Voter Awareness Programme ಮತದಾರರ ಜಾಗೃತಿ ಮತ್ತು ಇವಿಎಂ ಮಷಿನ್ಗಳ ಪ್ರಾತ್ಯಕ್ಷಿಕೆಗಾಗಿ ತಯಾರಿಸಲಾದ ಎಂಡಿವಿ ಮೊಬೈಲ್ ಡೆಮಾನ್ಸ್ಟ್ರೇಷನ್ ವಾಹನಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಾದ
ಡಾ. ಸೆಲ್ವಮಣಿ ಆರ್ ಇವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ವಿದ್ಯುನ್ಮಾನ ಯಂತ್ರಗಳ ಬಳಕೆ ಮತ್ತು ನಿಖರತೆ ಬಗ್ಗೆ ತಿಳಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ನಗರ ಮತ್ತು ಹಳ್ಳಿಗಳ ಎಲ್ಲ ಮತದಾರರಿಗೆ ಈ ಸಂಚಾರಿ ವಾಹನ ತಲುಪಲಿದ್ದು, ಮಹಾನಗರಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ 113 ಕ್ಷೇತ್ರದ ಎಲ್ಲ ಮತಗಟ್ಟೆಗಳಿಗೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಲಿದೆ.
Voter Awareness Programme ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳಾದ ಸ್ನೇಹಲ್ ಸುಧಾಕರ್ ಲೋಖಂಡೆ, ಮಹಾನಗರಪಾಲಿಕೆಯ ಆಫೀಸ್ ಅಡ್ಮಿನ್ ತುಷಾರ್, ರಾಜ್ಯಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮ್ಮದ್ ಫರ್ವೀಜ್, ಎ ಡಿ ಆದ ಸುಪ್ರಿಯ ಮತ್ತು ಅಧಿಕಾರಿಗಳು ಸಾರ್ವಜನಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.