Monday, May 19, 2025
Monday, May 19, 2025

BJP Karnataka ರಾಮಭಕ್ತರನ್ನ ಕೆಣಕಿದರೆ ಕಾಂಗ್ರೆಸ್ ಸರ್ಕಾರ ಧೂಳಿಪಟವಾದೀತು- ಬಿಜೆಪಿ ಎಚ್ಚರಿಕೆ

Date:

BJP Karnataka ರಾಮಭಕ್ತರನ್ನು ಕೆಣಕಿದರೆ
ಕಾಂಗ್ರೆಸ್ ಸರ್ಕಾರ ಧೂಳಿಪಟವಾದೀತು ಎಚ್ಚರ”
ದೇಶದ ಜನರ 5 ದಶಕಗಳ ಕನಸು ನನಸಾಗುತ್ತಿರುವ ಪವಿತ್ರ ರಾಮಮಂದಿರ ಉದ್ಘಾಟನೆಯ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ಹುಬ್ಬಳ್ಳಿಯಲ್ಲಿ ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಭಾಗಿಯಾಗಿದ್ದ, 31 ವರ್ಷದ ಹಳೆಯ ಪ್ರಕರಣಗಳನ್ನು ಕೆದಕಿ ಶ್ರೀಕಾಂತ್ ಪೂಜಾರಿ ಸೇರಿದಂತೆ ರಾಮ ಭಕ್ತರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಭವ್ಯ ಶ್ರೀರಾಮ ಮಂದಿರ ತಲೆಯೆತ್ತಿರುವುದನ್ನು ಸಹಿಸದೆ, ಓಲೈಕೆ ರಾಜಕಾರಣಕ್ಕೆ ಕಟಿಬಿದ್ದು ಹಿಂದೂ ಕಾರ್ಯಕರ್ತರು ಹಾಗೂ ರಾಮಭಕ್ತರನ್ನು ಜೈಲಿಗಟ್ಟುವ ಹುನ್ನಾರ ನಡೆಸಲು ರೂಪಿಸಿರುವ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರವನ್ನು ಖಂಡಿಸಿ, ತಕ್ಷಣ ಹಿಂದೂ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿ ರಾಮವಿರೋಧಿ ನಿಲುವುಗಳನ್ನು ಕೈಬಿಡುವಂತೆ ಆಗ್ರಹಿಸಲಾಯಿತು.

BJP Karnataka ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವರು ಹಾಗೂ ಸಂಸದರಾದ ಶ್ರೀ ಡಿ.ವಿ ಸದಾನಂದ ಗೌಡ, ಸಂಸದರಾದ ಶ್ರೀ ಪಿ.ಸಿ ಮೋಹನ್, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಡಾ.ಅಶ್ವಥ್ ನಾರಾಯಣ್ ಅವರು ಸೇರಿದಂತೆ ಬೆಂಗಳೂರಿನ ಎಲ್ಲಾ ಶಾಸಕರುಗಳು, ರಾಜ್ಯ ಉಪಾಧ್ಯಕ್ಷರುಗಳು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಶ್ರೀರಾಮ ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Guarantee scheme ಜನ ಸಾಮಾನ್ಯರ ಬದುಕಿಗೆ ಗ್ಯಾರಂಟಿ ಯೋಜನೆಗಳು ಬೆಳಕಾಗಿವೆ

Guarantee scheme ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ನಾಡಿನ...

Klive Special Article ಭಯೋತ್ಪಾದನೆ‌ ಜಾಗತಿಕ ಜಾಗೃತಿಗೆಸರ್ವಸಮ್ಮತ ಸರ್ವಪಕ್ಷ‌ ನಿಯೋಗ.

Klive Special Article ಪೆಹಲ್ಗಾಂ ದುರಂತದ ನಂತರ ನಡೆದ ಬೆಳವಣಿಗೆಗಳಲ್ಲಿಮೂರು ಸಂಗತಿಗಳು ಸುದ್ದಿಮನೆಯನ್ನ...

Rajesh Keelambi “ಶಾಖಾಹಾರಿ” ನಿರ್ಮಾಪಕ ರಾಜೇಶ್ ಕೀಳಂಬಿ‌ ಅವರಿಗೆಡಾ.ಪುನೀತ್ ರಾಜ್ ಕುಮಾರ್ ಚೊಚ್ಚಲ ನಿರ್ಮಾಪಕ  ಪ್ರಶಸ್ತಿ

Rajesh Keelambi ಶಾಖಾಹಾರಿ ಚಿತ್ರದ ನಿರ್ಮಾಪಕಕೀಳಂಬಿ‌ ಮೀಡಿಯಾ ಲ್ಯಾಬ್ ಸಂಸ್ಥೆಯ ಎಂ.ಡಿ....

Shimog News ಹಿರಿಯೂರು ಕೃಷ್ಣಮೂರ್ತಿ ಸ್ಮರಣೀಯ ವ್ಯಕ್ತಿ,- ದತ್ತಾತ್ರೇಯ ಹೊಸಬಾಳೆ

Shimog News ತಾ.17-5-25 ರ ಶನಿವಾರ ಸಂಜೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ...