Thursday, June 18, 2026
Thursday, June 18, 2026

Actor Dwarakeesh ಕನ್ನಡ ಸಿನಿಮಾಗಳ ಪ್ರಸಿದ್ಧ “ಪ್ರಚಂಡಕುಳ್ಳ” ಇನ್ನಿಲ್ಲ

Date:

Actor Dwarakeesh ಕನ್ನಡ ಸಿನಿಮಾಗಳ ಪ್ರಸಿದ್ಧ “ಪ್ರಚಂಡಕುಳ್ಳ” ಇನ್ನಿಲ್ಲ ಕನ್ನಡದ ಹಿರಿಯ ನಟ ,ನಿರ್ಮಾಪಕ ನಿರ್ದೇಶಕ ದ್ವಾರಕೀಶ್(81) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದ್ವಾರಕೀಶ್
ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ಮಾಧ್ಯಮಗಳಿಗೆ ದ್ವಾರಕೀಶ್ ಪುತ್ರ ಯೋಗೇಶ್ ಮಾಹಿತಿ ನೀಡಿದರು.
400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟನೆ, ಸ್ವಾಂಡಲ್ ವುಡ್ ನಲ್ಲಿ ಹೆಸರಾಗಿದ್ದ ಯಶಸ್ವಿ ಚಿತ್ರಗಳ ನಿರ್ಮಾಪಕರಾಗಿದ್ದರು.

ಹಾಸ್ಯನಟರಾಗಿ ತಮ್ಮದೇ ಅಭಿನಯದ ಛಾಪು ಹೊಂದಿದ್ದರು. ಬಾಲಕೃಷ್ಣ, ನರಸಿಂಹರಾಜು ನಂತರದಲ್ಲಿ ತಮ್ಮ “ಕುಳ್ಳ” ಪರ್ಸನಾಲಿಟಿಯಿಂದ
‘ರಾಜಾಕುಳ್ಳ ‘ಆಗಿ ಪ್ರಸಿದ್ಧರಾಗಿದ್ದರು.

19 ಆಗಸ್ಟ್ 1942 ರಲ್ಲಿ
ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನನ.
ತಂದೆ ಶಾಮ್ ರಾವ್,ತಾಯಿ ಜಯಮ್ಮ.

Actor Dwarakeesh ಕನ್ನಡ ಸಿನಿಮಾಗಳ ಪ್ರಸಿದ್ಧ “ಪ್ರಚಂಡಕುಳ್ಳ” ಇನ್ನಿಲ್ಲ ಮೊದಲ ಸಿನಿಮಾ ವೀರ ಸಂಕಲ್ಪ.(1964).
ಡಾ.ರಾಜ್ ಕುಮಾರ್,
ಶಂಕರ್ ನಾಗ್,‌ ವಿಷ್ಣುವರ್ಧನ್.
ಅಂಬರೀಶ್ ಮುಂತಾದ ಹಿರಿಯ ನಟರೊಂದಿಗೆ ಲೀಲಾಜಾಲವಾಗಿ
ಹಾಸ್ಯಾಭಿನಯ ಹಂಚಿಕೊಂಡಿದ್ದ ” ಪ್ರಚಂಡ ಕುಳ್ಳ” ದ್ವಾರಕೀಶ್.

ಮೇಯರ್ ಮುತ್ತಣ್ಣ ,*1966) ದ್ವಾರಕೀಶ್ ನಿರ್ಮಿಸಿದ ಮೊದಲ ಸಿನಿಮಾ. ನಂತರ 40 ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ.
ಅವರ ತಯಾರಿಕೆಯ ಚಿತ್ರಗಳು ಬಹುತೇಕ ಗಲ್ಲಾಪಟ್ಟಿಗೆ
ಬಾಚಿದ್ದವು.

“ದ್ವಾರಕೀಶ್ ಚಿತ್ರ”..ನಿರ್ಮಾಣ ಸಂಸ್ಥೆಯಡಿಯಲ್ಲಿ
ಕನ್ನಡದಲ್ಲಿ “ಸೂಪರ್ ಹಿಟ್” ಚಿತ್ರಗಳನ್ನ ನೀಡಿದ್ದರು.

ಈಗ ನಮ್ಮನ್ನಗಲಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕಿರಿಸಲಾಗಿದೆ

ಕನ್ನಡದ ಅಪಾರ ಅಭಿಮಾನಿಗಳು,ನಟರು ಅವರ ನಿಧನಕ್ಕೆ ಕಂಬನಿ ಮಿಡಿದ್ದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...