Ayodhya RamMandir Mantrakshate Distribution ಚಿಕ್ಕಮಗಳೂರು, ತಾಲ್ಲೂಕಿನ ಬೊಗಸೆ ಗ್ರಾಮದ ಶ್ರೀ ತಿರುಮಲ ಲಕ್ಷ್ಮೀ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದಿoದ ಬಂದ0ತಹ ಮಂತ್ರಾಕ್ಷತೆಯನ್ನು ಪೂಜೆ ಸಲ್ಲಿಸುವ ಮೂಲಕ ಗ್ರಾಮದ ಪ್ರತಿ ಮನೆಗಳಿಗೆ ಹಂಚುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಈ ವೇಳೆ ಕಡವಂತಿ ಗ್ರಾ.ಪಂ. ಸದಸ್ಯೆ ವಿನೋದ್ ಬೊಗಸೆ ಮಾತನಾಡಿ ಬಾಸಾಪುರ, ಕಡವಂತಿ ಹಾಗೂ ಬೊಗಸೆ ಗ್ರಾಮದ ಪ್ರತಿ ಮನೆಗಳಿಗೆ ಮಂತ್ರಾಕ್ಷತೆಯನ್ನು ವಿತರಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು ನಿವಾಸಿಗ ಳಲ್ಲಿ ಪರಸ್ಪರ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಅಯೋಧ್ಯೆ ಮಂತ್ರಾಕ್ಷತೆಯನ್ನು ವಿತರಿಸಲಾಗಿದೆ ಎಂದರು.
ಇದೇ ಜನವರಿ 22 ರಂದು ಉತ್ತರ ಪ್ರದೇಶ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದ್ದು ಪ್ರತಿ ನಿವಾಸಿಗಳು ಅಯೋಧ್ಯೆಗೆ ತೆರಳಲಾಗದಿದ್ದರೂ ಅಂದಿನ ದಿನ ನಿವಾಸದಲ್ಲೇ ದೀಪಗ ಳನ್ನು ಬೆಳಕಿಸುವ ಮೂಲಕ ಹಿಂದೂಸoಪ್ರದಾಯದ ಹಿರಿಮೆಯನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು.
Ayodhya RamMandir Mantrakshate Distribution ಈ ಸಂದರ್ಭದಲ್ಲಿ ಸ್ಥಳೀಯರಾದ ಸತೀಶ್, ಮುಕುಂದ ಶೆಟ್ಟಿ, ಶಂಕರಪ್ಪ ಶೆಟ್ಟಿ ದಾನಪ್ಪ ಶೆಟ್ಟಿ, ಸಹನಾ, ವನಿತಾ, ಹೋವಮ್ಮ, ನಿರ್ಮಲ ಸಾವಿತ್ರಿ ಚಂದ್ರಮ್ಮ, ನಾಗೇಶ, ವೆಂಕಟೇಶ್, ಸುದೀಪ್, ರುದ್ರ, ಅರ್ಚಕರಾದ ದಿನೇಶ್ ಮತ್ತಿತರರು ಹಾಜರಿದ್ದರು.