Friday, April 25, 2025
Friday, April 25, 2025

BJP Shivamogga ನಮ್ಮ ಮನೆ ಮನಗಳನ್ನ ಸ್ವಚ್ಛಗೊಳಿಸಿ ರಾಮನ ಕೃಪೆಗೆ ಪಾತ್ರರಾಗೋಣ – ಶಾಸಕ ಡಿ.ಎಸ್.ಅರುಣ್

Date:

BJP Shivamogga ರಾಮನ ಭಕ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಪರಿವಾರದವರಿಂದ. ದೇವಸ್ಥಾನಗಳ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಕಳೆದ ಆರು ದಿನಗಳಿಂದ ಶಿವಮೊಗ್ಗ ನಗರದ ವಿನಾಯಕ ನಗರ ರವೀಂದ್ರ ನಗರ ರಾಜೇಂದ್ರ ನಗರ ಗಾಂಧಿನಗರ ಹಾಗೂ ಹತ್ತನೇ ವಾರ್ಡಗಳಲ್ಲಿ ಬರುವಂತಹ ಎಲ್ಲಾ ದೇವಸ್ಥಾನಗಳನ್ನು ಎಲ್ಲಾ ರಾಮಭಕ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸಂಘ ಪರಿವಾರದವರು ಸ್ವಚ್ಛತೆ ಮಾಡುವುದರ ಮುಖಾಂತರ ರಾಮನಿಗೆ ಸೇವೆ ಸಲ್ಲಿಸಿ ರಾಮ ತಾರಕ ಮಂತ್ರವನ್ನು ಹೇಳಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಅವರು ಮಾತನಾಡುತ್ತಾ 22ನೇ ತಾರೀಕು ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರದ ಪೂರ್ವಭಾವಿ ತಯಾರಿಯಾಗಿ ದೇಶದ ಎಲ್ಲಾ ಭಾಗಗಳನ್ನು ದೇವಸ್ಥಾನಗಳನ್ನ ಭಕ್ತಿ ಭಾವದಿಂದ ಶ್ರದ್ದೆಯಿಂದ ಸ್ವಚ್ಛತೆಗೊಳಿಸುವುದರ ಮುಖಾಂತರ ರಾಮನಿಗೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಎಲ್ಲರೂ ಹಳ್ಳಿಗಳು ಇರಬಹುದು ಬಡಾವಣೆಗೆ ಇರಬಹುದು ತಮ್ಮ ಮನೆ ಮುಂಭಾಗ ಇರುವ ದೇವಸ್ಥಾನಗಳನ್ನು ಸ್ವಚ್ಛತೆಯನ್ನು ಮಾಡುವುದರ ಮುಖಾಂತರ ನಮ್ಮ ಮನೆ ಮನಗಳನ್ನು ಸ್ವಚ್ಛ ಗೊಳಿಸಿಕೊಂಡು ರಾಮನ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

BJP Shivamogga ಈ ಆರು ದಿನಗಳಿಂದ ನಡೆದ ಸ್ವಚ್ಛತಾ ಕಾರ್ಯದಲ್ಲಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಆರತಿ ಆಮ ಪ್ರಕಾಶ್. ಆಮ ಪ್ರಕಾಶ್. ಬಾಲು. ರಂಗನಾಥ್
ಎ ಚ್ ರಮೇಶ್. ಎಸ್. ಗಣೇಶ್ ವೆಂಕಟೇಶ್. ರಾಜೇಂದ್ರ. ದಿನೇಶ್ .ಮುರುಗನ್ ಸತೀಶ್.. ಲಿಂಗರಾಜು.. ವಿನೋದ. ಜಿ ವಿಜಯ್ ಕುಮಾರ್.. ಮಹೇಶ್. ಸುಧಾಕರ್.
ಸತ್ಯ ನಾರಾಯಣ. ಅರುಣ್ ಜೀ.. ಸತೀಶ್. ರಾಮನ ಭಕ್ತರು..ಮಂಡಿ ಗಣೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...