Thursday, March 19, 2026
Thursday, March 19, 2026

Gandhi Jayanti ಸ್ವಚ್ಛತಾ ಹೀ ಸೇವಾ ಆಂದೋಲನದಲ್ಲಿಅಭಿಮಾನದಿಂದ ಭಾಗವಹಿಸಿರುವೆ- ಸಂಸದ ರಾಘವೇಂದ್ರ

Date:

Gandhi Jayanti “ಏಕ್ ತಾರಿಕ್ ,ಏಕ್ ಗಂಟಾ ,ಏಕ್ ಸಾಥ್ “-ಈ ಸಂದೇಶದ ಮೂಲಕ ಗಾಂಧಿ ಜಯಂತಿ ಆಚರಣೆಯ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು ದೇಶದ ಜನತೆಗೆ ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಕರೆ ನೀಡಿದ್ದರು.ಪ್ರಧಾನಿಯವರ ಈ ವಿನಂತಿಯ ಮೇರೆಗೆ ದೇಶಾದ್ಯಂತ ರಾಜಕಾರಣಿಗಳಿಂದ ವಿದ್ಯಾರ್ಥಿಗಳವರೆಗೆ ಎಲ್ಲ ಕ್ಷೇತ್ರಗಳ ಜನರು ಬೆಳಗ್ಗೆ ಹತ್ತು ಗಂಟೆಯಿಂದ ಒಂದು ಗಂಟೆ ಕಾಲ ಶ್ರಮದಾನದಲ್ಲಿ ತೊಡಗಿದ್ದರು. ಈ ಅಭಿಯಾನದಲ್ಲಿ ನಾನೂ ಪಾಲ್ಗೊಂಡು ಸಾರ್ಥಕಭಾವ ಅನುಭವಿಸಿದೆ ಅನ್ನುವುದು ನನಗೆ ಹೆಮ್ಮೆಯ ಹಾಗೂ ಸಂತೋಷದ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Gandhi Jayanti ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಪ್ರಕಾರ ದೇಶಾದ್ಯಂತ 9 ಲಕ್ಷಕ್ಕೂ ಹೆಚ್ಚು ಕಸದ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗಿದೆ. ಗೃಹ ಸಚಿವ ಅಮಿತ್ ಶಾ,ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್ ನಾಥ್ ಶಿಂಧೆ ಸೇರಿದಂತೆ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಗಣ್ಯರು ಮತ್ತು ಕೇಂದ್ರ ಸಚಿವರು ಈ ಆಂದೋಲನದ ನೇತೃತ್ವವನ್ನು ವಹಿಸಿದ್ದರು.

“ಇಂದು ಬೆಳಗ್ಗೆ ಹತ್ತು ಗಂಟೆಗೆ ಈ ಮಹತ್ವದ ಕಾರ್ಯದಲ್ಲಿ ನಾವೆಲ್ಲಾ ಒಂದುಗೂಡಿದ್ದೆವು. ಒಂದು ಸ್ವಚ್ಛ ಭಾರತ ಎಲ್ಲರೂ ಹಂಚಿಕೊಂಡು ನೆರವೇರಿಸುವ ಜವಾಬ್ದಾರಿ. ಇಲ್ಲಿ ಎಲ್ಲರ ಪ್ರಯತ್ನವೂ ಮುಖ್ಯ. ಒಂದು ಸ್ವಚ್ಛವಾದ ಭವಿಷ್ಯಕ್ಕೆ ನಾಂದಿ ಹಾಡಲು ಈ ಪವಿತ್ರ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿದ್ದಾರೆ “ಎಂದು ಪ್ರಧಾನಿಯವರು ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ದೇಶದಲ್ಲಿ ಇಂದು ಒಂದು ಮಹಾನ್ ಕ್ರಾಂತಿ ಆಗುತ್ತಿದೆ.

  • ಅದು ಸ್ವಚ್ಚತಾ ಕ್ರಾಂತಿ.
  • ಅಶುಚಿತ್ವ ಈ ದೇಶದ ಅತಿ ದೊಡ್ಡ ಸಮಸ್ಯೆಗಳಲ್ಲೊಂದಾಗಿತ್ತು.
  • ನಮ್ಮಲ್ಲಿ ಅನಾರೋಗ್ಯಕ್ಕೆ ಅದುವೇ ಬಹು ಮುಖ್ಯವಾದ ಒಂದು ಕಾರಣವಾಗಿತ್ತು.
  • ಬಯಲು ಶೌಚಾಲಯದ ಸಮಸ್ಯೆ ಬಗ್ಗೆ ಮಾತನಾಡದಿರುವುದೇ ಕ್ಷೇಮ ಎನ್ನುವ ಪರಿಸ್ಥಿತಿ ಈ ದೇಶದಲ್ಲಿತ್ತು.
  • ಬಹುಶ: ಇದನ್ನು ಮನಗಂಡೇ ನಮ್ಮ ಪ್ರಧಾನಿ ಶ್ರೀ ಮೋದಿಜಿಯವರು ಸ್ವಚ್ಛತಾ ಆಂದೋಲನವನ್ನು ತಾವು ಪ್ರಧಾನಿ ಆದ ಕೂಡಲೇ ಜಾರಿಗೇ ತಂದದ್ದು.

*ಈ ಆಂದೋಲನದ ಮೂಲಕ ಈ ದೇಶದಲ್ಲಿ ಸ್ವಚ್ಛತೆಯನ್ನು ಒಂದು ಕ್ರಾಂತಿಯ ರೂಪದಲ್ಲಿ ಜಾರಿಗೊಳಿಸಿದ ಹೆಮ್ಮೆಯ ನಾಯಕ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರು.

  • ನಮ್ಮ ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಒಂದು ದಿನವನ್ನು ಆಚರಿಸಬೇಕು, ಆ ಮೂಲಕ ಜನಜಾಗೃತಿ ಮೂಡಿಸಬೇಕು ಎನ್ನುವ ಆಲೋಚನೆ ಈ ಆಂದೋಲನದ ಆಂತರ್ಯದಲ್ಲಿರುವುದು.
  • ಈಗ ದೇಶಾದ್ಯಂತ ಸ್ವಚ್ಛತಾ ಪಖ್ವಾಡಾ ಆಂದೋಲನ ನಡೆಯುತ್ತಿದೆ.
  • ಈ ಮೂಲಕ ನಮ್ಮ ಸಾರ್ವಜನಿಕ ಸ್ಥಳಗಳನ್ನು ಶುಚಿ ಪಡಿಸಿ, ಜನ ಸಾಮಾನ್ಯರಿಗೆ ಸ್ವಚ್ಛತೆಯ ಸಂದೇಶ ನೀಡಲಾಗುತ್ತಿದೆ.
  • ಇಂದು ಈ ಆಂದೋಲನದಲ್ಲಿ ತಾವೆಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಿದ್ದೀರಿ.
  • ಈ ಶ್ರಮದಾನ ಇಂದಿಗೆ ಮಾತ್ರ ಸೀಮಿತಗೊಳ್ಳಬಾರರದು.
  • ಏಕೆಂದರೆ, ಸ್ವಚ್ಛತೆ ಎನ್ನುವುದು ನಮ್ಮ ಬದುಕಿನ ಭಾಗವಾಗಬೇಕು.
  • ನಮ್ಮ ಮನೆ, ನಮ್ಮ ಪರಿಸರ, ನಮ್ಮ ಸಮಾಜ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿ.
  • 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ರಾಜಪಥದಲ್ಲಿನಮ್ಮ ಪ್ರಧಾನಿ ಶ್ರೀ ಮೋದಿಜಿಯವರು ಚಾಲನೆ ನೀಡಿದ್ದರು.
  • ಆ ಸಂದರ್ಭದಲ್ಲಿ ಖುದ್ದು ಶ್ರೀ ಮೋದಿಜೀಯವರೇ ಮಂದಿರ ಮಾರ್ಗ ಪೊಲೀಸ್ ಠಾಣೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿದ್ದರು.
  • ಹೀಗೆ ಅಂದು ಆರಂಭವಾದ ಸ್ವಚ್ಛ ಭಾರತ ಅಭಿಯಾನ ಇಂದು ನಮ್ಮಲ್ಲಿ, ನಮ್ಮ ಸಮಾಜದಲ್ಲಿ ಹಲವಾರು ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ.
  • ಈ ಐತಿಹಾಸಿಕ ಆಂದೋಲವನನ್ನು ಮುಂದುವರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮುಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...