Tuesday, March 24, 2026
Tuesday, March 24, 2026

Youth Army ಜಿಲ್ಲಾ ಕುಳುವ ಯುವಸೇನೆ ಅಧ್ಯಕ್ಷರಾಗಿ ಲೋಕೇಶ್ ಪೈಲ್ವಾನ್ ಆಯ್ಕೆ

Date:

Youth Army ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಕುಳುವ ಯುವ ಸೇನೆಯ ಜಿಲ್ಲಾಧ್ಯಕ್ಷರಾಗಿ ಲೋಕೇಶ್‌ ಫೈಲ್ವಾನ್‌ ನೇಮಕಗೊಂಡರು, ಈ ಸಂದರ್ಭದಲ್ಲಿ ಮಾತಾನಾಡಿದ ಲೋಕೇಶ್‌ ರವರು 28-12-2023ರಂದು ಅಧಿಕೃತವಾಗಿ ಕುಳುವ ಯುವ ಸೇನೆಯ ಮೊದಲ ಪೋಸ್ಟರ್‌ ಬಿಡುಗಡೆ ಮಾಡುತ್ತಿದ್ದೇವೆ ಈ ಸದಸ್ಯತ್ವ ಅಭಿಯಾನದ ಪೋಸ್ಟರ್‌ ಬಿಡುಗಡೆಯನ್ನು ಪತ್ರಕರ್ತರಾದ ಗಾರಾ.ಶ್ರೀನಿವಾಸ್‌ ರವರಿಂದ ಚಾಲನೆ ನೀಡುತ್ತಿದ್ದೇವೆ.

ಕರ್ನಾಟಕದಲ್ಲಿ ಯುವಕರಿಗಾಗಿ ಪಡೆ ಇದಾಗಿದ್ದು ಮೊದಲ ಸಂಘಟನೆ ಎಂದೇ ಹೇಳಲು ಬಲು ನೋವಿನ ಸಂಗತಿಯಾಗಿದೆ. ಯುವಕರಿಂದ-ಯುವಕರಿಗಾಗಿ ನಾವುಗಳು ಸಂಘಟಿತವಾಗಿ ನಿಲ್ಲುವ ಈ ಸಂದರ್ಭದ ತನಕದಿ ಶತಮಾನಗಳೇ ಮುಗಿದು ಹೋಗಿದೆ, ಇದೀಗ ಸರಳವಾಗಿ, ಸಣ್ಣ ಮಟ್ಟದಲ್ಲಿ ಈ ಸೇನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇಂದು ನಾವೆಲ್ಲಾ ಸೇರಿಕೊಂಡಿರುವುದು ಜಾಗೃತದ ಸಂದೇಶವಾಗಿದೆ ಎಂದು ಲೋಕೇಶ್‌ ಫೈಲ್ವಾನ್‌ ರವರು ಅಭಿಪ್ರಾಯಿಸಿದರು.

ಇನ್ನೂ ಸಮುದಾಯದ ಮೇಲಿನ ಅನ್ಯಾಯ, ದಬ್ಬಾಳಿಕೆಗಳ ವಿರುದ್ದ ಸಿಡಿದೇಳುವ, ಕಾನೂನಾತ್ಮಕವಾಗಿ ಪ್ರತಿಭಟಿಸುವ ಕುಳುವ ಯುವ ಸೇನೆಯು ಸನ್ನದ್ದವಾಗಿದೆ ಎಂದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೊರಮ,ಕೊರಮ ಶೆಟ್ಟಿ, ಕೊರಚ,ಕೊರವರ್, ಭಜಂತ್ರಿ, ಇನ್ನುಳಿದ ಉಪ ಪಂಗಡಗಳ ಸಮುದಾಯದ ಯುವಕರಿಗೆ ಸದಸ್ಯತ್ವವನ್ನು ಪಡೆಯಲು ಮುಂದಿನ ದಿನಗಳಲ್ಲಿ ಪ್ರಕಟಣೆಯ ಮೂಲಕ ತಿಳಿಸಲಾಗುವುದು ಎಂದು ಲೋಕೇಶ್‌ ಫೈಲ್ವಾನ್‌ ತಿಳಿಸಿದರು.

Youth Army ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಿಗೆ ಶುಭ ಹಾರೈಸಿ ಪೋಸ್ಟರ್‌ ಬಿಡುಗಡೆಗೊಳಿಸಿದ ಪತ್ರಕರ್ತರಾದ ಗಾರಾ.ಶ್ರೀನಿವಾಸ್‌ ಸೇರಿದಂತೆ ಚಂದ್ರಪ್ಪ, ದೇವರಾಜ್‌, ನಾಗೇಶ್‌, ಗೋವಿಂದಪ್ಪ, ಕಾಮೇಶ್‌, ಸುರೇಶ್‌, ಗುರು, ರಂಗನಾಥ್‌, ರಮೇಶ್‌ ದೇವೇಂದ್ರಪ್ಪ, ಸುಚಿತ್‌, ಕುಮಾರ್‌ ಚಂದನಕೇರೆ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...