತಕ್ಕಾಗಿ ಮತದಾರನ್ನು ತಪ್ಪುದಾರಿಗೆ ಹಿಂದೆಯೂ ಎಳೆಯೆಲಾಗಿತ್ತು, ಮುಂದೆಯೂ ಎಳೆಯಲಾಗುತ್ತಿದೆ. ನಮ್ಮ ದೇಶದಲ್ಲಿ 68 ಕೋಟಿ ಹೆಣ್ಣು ಮಕ್ಕಳಿದ್ದಾರೆ. ಅವರಿಗೆ 1 ಲಕ್ಷ ರೂ. ನೀಡಬೇಕಿದೆ. ಹಾಗಾದ್ರೆ 68 ಲಕ್ಷ ಕೋಟಿ ರೂ. ನೀಡಬೇಕಾಗುತ್ತದೆ. ನಮ್ಮ ದೇಶದ ಬಜೆಟ್ 45 ಲಕ್ಷ ಕೋಟಿ ರೂ. ಆಗಿದೆ. ಹಾಗಾದ್ರೆ ಹೆಚ್ಚುವರಿ ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ಕಳೆದ ಒಂದು ವಾರದಿಂದ ಈ ಬಗ್ಗೆ ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಈಗ ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ, 38 ಕೋಟಿ ಹೆಣ್ಣು ಮಕ್ಕಳಿಗೆ 38 ಲಕ್ಷ ಕೋಟಿ ರೂ. ಬೇಕಾಗುತ್ತದೆ ಎಂದರು. ಜನ ಒಂದು ಸಲ‌‌ ಮೋಸ ಹೋಗಬಹುದು, ಪದೇ ಪದೇ ಮೋಸ ಹೋಗಲ್ಲ, ಈ ಕುರಿತು ನಮ್ಮ ಮಹಿಳಾ ಮೋರ್ಚಾದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ನಡೆಸಲಿದ್ದಾರೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shankaracharya Jayanti ವಿಜಯನಗರದಲ್ಲಿಅಂಬಾರಿ ಗೌರವದೊಂದಿಗೆ ಶಂಕರ ಜಯಂತಿ ಆಚರಣೆ

ಪ್ರಪ್ರಥಮ ಬಾರಿಗೆ ಶಂಕರಾಚಾರ್ಯರಿಗೆ ಆನೆ ಅಂಬಾರಿಯ ಉತ್ಸವ Shankaracharya Jayanti ವೈಶಾಖ...

Online Fraud ಆನ್ ಲೈನ್ ಮೂಲಕ ನೌಕರಿ ಭರವಸೆಯಿಂದ ಮೋಸ ಹೋದ ಯುವತಿ

Online Fraud ಇಲ್ಲೊಬ್ಬ ಯುವತಿ ಆನ್ ಲೈನ್ ಮೋಸಕ್ಕೆ ಬಲಿಯಾಗಿದ್ದಾಳೆ. ಟೆಲಿಗ್ರಾಂ...

Karnataka Police ಸೌಳಿ ಗ್ರಾಮಕ್ಕೆ ನೀರು ಪೂರೈಸುವ ಪೈಪುಗಳ ಅಪಹರಣ

Karnataka Police ತೀರ್ಥಹಳ್ಳಿ ತಾಲೂಕಿನ ಸೌಳಿ ಗ್ರಾಮದ ಸಮೀಪ ಮಾಲತಿ ನದಿ...

Ayanur Manjunath ನೈಋತ್ಯ ಪದವೀಧರರ ಕ್ಷೇತ್ರ: ಕಾಂಗ್ರೆಸ್ ನಿಂದ ಬಿ ಫಾರ್ಮ್ ಪಡೆದ ಆಯನೂರು ಮಂಜುನಾಥ್

Ayanur Manjunath ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ನೈರುತ್ಯ ಪದವೀಧರ ಕ್ಷೇತ್ರದ...