Friday, April 18, 2025
Friday, April 18, 2025

Vadiraja Tirtha ಏಪ್ರಿಲ್ 10 ರಿಂದ ಸೋದೆ “ವಾದಿರಾಜ”ರ ದರ್ಶನಕ್ಕೆ ಸಮಯ ನಿರ್ಬಂಧ- ಶ್ರೀವಿಶ್ವ ವಲ್ಲಭ ತೀರ್ಥರು

Date:

Vadiraja Tirtha ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಮೂಲವೃಂದಾವನ ಸನ್ನಿಧಿ ಸೋದಾ ಕ್ಷೇತ್ರವು ಬಹು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಈಗಾಗಲೇ ಹಲವಾರು ಕಾಮಗಾರಿಗಳು ನಡೆದಿದೆ.

ಪ್ರಕೃತ ಶ್ರೀ ವಾದಿರಾಜರ ಮಂದಿರ ನಿರ್ಮಾಣ ಕಾರ್ಯವು ಆರಂಭಗೊಳ್ಳಲಿದ್ದು ಹಳೆಯ ಕಟ್ಟಡವನ್ನು ತೆರವು ಗೊಳಿಸುವ ಕೆಲಸ ಆರಂಭಗೊಳ್ಳಲಿದೆ. ಒಟ್ಟು ಮಂದಿರ ನಿರ್ಮಾಣ ಪೂರ್ಣಗೊಳ್ಳಲು ಎರಡು ವರ್ಷಗಳ ಅವಧಿ ಬೇಕಾಗಿದೆ. ಆದ್ದರಿಂದ ಶ್ರೀ ಗುರುರಾಜರ ಹಾಗೂ ಭೂತರಾಜರ ದರ್ಶನಕ್ಕೆ ಈ ಸಂದರ್ಭದಲ್ಲಿಯೂ ಎಲ್ಲರಿಗೂ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ಸೀಮಿತ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. 2024 ಏಪ್ರಿಲ್ 10 ನೇ ತಾರೀಕಿನಿಂದ ಪ್ರಾತಃ ಕಾಲ 5 ರಿಂದ 8 ರವರೆಗೆ ಹಾಗೂ ಸಂಜೆ 5.30 ರಿಂದ 7.30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿದೆ. ಉಳಿದ ಸಮಯದಲ್ಲಿ ಮಂದಿರ ನಿರ್ಮಾಣ ಕಾಮಗಾರಿ ನಡೆಯಲಿರುವದರಿಂದ ದರ್ಶನಕ್ಕೆ ಅವಕಾಶವಿಲ್ಲ .

Vadiraja Tirtha ಬಂದ ಎಲ್ಲಾ ಭಕ್ತರಿಗೆ ತೀರ್ಥಪ್ರಸಾದ ಹಾಗೂ ವಸತಿ ವ್ಯವಸ್ಥೆ ಎಂದಿನಂತೆ ಇರುತ್ತದೆ. ಇಷ್ಟಾರ್ಥ ಸಿದ್ಧಿ ಸೇವೆಯೂ ಇನ್ನು ಮಂದಿರ ನಿರ್ಮಾಣ ಪೂರ್ಣಗೊಳ್ಳುವವರೆಗೆ ಇರುವುದಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....