Sunday, August 2, 2026
Sunday, August 2, 2026

Akashavani Bhadravathi ವಜ್ರ ಮಹೋತ್ಸವದ ಅಂಗಳದಲ್ಲಿ ಆಕಾಶವಾಣಿ ಭದ್ರಾವತಿ

Date:

Akashavani Bhadravathi ಭದ್ರಾವತಿ ಆಕಾಶವಾಣಿ ಕೇಂದ್ರ ಆರಂಭವಾಗಿ 59ವರ್ಷ ಮುಗಿದು ಇದೀಗ 60ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ವಜ್ರ ಮಹೋತ್ಸವದ ಆರಂಭಕ್ಕೆ
ಚಾಲನೆಕೊಡುವ 59ನೇ ವಾರ್ಷಿಕೋತ್ಸವ ಈ ತಿಂಗಳ 7ರಂದು, ಬುಧವಾರ ಬೆಳಿಗ್ಗೆ 11 ಗಂಟೆಯಿ0ದ 12ಗಂಟೆಯವರೆಗೆ ನಡೆಯಲಿದೆ.

ಆಕಾಶವಾಣಿ ಭದ್ರಾವತಿಯ (ಕಾಗದನಗರ) ಆವರಣದಲ್ಲಿ ಕೇಳುಗರೊಂದಿಗೆ ವಜ್ರಮಹೋತ್ಸವ ಆರಂಭದ ಸಂಭ್ರಮಾಚರಣೆಗೆ ಮುನ್ನುಡಿ ಹಾಕುವ
ವಿಶೇಷ ಕಾರ್ಯಕ್ರಮವನ್ನು ನೇರಪ್ರಸಾರದೊಂದಿಗೆ ಆಯೋಜಿಸಲಾಗಿದೆ.

ಈ ಸಂಭ್ರಮಕ್ಕೆ ಮುನ್ನುಡಿ ಹಾಡಲು ಕೇಳುಗರ ಆಗಮನವನ್ನು
ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಅವರ
ಕುರಿತು ಪ್ರಸಾರವಾದ ಉಪನ್ಯಾಸ ಸರಣಿಯ ಪ್ರಶ್ನೆಗೆ ಸರಿ ಉತ್ತರ ನೀಡಿದ ಕೆಲ ಕೇಳುಗರಿಗೆ ಪ್ರಶಸ್ತಿಪತ್ರವನ್ನು ಕುವೆಂಪು ವಿ ವಿ ಯ ಕುಲಪತಿಗಳಾದ
ಪ್ರೊ.ಎಸ್. ವೆಂಕಟೇಶ ಅವರು ವಿತರಿಸಲಿದ್ದಾರೆ.

Akashavani Bhadravathi ವಜ್ರಮಹೋತ್ಸವ ವರ್ಷಾಚರಣೆಯ ಆರಂಭದ ಸಮಾರಂಭಕ್ಕೆ ತಮ್ಮ ಆಗಮನ ಹಾಗೂ ಉಪಸ್ಥಿತಿಯನ್ನು ಆಕಾಶವಾಣಿ
ಸಿಬ್ಬಂದಿವರ್ಗವು ಆದರದಿಂದ ಬಯಸುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...