Wednesday, September 16, 2026
Wednesday, September 16, 2026

Akashavani Bhadravathi ವಜ್ರ ಮಹೋತ್ಸವದ ಅಂಗಳದಲ್ಲಿ ಆಕಾಶವಾಣಿ ಭದ್ರಾವತಿ

Date:

Akashavani Bhadravathi ಭದ್ರಾವತಿ ಆಕಾಶವಾಣಿ ಕೇಂದ್ರ ಆರಂಭವಾಗಿ 59ವರ್ಷ ಮುಗಿದು ಇದೀಗ 60ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ವಜ್ರ ಮಹೋತ್ಸವದ ಆರಂಭಕ್ಕೆ
ಚಾಲನೆಕೊಡುವ 59ನೇ ವಾರ್ಷಿಕೋತ್ಸವ ಈ ತಿಂಗಳ 7ರಂದು, ಬುಧವಾರ ಬೆಳಿಗ್ಗೆ 11 ಗಂಟೆಯಿ0ದ 12ಗಂಟೆಯವರೆಗೆ ನಡೆಯಲಿದೆ.

ಆಕಾಶವಾಣಿ ಭದ್ರಾವತಿಯ (ಕಾಗದನಗರ) ಆವರಣದಲ್ಲಿ ಕೇಳುಗರೊಂದಿಗೆ ವಜ್ರಮಹೋತ್ಸವ ಆರಂಭದ ಸಂಭ್ರಮಾಚರಣೆಗೆ ಮುನ್ನುಡಿ ಹಾಕುವ
ವಿಶೇಷ ಕಾರ್ಯಕ್ರಮವನ್ನು ನೇರಪ್ರಸಾರದೊಂದಿಗೆ ಆಯೋಜಿಸಲಾಗಿದೆ.

ಈ ಸಂಭ್ರಮಕ್ಕೆ ಮುನ್ನುಡಿ ಹಾಡಲು ಕೇಳುಗರ ಆಗಮನವನ್ನು
ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಅವರ
ಕುರಿತು ಪ್ರಸಾರವಾದ ಉಪನ್ಯಾಸ ಸರಣಿಯ ಪ್ರಶ್ನೆಗೆ ಸರಿ ಉತ್ತರ ನೀಡಿದ ಕೆಲ ಕೇಳುಗರಿಗೆ ಪ್ರಶಸ್ತಿಪತ್ರವನ್ನು ಕುವೆಂಪು ವಿ ವಿ ಯ ಕುಲಪತಿಗಳಾದ
ಪ್ರೊ.ಎಸ್. ವೆಂಕಟೇಶ ಅವರು ವಿತರಿಸಲಿದ್ದಾರೆ.

Akashavani Bhadravathi ವಜ್ರಮಹೋತ್ಸವ ವರ್ಷಾಚರಣೆಯ ಆರಂಭದ ಸಮಾರಂಭಕ್ಕೆ ತಮ್ಮ ಆಗಮನ ಹಾಗೂ ಉಪಸ್ಥಿತಿಯನ್ನು ಆಕಾಶವಾಣಿ
ಸಿಬ್ಬಂದಿವರ್ಗವು ಆದರದಿಂದ ಬಯಸುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...

B.Y.Raghavendra ಸ್ಥಳೀಯರ ಆಹವಾಲು ಕೇಳದೇ , ವಾಸ್ತವ ಸ್ಥಿತಿ ಅರಿಯದೇ ಕಸ್ತೂರಿ ರಂಗನ್ ವರದಿ ನೀಡಲಾಗಿದೆ- ಬಿ.ವೈ.ರಾಘವೇಂದ್ರ

B.Y.Raghavendra ಕಸ್ತೂರಿ ರಂಗನ್‌ ಸಮಿತಿಯ ಶಿಫಾರಸ್ಸುಗಳಲ್ಲಿ ಕೆಲವು ಮಾರ್ಪಾಡುಗೊಳಿಸಿ, ಅರಣ್ಯ ಭೂಮಿಯೆಂದು...