Sunday, December 14, 2025
Sunday, December 14, 2025

Klive Special Article ಯಮ ದ್ವಿತೀಯ

Date:

Klive Special Article ಲೇ: ಎನ್.ಜಯಭೀಮ ಜೊಯಿಸ್.
ಶಿವಮೊಗ್ಗ

ದೀಪಾವಳಿಯು ಐದು ದಿನಗಳ ಹಬ್ಬವಾಗಿದೆ.
ಆದರೆ, ಈಗಿನ ದಿನಗಳಲ್ಲಿ ಮೂರುದಿನಗಳು ಹಬ್ಬವನ್ನು ಆಚರಿಸುವುದು ರೂಢಿಗೆ ಬಂದಿದೆ.ಐದು ದಿನಗಳ ಹಬ್ಬಎಂದರೆಮೊದಲದಿನನೀರುತುಂಬುವುದು,ಎರಡನೇ ದಿನ ನರಕ ಚತುರ್ದಶಿ,ಮೂರನೇ ದಿನ ದೀಪಾವಳಿ ಅಮಾವಾಸ್ಯೆ,ನಾಲ್ಕನೇದಿನ ಬಲಿಪಾಡ್ಯಮಿ ಮತ್ತು ಐದನೇದಿನ ಯಮ ದ್ವಿತೀಯ ಹಬ್ಬ.

ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಿತೀಯ ದಿನದಂದು
ಸಹೋದರರು ಮದುವೆಯಾದ ಸಹೋದರಿಯರ
ಮನೆಗೆ ಹೋಗಿ ಊಟ ಮಾಡಿಬರುವುದು ಈ ದಿನದ
ವಿಶೇಷ. ಈ ದಿನವನ್ನು ಯಮದ್ವಿತೀಯ ಎಂದು ಕರೆಯುತ್ತಾರೆ. ಯಮಧರ್ಮರಾಯ ತನ್ನ ಸಹೋದರಿ ಯಮುನೆ(ಯಮುನಾನದಿ..ಸೂರ್ಯ-ಸಂಜ್ಞಾ ದೇವಿಯರ ಮಗಳು)ಯ ಮನೆಗೆ ಹೋಗಿ ಅಲ್ಲಿ
ಸಹೋದರಿ ನೀಡಿದ ಆತಿಥ್ಯ ಸ್ವೀಕರಿಸಿ ಯಮಧರ್ಮ
ರಾಜನು ಸಹೋದರಿಗೆ ಅನುಗ್ರಹಿಸುತ್ತಾನೆ.

ಈ ಸಂತೋಷದ ಸಂದರ್ಭದಲ್ಲಿ ಯಮಧರ್ಮನು
ಸಹೋದರಿಗೆ ಒಂದು ವರವನ್ನು ಕೇಳುವಂತೆ ಹೇಳು
ತ್ತಾನೆ.ಅದಕ್ಕೆ ಯಮುನೆಯು ಅಣ್ಣಾ ನನಗೆ ಯಾವುದೇ ವರವೂ ಬೇಡ,ಪ್ರತಿವರ್ಷ ಇದೇ ರೀತಿ
ಪ್ರೀತಿಯಿಂದ ನಮ್ಮ ಮನೆಗೆ ಈ ದ್ವಿತೀಯದಂದು
ಬರಬೇಕೆಂದು ಪ್ರಾರ್ಥಿಸುತ್ತಾಳೆ. ಯಮುನೆಯ
ಕೋರಿಕೆಯನ್ನು ಕೇಳಿ ಅವಳಿಗೆ ಮತ್ತು ಎಲ್ಲಾ ಸಹೋದರರಿಗೂ ಒಳ್ಳೆಯದಾಗುವಂತೆ ಒಂದು ವರವನ್ನು ಕೊಡುತ್ತಾನೆ. “ಯಾರು ಕಾರ್ತಿಕ ಶುದ್ಧ ದ್ವಿತೀಯದಂದು ಸಹೋದರರನ್ನು ಕರೆಸಿ ಸಂತೋಷದಿಂದ ಅವರಿಗೆ ಊಟವನ್ನು ಮಾಡಿಸು
ತ್ತಾರೋ,ಅಂತಹ ಸಹೋದರಿಯ ಮನೆಯಲ್ಲಿ
ಊಟಮಾಡಿದ ಸಹೋದರನಿಗೆ ದೀರ್ಘಾಯುಷ್ಯ
ವಂತನಾಗುವಂತೆ ಅನುಗ್ರಹಿಸುವುದಲ್ಲದೇ,ಆದರಿಸಿದ
ಸಹೋದರಿಗೆ ಸಕಲ ಸನ್ಮಂಗಲ ಸೌಭಾಗ್ಯವು ದೊರೆಯುವುದು ಎಂದುವರವನ್ನುಅನುಗ್ರಹಿಸುತ್ತಾನೆ.

Klive Special Article ಯಮದ್ವಿತೀಯ ಹಬ್ಬ ಎಲ್ಲರಿಗೂ ಸನ್ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...