Monday, February 2, 2026
Monday, February 2, 2026

Akashavani Bhadravathi ವಜ್ರ ಮಹೋತ್ಸವದ ಅಂಗಳದಲ್ಲಿ ಆಕಾಶವಾಣಿ ಭದ್ರಾವತಿ

Date:

Akashavani Bhadravathi ಭದ್ರಾವತಿ ಆಕಾಶವಾಣಿ ಕೇಂದ್ರ ಆರಂಭವಾಗಿ 59ವರ್ಷ ಮುಗಿದು ಇದೀಗ 60ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ವಜ್ರ ಮಹೋತ್ಸವದ ಆರಂಭಕ್ಕೆ
ಚಾಲನೆಕೊಡುವ 59ನೇ ವಾರ್ಷಿಕೋತ್ಸವ ಈ ತಿಂಗಳ 7ರಂದು, ಬುಧವಾರ ಬೆಳಿಗ್ಗೆ 11 ಗಂಟೆಯಿ0ದ 12ಗಂಟೆಯವರೆಗೆ ನಡೆಯಲಿದೆ.

ಆಕಾಶವಾಣಿ ಭದ್ರಾವತಿಯ (ಕಾಗದನಗರ) ಆವರಣದಲ್ಲಿ ಕೇಳುಗರೊಂದಿಗೆ ವಜ್ರಮಹೋತ್ಸವ ಆರಂಭದ ಸಂಭ್ರಮಾಚರಣೆಗೆ ಮುನ್ನುಡಿ ಹಾಕುವ
ವಿಶೇಷ ಕಾರ್ಯಕ್ರಮವನ್ನು ನೇರಪ್ರಸಾರದೊಂದಿಗೆ ಆಯೋಜಿಸಲಾಗಿದೆ.

ಈ ಸಂಭ್ರಮಕ್ಕೆ ಮುನ್ನುಡಿ ಹಾಡಲು ಕೇಳುಗರ ಆಗಮನವನ್ನು
ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಅವರ
ಕುರಿತು ಪ್ರಸಾರವಾದ ಉಪನ್ಯಾಸ ಸರಣಿಯ ಪ್ರಶ್ನೆಗೆ ಸರಿ ಉತ್ತರ ನೀಡಿದ ಕೆಲ ಕೇಳುಗರಿಗೆ ಪ್ರಶಸ್ತಿಪತ್ರವನ್ನು ಕುವೆಂಪು ವಿ ವಿ ಯ ಕುಲಪತಿಗಳಾದ
ಪ್ರೊ.ಎಸ್. ವೆಂಕಟೇಶ ಅವರು ವಿತರಿಸಲಿದ್ದಾರೆ.

Akashavani Bhadravathi ವಜ್ರಮಹೋತ್ಸವ ವರ್ಷಾಚರಣೆಯ ಆರಂಭದ ಸಮಾರಂಭಕ್ಕೆ ತಮ್ಮ ಆಗಮನ ಹಾಗೂ ಉಪಸ್ಥಿತಿಯನ್ನು ಆಕಾಶವಾಣಿ
ಸಿಬ್ಬಂದಿವರ್ಗವು ಆದರದಿಂದ ಬಯಸುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...