Tuesday, February 3, 2026
Tuesday, February 3, 2026

Madhu Bangarappa ಬಿ.ವೈ‌.ರಾಘವೇಂದ್ರಗೆ ಸುಳ್ಳಿನ ಸರದಾರ ಅವಾರ್ಡ್ ಕೊಡಬೇಕು- ಮಧು ಬಂಗಾರಪ್ಪ

Date:

Madhu Bangarappa ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾದ್ಯಮ ಮಿತ್ರರೊಂದಿಗೆ ಮಾತನಾಡಿದರು.

ಹಠ,ಛಲದಿಂದ ಚುನಾವಣೆ ಮಾಡುತ್ತಿದ್ದೇವೆ.ಗೀತಕ್ಕನನ್ನು ಜನರ ಬಳಿ ಕರೆದುಕೊಂಡು ಹೋಗುತ್ತಿದ್ದೇವೆ .ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಜನ ಉತ್ತಮ ಬೆಂಬಲ ನೀಡುತ್ತಿದ್ದಾರೆ.ವಿರೋಧ ಪಕ್ಷಗಳು ಹಗುರವಾಗಿ ಮಾತನಾಡಬಹುದು.ಅದಕ್ಕೆ ಮತದಾರರು ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.

ಯಾರೇ ಡಮ್ಮಿ ಎನ್ನಲಿ ಅದು ಅವರಿಗೆ ಅನ್ವಯ ಆಗಲ್ಲ.ಗ್ಯಾರಂಟಿ ಯೋಜನೆ ಮೂಲಕ ಹೆಚ್ಚಿನ ಬಹುಮತ ಪಡೆಯುತ್ತೇವೆ.ದೇಶದ ಜನರು ಬಿಜೆಪಿಯನ್ನು ಸೋಲಿಸುತ್ತಾರೆ.
ಸ್ಟಾರ್ ಕ್ಯಾಂಪೇನರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಸಂಸದರಿಗೆ ಜನರ ಬಳಿಗೆ ಹೋಗಲು ಧೈರ್ಯ ಇಲ್ಲ. ರಾಘವೇಂದ್ರ ನೋಡಿ ಅಳಬೇಕೋ,ನಗಬೇಕೋ ಗೊತ್ತಾಗುತ್ತಿಲ್ಲ.ಸಂಸದರಾಗಿ ಏನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.

Madhu Bangarappa ರಾಘವೇಂದ್ರ ಸುಳ್ಳಿನ ಸರದಾರ.
ಸುಳ್ಳಿನ ಸರದಾರ ಅವಾರ್ಡ್ ಕೊಡಬೇಕು. ಪಂಪ್ ಸೆಟ್ ರಾಜ್ಯದ ಜನರಿಗೆ ಯಾರು ಕೊಟ್ಟಿದ್ದು ಅಂತ ಹೇಳಬೇಕು.
ಸಂಸದ ರಾಘವೇಂದ್ರ ತಮ್ಮದೆ ಸಮಾವೇಶದಲ್ಲಿ ಹೇಳಲಿ ಎಂದರು.

ದೇಶ ಉಳಿದಿರುವುದು ಕಾಂಗ್ರೆಸ್ ನಿಂದ.ಬಿಜೆಪಿ ಅವರು ದೇಶವನ್ನು ಒಡೆದು ಆಳುತ್ತಿದ್ದೀರಾ. ರಾಮ ಜಪವನ್ನೆ ಈಗ ಬಿಜೆಪಿ ಅವರು ಬಿಟ್ಟಿದ್ದಾರೆ.ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಅನ್ನುತ್ತಾರೆ.ಶರಾವತಿ ಸಂತ್ರಸ್ತರಿಗೆ ಜೀವ ಕೊಟ್ಟಿದ್ದು ಕಾಗೋಡು ತಿಮ್ಮಪ್ಪ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...