Saturday, September 28, 2024
Saturday, September 28, 2024

Dalith Sangarsha Samiti ತರೀಕೆರೆ ತಹಶೀಲ್ದಾರ್ ಕಚೇರಿ ಎದುರು ದಸಂಸ ಪ್ರತಿಭಟನೆ

Date:

Dalith Sangarsha Samiti ಚಿಕ್ಕಮಗಳೂರಿನಲ್ಲಿ ನಿವೇಶನ ರಹಿತರ ಗುಡಿಸಲುಗಳನ್ನು ಏಕಾಏಕಿ ತೆರವುಗೊಳಿಸಿರುವ ಕ್ರಮವನ್ನು ವಿರೋಧಿಸಿ ತರೀಕೆರೆ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ದಸಂಸ ನೇತೃತ್ವದಲ್ಲಿ ನಿವೇಶನ ರಹಿತರ ಹೋರಾಟ ವೇದಿಕೆ ಮುಖಂಡರುಗಳು ಅಹೋರಾತ್ರಿ ಧರಣಿ ನಡೆಸಿ ಪ್ರತಿಭಟನೆಗೆ ಮುಂದಾದರು.

ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ತರೀಕೆರೆ ತಾಲ್ಲೂಕು ಕಸಬಾ ಹೋಬಳಿ ಹೆಚ್.ರಂಗಾಪುರದ ಗ್ರಾಮದ ಸರ್ವೆ ನಂ.೧೪ ರಲ್ಲಿ ೫೭.೧೬ ಎಕರೆ ಸರ್ಕಾ ರಿ ಜಮೀನಿನಲ್ಲಿ ನಿವೇಶನ ರಹಿತರು ಗುಡಿಸಲು ನಿರ್ಮಿಸಿಕೊಂಡು ಜೈ ಭೀಮ್ ನಗರವೆಂದು ನಾಮಕರಣ ಮಾಡಿ ವಾಸಿಸುತ್ತಿದ್ದರು ಎಂದರು.

Dalith Sangarsha Samiti ಈ ಭಾಗದಲ್ಲಿ ಕೆಲವು ಭೂಗಳ್ಳರು ಭೂಮಿ ಹೊಡೆಯಲು ಸಂಚು ರೂಪಿಸುವ ಸಲುವಾಗಿ ವಾಸಿಸುತ್ತಿದ್ದ ನಿವೇಶನ ರಹಿತರ ಗುಡಿಸಲುಗಳನ್ನು ಕಿತ್ತು ಸುಟ್ಟು ಹಾಕುವ ಜೊತೆಗೆ ಬಡ ನಿವಾಸಿಗಳಿಗೆ ಜೀವಭಯ ಸೃಷ್ಟಿಸಿ ಅವರನ್ನು ಹೊಕ್ಕಲೆಬ್ಬಿಸುವ ಕುತಂತ್ರ ಕೈಹಾಕಲಾಗಿದೆ ಎಂದು ಆರೋಪಿಸಿದರು.

ಇಷ್ಟೆಲ್ಲಾ ಅನ್ಯಾಯ ನಡೆದಿದ್ದರೂ ಕೂಡಾ ತಹಶೀಲ್ದಾರರು ರಾಜಕೀಯ ಒತ್ತಡಕ್ಕೆ ಮಣ ದು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಬಗ್ಗೆ ದಸಂಸ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ನಿರ್ಲಕ್ಷ್ಯ ದೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.

ಹೀಗಾಗಿ ಬಡವರ ಗುಡಿಸಲನ್ನು ತೆರವುಗೊಳಿಸಲು ಮುಂದಾದವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ನಿವೇ ಶನ ರಹಿತರಿಗೆ ನ್ಯಾಯ ಒದಗಿಸುವವರೆಗೂ ಅಹೋರಾತ್ರಿ ಧರಣ ನಡೆಸಲು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ಮಂಜುನಾಥ್ ನಂಬಿಯಾರ್, ಕುಮಾರ್, ತರೀಕೆರೆ ಅಹಿಂದಾ ಮುಖಂಡ ನರೇಂದ್ರ, ವೇದಿಕೆಯ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಮಧುಕುಮಾರ್, ಖಜಾಂಚಿ ಪರಶುರಾಮ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...