Thursday, June 18, 2026
Thursday, June 18, 2026

Cultural Evening ಮಾರ್ಚ್ 5 ರಂದು ಸಾಗರದ ಸಂಕಲನ ಬಚ್ವಗಾರು ಸಂಸ್ಥೆಯಿಂದ ಸಾಂಸ್ಕೃತಿಕ ಸಂಜೆ

Date:

Cultural Evening ಸಂಕಲನ ಬಚ್ಚಗಾರು ಸಂಸ್ಥೆ ಸಂಯೋಜನೆಯಲ್ಲಿ ಫೆಬ್ರವರಿ 20 ರಿಂದ ಮಾರ್ಚ್ 5 ರವರೆಗೆ ಪ್ರತಿದಿನ ಸಂಜೆ 06:30 ರಿಂದ ಶ್ರೀ ಶಂಕರ ಮಠದ ಸಭಾಂಗಣದಲ್ಲಿ ಉಪನ್ಯಾಸ ಮತ್ತು ಸಾಂಸ್ಕೃತಿಕ ಸಂಜೆಗಳು ಕಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಚಾಲಕ ಶುಂಠಿ ಸತ್ಯನಾರಾಯಣ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ವಿದ್ವಾಂಸರಿಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ ಹಾಗೂ ಸಂಪ್ರದಾಯ ಹಾಡು, ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆಬ್ರವರಿ 20 ರಿಂದ 25 ರವರೆಗೆ ಗದಗದ ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿಯವರಿಂದ ‘ ಸನಾತನ ಧರ್ಮ’ ಕುರಿತು ಉಪನ್ಯಾಸ, ಫೆಬ್ರವರಿ 26 ರಿಂದ 29 ರವರೆಗೆ ಸಿದ್ದಾಪುರ ತಾಲ್ಲೂಕು ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರಿಂದ ‘ಭಕ್ತನ ಲಕ್ಷಣಗಳು’ ( ಭಗವದ್ಗೀತೆಯ 12 ನೇ ಅಧ್ಯಾಯದ ಕೆಲವು ಶ್ಲೋಕಗಳನ್ನು ಆಧರಿಸಿ) ವಿಷಯ ಕುರಿತು ಉಪನ್ಯಾಸ ನೀಡುವರು.
ಮಾರ್ಚ್ 1 ರಂದು ಬೆಂಗಳೂರಿನ ಪ್ರಲ್ಹಾದ ಆಚಾರ್ಯ ಮತ್ತು ಮಕ್ಕಳಿಂದ ನೆರಳು ಬೆಳಕಿನಾಟ (ಶ್ಯಾಡೋ ಪ್ಲೇ), ಮಾರ್ಚ್ 2 ರಂದು ಕಾವ್ಯ-ಚಿತ್ರ-ಸಂಪ್ರದಾಯ ಹಾಡು- ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪ್ರಶಾಂತ ಮಧ್ಯಸ್ಥರಿಂದ ಕಾವ್ಯ, ಸತೀಶ್ ಯಲ್ಲಾಪುರ ಅವರಿಂದ ಚಿತ್ರ ರಚನೆ, ಅನ್ನಪೂರ್ಣ ರಮಾನಂದ ತಲವಾಟ ಅವರಿಂದ ಹಾಡು, ಗಣಪತಿ ಬಿ.ಆರ್.ಬಚ್ಚಗಾರು ಅವರಿಂದ ಭಕ್ತಿ ಸಂಗೀತ ನಡೆಯಲಿದೆ.
ಮಾರ್ಚ್ 3 ಮತ್ತು 4 ರಂದು ಸಂಸ್ಕೃತಿ ಚಿಂತಕ ಲಕ್ಷ್ಮೀಶ್ ತೋಳ್ಪಾಡಿಯವರಿಂದ ‘ ಮಾಂಡೋಕ್ಯೋಪನಿಷತ್’ ವಿಷಯ ಕುರಿತು ಉಪನ್ಯಾಸ, ಮಾರ್ಚ್ 5 ರಂದು ದೇರಾಜೆ ಸೀತಾರಾಮಯ್ಯನವರ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಲಕ್ಷ್ಮೀಶ್ ತೋಳ್ಪಾಡಿಯವರು ‘ಕಲೆ ಮತ್ತು ದೇರಾಜೆಯವರ ದಾರಿ’ ಕುರಿತು ಮಾತನಾಡುವರು. ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಎಸ್.ಭಟ್ Cultural Evening ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಡಾ.ನಾ.ಡಿಸೋಜ ಉಪಸ್ಥಿತರಿರುವರು.
ಗಾಯಕಿ ಪ್ರಭಾವತಿ ಮತ್ತು ಸಂಗಡಿಗರು ಹಾಗೂ ಸವಿತಾ ಮತ್ತು ಸಂಗಡಿಗರಿಂದ ಪ್ರತಿದಿನ ಸಂಜೆ 06:00 ರಿಂದ 6:25 ರವರೆಗೆ ಭಜನೆ ಕಾರ್ಯಕ್ರಮ ನಡೆಯುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...