Thursday, March 19, 2026
Thursday, March 19, 2026

Navaratri ನವರಾತ್ರಿ ಮೊದಲ ದಿನ: ದೇವಿಯ ಶೈಲಪುತ್ರಿ ರೂಪದ ಆರಾಧನೆ

Date:

Navaratri ನವರಾತ್ರಿ(ಮೊದಲನೆಯದಿನ):

“ವಂದೇ ವಾಂಛಿತ ಲಾಭಾಯ
ಚಂದ್ರಾರ್ಧಕೃತಶೇಖರಂ/
ವೃಷಾರೂಢಂ ಶೂಲಧರಾಂ
ಶೈಲಪುತ್ರೀಂ ಯಶಸ್ವಿನೀಂ//

ಶರನ್ನವರಾತ್ರಿ ಹಬ್ಬದ ಮೊದಲನೆಯ ದಿನ.
ಈ ದಿನ ದುರ್ಗಾಮಾತೆಯನ್ನು ಶೈಲಪುತ್ರಿದೇವಿ ಎಂಬ
ರೂಪದಿಂದ ಆರಾಧಿಸಲಾಗುತ್ತದೆ.

ಹಳದಿ ಬಣ್ಣಕ್ಕೆ ವಿಶೇಷ ಮಹತ್ವ.
ದೇವಿಯು ಕೈಯಲ್ಲಿ ತ್ರಿಶೂಲ ಮತ್ತು ಕಮಲವನ್ನು ಹಿಡಿದು ಎತ್ತನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ.

ಪರ್ವತರಾಜ ಹಿಮವಂತನ ಪುತ್ರಿಯಾದ್ದರಿಂದ ಈಕೆ
ಯನ್ನು ಶೈಲಪುತ್ರಿ ಎಂದು ಕರೆಯುತ್ತಾರೆ.ಸುಂದರ
ಮತ್ತು ಸೌಮ್ಯ ರೂಪ ಶೈಲ ಪುತ್ರಿ ದೇವಿಯದು.
ಶಿವ ಪುರಾಣದ ಪ್ರಕಾರ,ಸತಿದೇವಿ ದಕ್ಷಪ್ರಜಾಪತಿಯ
ಯಜ್ಞಕುಂಡಕ್ಕೆ ಹಾರಿ ಮುಂದಿನ ಜನ್ಮದಲ್ಲಿ ಶೈಲರಾಜ
ಹಿಮವಂತನಿಗೆ ಮಗಳಾಗಿ ಜನಿಸಿ ಶೈಲಪುತ್ರಿ ಎಂದು
ಹೆಸರು ಪಡೆದಳು. ಕಠಿಣ ತಪಸ್ಸು ಮಾಡಿ ಶಿವನೊಂದಿಗೆ ಮದುವೆಯಾದಳು.ಅಸುರರಿಂದ ತೊಂದರೆ ಅನುಭವಿಸುತ್ತಿದ್ದ ದೇವಾನುದೇವತೆಗಳಿಗೆ
ಅಭಯ ಹಸ್ತ ನೀಡಿದವಳೇ ಶೈಲಪುತ್ರಿದೇವಿ.

Navaratri ನವರಾತ್ರಿ ಹಬ್ಬದ ಮೊದಲನೆಯ ದಿನ ಶೈಲಪುತ್ರಿದೇವಿಯನ್ನು ಶ್ರದ್ಧಾ,ಭಕ್ತಿಯಿಂದ ಆರಾಧಿಸಿದರೆ ದೇವಿಯು ಭಕ್ತರಿಗೆ ವಿಶೇಷ ಶಕ್ತಿಯನ್ನು
ಕರುಣಿಸುತ್ತಾಳೆ ಎಂಬ ದೃಢವಾದ ನಂಬಿಕೆ ಇದೆ.
ಇಂತಹ ಅಭಯಕೊಟ್ಟು ಕಾಪಾಡುವ ಶೈಲಪುತ್ರಿ
ದೇವಿಯನ್ನು ನಾವು ಭಕ್ತಿಯಿಂದ ಆರಾಧಿಸಿ,ಪೂಜೆ
ಸಲ್ಲಿಸಿ,ತಾಯಿಯ ಅನುಗ್ರಹವನ್ನು ಪಡೆಯೋಣ.

ಲೇಖಕ: ಎನ್.ಜಯಭೀಮ ಜೊಯಿಸ್,
ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...