Tuesday, April 22, 2025
Tuesday, April 22, 2025

Narendra Modi ಮೋದಿ ಹೋಲಿಕೆಯ ಮನುಷ್ಯ ಈಶ್ವರಪ್ಪನವರಿಗೆ ಮೆರವಣಿಗೆಯಲ್ಲಿ ಸಾಥ್! ಒಂದು ಕ್ಷಣ ಜನ ತಬ್ಬಿಬ್ಬು

Date:

Narendra Modi ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಕೆ ಮಾಡಬಾರದು ಎಂದು ಬಿಜೆಪಿಯಿಂದ ಒತ್ತಡವಿತ್ತು. ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಮೋದಿ ಫೋಟೊಗಳಿದ್ದ ಧ್ವಜಗಳು ರಾರಾಜಿಸಿದವು. ಅಲ್ಲದೆ, ಮೋದಿಯ ತದ್ರೂಪಿಯೊಬ್ಬರು ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಅಚ್ಚರಿ ಮೂಡಿಸಿದರು.

ರಾರಾಜಿಸಿದ ಮೋದಿ ಫೊಟೋಗಳು
ನಾಮಪತ್ರ ಸಲ್ಲಿಕೆ ಹಿನ್ನೆಲೆ ಬೆಂಬಲಿಗರ ಮೆರವಣಿಗೆ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಭಾವಿಚಿತ್ರವಿರುವ ಧ್ವಜಗಳು ರಾರಾಜಿಸಿದವು. ಈಶ್ವರಪ್ಪ ಅವರ ಬೆಂಬಲಿಗರು ಮೆರವಣಿಗೆ ಉದ್ದಕ್ಕೂ ಮೋದಿ ಅವರ ಭಾವಚಿತ್ರವಿರುವ ಧ್ವಜಗಳನ್ನು ಹಿಡಿದು ಸಾಗಿದರು.

ಮೆರವಣಿಗೆಯಲ್ಲಿ ಮೋದಿ ಪ್ರತ್ಯಕ್ಷ

Narendra Modi ಮತ್ತೊಂದೆಡೆ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಅವರ ತದ್ರೋಪಿ ವ್ಯಕ್ತಿಯೊಬ್ಬರು ಕಾಣಿಸಿಕೊಂಡು ಜನರಲ್ಲಿ ಅಚ್ಚರಿ ಮೂಡಿಸಿದರು. ಎಲ್ಲರತ್ತ ಕೈ ಬೀಸುತ್ತ, ನಮಸ್ಕರಿಸುತ್ತ ತೆರದ ವಾಹನದಲ್ಲಿ ಸಾಗಿದರು. ಜನರು ಮೋದಿ ಅವರೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸಿದರು. ಮೋದಿ ಅವರನ್ನು ಹೋಲುವ ಇವರು ಉಡುಪಿ ಜಿಲ್ಲೆ ಹಿರಿಯಡ್ಕದ ಸದಾನಂದ ನಾಯಕ್‌. ಈಶ್ವರಪ್ಪ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಸದಾನಂದ ನಾಯಕ್‌ ಅವರನ್ನು ಕರೆತಂದಿದ್ದು ಗಮನ ಸೆಳೆಯಿತು.
ಮೋದಿ ಅವರಪ್ಪನ ಮನೆ ಆಸ್ತಿಯಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಮೋದಿ ಭಾವಚಿತ್ರ ಬಳಸಬಾರದು ಎಂದರು. ಮೋದಿ ಇವರಪ್ಪನ ಮನೆ ಆಸ್ತಿಯೇನು? ಇಡೀ ವಿಶ್ವನಾಯಕ. ಯಡಿಯೂರಪ್ಪ, ವಿಜಯೇಂದ್ರ ಮತ್ತು ರಾಘವೇಂದ್ರ ಅವರು ಮೂವರದ್ದೇ ಫೋಟೊ ಹಾಕಿಕೊಂಡು ಪ್ರಚಾರ ಮಾಡಲಿ. ಎಷ್ಟು ಮತ ಪಡೆಯುತ್ತಾರೆ ನೋಡೋಣ. ಇವತ್ತು ಮೋದಿ ಅವರಂತೆ ಕಾಣುವ ವ್ಯಕ್ತಿ ಬಂದಿದ್ದರು. ಹಾಗಾಗಿ ಮೋದಿ ಅವರೆ ಬಂದು ಇಲ್ಲಿ ಆಶೀರ್ವಾದ ಮಾಡಿದಂತಾಗಿದೆ ಎಂದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....

Dr. Raj Kumar ಡಾ.ರಾಜ್ ಅಭಿನಯದ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

Dr. Raj Kumar ವರನಟ ಡಾ ರಾಜ್ ಕುಮಾರ್ ರವರ ಜನ್ಮದಿನಾಚರಣೆ...

S.N.Chennabasappa ಜನಿವಾರ ತೆಗೆಸಿದ ಪ್ರಕರಣ, ಘಟನೆ‌ಮುಂದೆ ತಪ್ಪಿಸಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವಿಪ್ರ ಸಂಘಟನೆಯ ಮನವಿ

S.N.Chennabasappa ಶಿವಮೊಗ್ಗದ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ...