Thursday, September 17, 2026
Thursday, September 17, 2026

B. Y. Vijayendra ಶಿಕಾರಿಪುರದ ಜನರ ಪ್ರೀತಿ ಅನನ್ಯ.ಜನರ ಹಾರೈಕೆಯೇ ಬಿಜೆಪಿ ಹೊಣೆಗಾರಿಕೆಗೆ ಶಕ್ತಿ ನೀಡಿದೆ- ಬಿ.ವೈ.ವಿಜಯೇಂದ್ರ

Date:

B. Y. Vijayendra ಶಿಕಾರಿಪುರದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ನೂತನ ರಾಜ್ಯಾಧ್ಯಕ್ಷರು ಹಾಗೂ ವಿರೋಧಪಕ್ಷ ನಾಯಕರ ಅಭಿನಂದನಾ ಸಮಾರಂಭವನ್ನು ಬಿಜೆಪಿ ರಾಜ್ಯಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡಿನ ಕೋಟ್ಯಾಂತರ ಹೃದಯಗಳಲ್ಲಿ ನೆಲೆಸಿರುವ ಹೋರಾಟವನ್ನೇ ಉಸಿರಾಗಿಸಿಕೊಂಡಿರುವ ಪೂಜ್ಯ ಬಿ.ಎಸ್. ಯಡಿಯೂರಪ್ಪ
ಅವರನ್ನು ಆಶೀರ್ವದಿಸಿದ ಶಿಕಾರಿಪುರದ ಜನರ ಪ್ರೀತಿ ಅನನ್ಯವಾದುದು.
ಈ ಮಣ್ಣಿನ ಪ್ರಭಾವ ಹಾಗೂ ಜನರ ಹಾರೈಕೆ ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹೆಗಲಿಗೇರಿಸಿದೆ. ಈ ನಿಟ್ಟಿನಲ್ಲಿ ಯಶಸ್ಸಿನ ಹೆಜ್ಜೆಗಳನ್ನಿಟ್ಟು ಕ್ಷೇತ್ರಕ್ಕೆ ಘನತೆ ತಂದು ಕೊಡುವ ಹೊಣೆ ನನ್ನ ಮೇಲಿದ್ದು ಕ್ಷೇತ್ರದ ಜನರ ಸಹಕಾರ, ಬೆಂಬಲವೇ ನನಗೆ ಶ್ರೀರಕ್ಷೆ, ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ
ಬಿ.ಎಸ್. ಯಡಿಯೂರಪ್ಪ
, ಮಾನ್ಯ ವಿರೋಧ ಪಕ್ಷ ನಾಯಕರಾದ ಶ್ರೀ. ಆರ್. ಅಶೋಕ್
, ಜನಪ್ರಿಯ ಸಂಸದರಾದ ಶ್ರೀ
ಬಿವೈ ರಾಘವೇಂದ್ರ
, ಶಾಸಕರಾದ ಶ್ರೀ . ಆರಗ ಜ್ಞಾನೇಂದ್ರ
, ಜಿಲ್ಲಾಧ್ಯಕ್ಷರಾದ ಶ್ರೀ ಮೇಘರಾಜ್, ಮಾಜಿ ಶಾಸಕರುಗಳಾದ ಶ್ರೀ ಹರತಾಳು ಹಾಲಪ್ಪ, ಶ್ರೀ ಎಂ.ಪಿ.ರೇಣುಕಾಚಾರ್ಯ, ತಾಲ್ಲೂಕು B. Y. Vijayendra ಅಧ್ಯಕ್ಷರಾದ ಶ್ರೀ ವೀರೇಂದ್ರ ಪಾಟೀಲ್, ಮುಖಂಡರಾದ ಶ್ರೀ ಗುರುಮೂರ್ತಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಸಹಸ್ರಾರು ಜನರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...