Saturday, September 28, 2024
Saturday, September 28, 2024

Gandhi Jayanti ಸ್ವಚ್ಛತಾ ಹೀ ಸೇವಾ ಆಂದೋಲನದಲ್ಲಿಅಭಿಮಾನದಿಂದ ಭಾಗವಹಿಸಿರುವೆ- ಸಂಸದ ರಾಘವೇಂದ್ರ

Date:

Gandhi Jayanti “ಏಕ್ ತಾರಿಕ್ ,ಏಕ್ ಗಂಟಾ ,ಏಕ್ ಸಾಥ್ “-ಈ ಸಂದೇಶದ ಮೂಲಕ ಗಾಂಧಿ ಜಯಂತಿ ಆಚರಣೆಯ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು ದೇಶದ ಜನತೆಗೆ ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಕರೆ ನೀಡಿದ್ದರು.ಪ್ರಧಾನಿಯವರ ಈ ವಿನಂತಿಯ ಮೇರೆಗೆ ದೇಶಾದ್ಯಂತ ರಾಜಕಾರಣಿಗಳಿಂದ ವಿದ್ಯಾರ್ಥಿಗಳವರೆಗೆ ಎಲ್ಲ ಕ್ಷೇತ್ರಗಳ ಜನರು ಬೆಳಗ್ಗೆ ಹತ್ತು ಗಂಟೆಯಿಂದ ಒಂದು ಗಂಟೆ ಕಾಲ ಶ್ರಮದಾನದಲ್ಲಿ ತೊಡಗಿದ್ದರು. ಈ ಅಭಿಯಾನದಲ್ಲಿ ನಾನೂ ಪಾಲ್ಗೊಂಡು ಸಾರ್ಥಕಭಾವ ಅನುಭವಿಸಿದೆ ಅನ್ನುವುದು ನನಗೆ ಹೆಮ್ಮೆಯ ಹಾಗೂ ಸಂತೋಷದ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Gandhi Jayanti ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಪ್ರಕಾರ ದೇಶಾದ್ಯಂತ 9 ಲಕ್ಷಕ್ಕೂ ಹೆಚ್ಚು ಕಸದ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗಿದೆ. ಗೃಹ ಸಚಿವ ಅಮಿತ್ ಶಾ,ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್ ನಾಥ್ ಶಿಂಧೆ ಸೇರಿದಂತೆ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಗಣ್ಯರು ಮತ್ತು ಕೇಂದ್ರ ಸಚಿವರು ಈ ಆಂದೋಲನದ ನೇತೃತ್ವವನ್ನು ವಹಿಸಿದ್ದರು.

“ಇಂದು ಬೆಳಗ್ಗೆ ಹತ್ತು ಗಂಟೆಗೆ ಈ ಮಹತ್ವದ ಕಾರ್ಯದಲ್ಲಿ ನಾವೆಲ್ಲಾ ಒಂದುಗೂಡಿದ್ದೆವು. ಒಂದು ಸ್ವಚ್ಛ ಭಾರತ ಎಲ್ಲರೂ ಹಂಚಿಕೊಂಡು ನೆರವೇರಿಸುವ ಜವಾಬ್ದಾರಿ. ಇಲ್ಲಿ ಎಲ್ಲರ ಪ್ರಯತ್ನವೂ ಮುಖ್ಯ. ಒಂದು ಸ್ವಚ್ಛವಾದ ಭವಿಷ್ಯಕ್ಕೆ ನಾಂದಿ ಹಾಡಲು ಈ ಪವಿತ್ರ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿದ್ದಾರೆ “ಎಂದು ಪ್ರಧಾನಿಯವರು ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ದೇಶದಲ್ಲಿ ಇಂದು ಒಂದು ಮಹಾನ್ ಕ್ರಾಂತಿ ಆಗುತ್ತಿದೆ.

  • ಅದು ಸ್ವಚ್ಚತಾ ಕ್ರಾಂತಿ.
  • ಅಶುಚಿತ್ವ ಈ ದೇಶದ ಅತಿ ದೊಡ್ಡ ಸಮಸ್ಯೆಗಳಲ್ಲೊಂದಾಗಿತ್ತು.
  • ನಮ್ಮಲ್ಲಿ ಅನಾರೋಗ್ಯಕ್ಕೆ ಅದುವೇ ಬಹು ಮುಖ್ಯವಾದ ಒಂದು ಕಾರಣವಾಗಿತ್ತು.
  • ಬಯಲು ಶೌಚಾಲಯದ ಸಮಸ್ಯೆ ಬಗ್ಗೆ ಮಾತನಾಡದಿರುವುದೇ ಕ್ಷೇಮ ಎನ್ನುವ ಪರಿಸ್ಥಿತಿ ಈ ದೇಶದಲ್ಲಿತ್ತು.
  • ಬಹುಶ: ಇದನ್ನು ಮನಗಂಡೇ ನಮ್ಮ ಪ್ರಧಾನಿ ಶ್ರೀ ಮೋದಿಜಿಯವರು ಸ್ವಚ್ಛತಾ ಆಂದೋಲನವನ್ನು ತಾವು ಪ್ರಧಾನಿ ಆದ ಕೂಡಲೇ ಜಾರಿಗೇ ತಂದದ್ದು.

*ಈ ಆಂದೋಲನದ ಮೂಲಕ ಈ ದೇಶದಲ್ಲಿ ಸ್ವಚ್ಛತೆಯನ್ನು ಒಂದು ಕ್ರಾಂತಿಯ ರೂಪದಲ್ಲಿ ಜಾರಿಗೊಳಿಸಿದ ಹೆಮ್ಮೆಯ ನಾಯಕ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರು.

  • ನಮ್ಮ ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಒಂದು ದಿನವನ್ನು ಆಚರಿಸಬೇಕು, ಆ ಮೂಲಕ ಜನಜಾಗೃತಿ ಮೂಡಿಸಬೇಕು ಎನ್ನುವ ಆಲೋಚನೆ ಈ ಆಂದೋಲನದ ಆಂತರ್ಯದಲ್ಲಿರುವುದು.
  • ಈಗ ದೇಶಾದ್ಯಂತ ಸ್ವಚ್ಛತಾ ಪಖ್ವಾಡಾ ಆಂದೋಲನ ನಡೆಯುತ್ತಿದೆ.
  • ಈ ಮೂಲಕ ನಮ್ಮ ಸಾರ್ವಜನಿಕ ಸ್ಥಳಗಳನ್ನು ಶುಚಿ ಪಡಿಸಿ, ಜನ ಸಾಮಾನ್ಯರಿಗೆ ಸ್ವಚ್ಛತೆಯ ಸಂದೇಶ ನೀಡಲಾಗುತ್ತಿದೆ.
  • ಇಂದು ಈ ಆಂದೋಲನದಲ್ಲಿ ತಾವೆಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಿದ್ದೀರಿ.
  • ಈ ಶ್ರಮದಾನ ಇಂದಿಗೆ ಮಾತ್ರ ಸೀಮಿತಗೊಳ್ಳಬಾರರದು.
  • ಏಕೆಂದರೆ, ಸ್ವಚ್ಛತೆ ಎನ್ನುವುದು ನಮ್ಮ ಬದುಕಿನ ಭಾಗವಾಗಬೇಕು.
  • ನಮ್ಮ ಮನೆ, ನಮ್ಮ ಪರಿಸರ, ನಮ್ಮ ಸಮಾಜ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿ.
  • 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ರಾಜಪಥದಲ್ಲಿನಮ್ಮ ಪ್ರಧಾನಿ ಶ್ರೀ ಮೋದಿಜಿಯವರು ಚಾಲನೆ ನೀಡಿದ್ದರು.
  • ಆ ಸಂದರ್ಭದಲ್ಲಿ ಖುದ್ದು ಶ್ರೀ ಮೋದಿಜೀಯವರೇ ಮಂದಿರ ಮಾರ್ಗ ಪೊಲೀಸ್ ಠಾಣೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿದ್ದರು.
  • ಹೀಗೆ ಅಂದು ಆರಂಭವಾದ ಸ್ವಚ್ಛ ಭಾರತ ಅಭಿಯಾನ ಇಂದು ನಮ್ಮಲ್ಲಿ, ನಮ್ಮ ಸಮಾಜದಲ್ಲಿ ಹಲವಾರು ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ.
  • ಈ ಐತಿಹಾಸಿಕ ಆಂದೋಲವನನ್ನು ಮುಂದುವರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮುಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...