Saturday, September 28, 2024
Saturday, September 28, 2024

M. S. Swaminathan ಭಾರತೀಯ ಹಸಿರುಕ್ರಾಂತಿಯ ಹರಿಕಾರ ಡಾ.ಎಂ.ಎಸ್.ಸ್ವಾಮಿನಾಥನ್ ಇನ್ನಿಲ್ಲ

Date:

M. S. Swaminathan ಭಾರತೀಯ ಕೃಷಿಕ್ಷೇತ್ರದ ಹಸಿರು ಕ್ರಾಂತಿಯ ಕೃಷಿವಿಜ್ಞಾನಿ, ಮೇಧಾವಿ‌ ಎಂ.ಎಸ್.ಸ್ವಾಮಿನಾಥನ್ ಚೆನ್ನೈ ನ ಸ್ವಗೃಹದಲ್ಲಿ
ನಿಧನರಾಗಿದ್ದಾರೆ.

98 ವರ್ಷದ ಹಿರಿಯ ವ್ಯಕ್ತಿ ಸೆ.28 ರಂದು ವಯೋಸಹಜ ಅನಾರೋಗ್ಯ ಕಾರಣದಿಂದ ದೈವಾಧೀನರಾಗಿದ್ದಾರೆ.

ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು 1925ರ ಆಗಸ್ಟ್‌ 7ರಂದು
ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದರು.

ಸ್ಥಳೀಯ ಶಾಲೆಯಿಂದ ಮೆಟ್ರಿಕ್ಯುಲೇಟ್ ಮಾಡಿದ ನಂತರ, ಅವರು ವೈದ್ಯಕೀಯ ಶಾಲೆಗೆ ಪ್ರವೇಶ ಪಡೆದರು.

ಆದರೆ, 1943 ರ ಬಂಗಾಳದ ಕ್ಷಾಮ , ಇದರಲ್ಲಿ ಸುಮಾರು 3 ಮಿಲಿಯನ್ ಜನರು ಹಸಿವಿನಿಂದ ಸತ್ತರು, ಅವರ ಮನಸ್ಸನ್ನು ಬದಲಾಯಿಸಿತು ಮತ್ತು ಕೃಷಿ ಸಂಶೋಧನೆಯನ್ನು ತೆಗೆದುಕೊಳ್ಳುವಂತೆ ಮಾಡಿತು.
ಅವರು ಮದ್ರಾಸ್ ಕೃಷಿ ಕಾಲೇಜಿಗೆ ಸೇರುವ ಮೊದಲು ತಿರುವನಂತಪುರದ ಮಹಾರಾಜ ಕಾಲೇಜಿನಿಂದ ಪ್ರಾಣಿಶಾಸ್ತ್ರದಲ್ಲಿ ಪದವಿ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಇಲ್ಲಿ ಅವರು ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದರ ನಂತರ, ಅವರು ಸಸ್ಯ ತಳಿ ಮತ್ತು ತಳಿಶಾಸ್ತ್ರದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆಯಲು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ಗೆ ಪ್ರವೇಶಪಡೆದರು.

ಪಿಜಿ ಪಡೆದ ನಂತರ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್‌ಗೆ ಅರ್ಹತೆ ಪಡೆದರು. ಆದಾಗ್ಯೂ, ಅವರು ಆಲೂಗೆಡ್ಡೆ ತಳಿಶಾಸ್ತ್ರದ ಕುರಿತು ತಮ್ಮ ಸಂಶೋಧನೆಯನ್ನು ಮುಂದುವರಿಸಲು ನೆದರ್ಲ್ಯಾಂಡ್ಸ್‌ನ ವ್ಯಾಗೆನಿಂಗನ್ ಕೃಷಿ ವಿಶ್ವವಿದ್ಯಾಲಯದಲ್ಲಿ ಯುನೆಸ್ಕೋ ಫೆಲೋಶಿಪ್ ತೆಗೆದುಕೊಳ್ಳಲು ಆಯ್ಕೆ ಮಾಡಿದರು.

ನಂತರ ಅವರು ಕೇಂಬ್ರಿಡ್ಜ್ ಯೂನಿವರ್ಸಿಟಿ ಸ್ಕೂಲ್ ಆಫ್ ಅಗ್ರಿಕಲ್ಚರ್‌ಗೆ ತೆರಳಿದರು ಮತ್ತು 1952 ರಲ್ಲಿ ಪಿಎಚ್‌ಡಿ ಪಡೆದರು. ಇದರ ನಂತರ ಅವರು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕೆಲಸ ಮಾಡಲು ಹೋದರು.

ನಂತರ ಅವರು ಇಲ್ಲಿ ಕೆಲಸ ಮಾಡಲು 1954 ರಲ್ಲಿ ಭಾರತಕ್ಕೆ ಮರಳಿದರು. ಅವರು IARI ನಲ್ಲಿ ತಮ್ಮ ಸಂಶೋಧನೆಯನ್ನು ಮುಂದುವರೆಸಿದರು.

ಡಾ.ಎಂ.ಎಸ್.
ಸ್ವಾಮಿನಾಥನ್ ಅವರನ್ನ ಅರಸಿ‌ಬಂದ ಪ್ರಶಸ್ತಿ ,ಗೌರವಗಳು…

M. S. Swaminathan 1971ರಲ್ಲಿ ಅವರಿಗೆ ಮ್ಯಾಗ್ಸೇಸೆ ಪ್ರಶಸ್ತಿ ಸಂದಿತು.
ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕಾರದಂತಹ ಮಹತ್ವದ ಪ್ರಶಸ್ತಿಗಳೆಲ್ಲವೂ ಅವರಿಗೆ ಸಂದಿವೆ.

1986ರ ವರ್ಷದಲ್ಲಿ ಅವರಿಗೆ ಆಲ್ಬರ್ಟ್ ಐನ್ಸ್ಟೀನ್ ಪ್ರಶಸ್ತಿ
1987ರಲ್ಲಿ ಪ್ರಥಮ ವಿಶ್ವ ಆಹಾರ ಪ್ರಶಸ್ತಿಗಳ ಗೌರವ
1991ರಲ್ಲಿ ಅವರಿಗೆ ಅಮೆರಿಕದ ಟೈಲರ್ ಪುರಸ್ಕಾರ
1999ರ ವರ್ಷದಲ್ಲಿ ಯುನೆಸ್ಕೋದ ಗಾಂಧಿ ಸ್ವರ್ಣ ಪುರಸ್ಕಾರಗಳು ಲಭಿಸಿವೆ…

ಅವರಿಗೆ ಮೂವರು ಪುತ್ರಿಯರಾದ ಸೌಮ್ಯ, ಮಧುರಾ ಮತ್ತು ನಿತ್ಯ ಇದ್ದಾರೆ.ಪತ್ನಿ ಮೀನಾ ಕಳೆದ ವರ್ಷ ತೀರಿಕೊಂಡಿದ್ದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕೃಷಿ ವಿಜ್ಞಾನಿ ಡಾ. ಎಂ ಎಸ್ ಸ್ವಾಮಿನಾಥನ್ ಅವರ ನಿಧನ ಸುದ್ದಿ ಕೇಳುತ್ತಿದ್ದಂತಯೇ ಅನೇಕ ಗಣ್ಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದಿದ್ದಾರೆ.

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಕೃಷಿ ವಿಜ್ಞಾನಿ ಡಾ. ಎಂ.ಎಸ್‌.ಸ್ವಾಮಿನಾಥನ್‌ ನಿಧನದಿಂದ ತೀವ್ರ ದುಃಖವಾಗಿದೆ. ಆಹಾರ ಭದ್ರತೆ ಸಾಧನೆಗಾಗಿ ಇನ್ನಿಲ್ಲದಂತೆ ಶ್ರಮಿಸಿದ ದೂರದೃಷ್ಟಿಯುಳ್ಳ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತಿದ್ದದ್ದು ಸೂಕ್ತವಾಗಿದೆ. ಅವರು ಬಿಟ್ಟುಹೋಗಿರುವ ಶ್ರೀಮಂತ ಕೃಷಿ ವಿಜ್ಞಾನ ಪರಂಪರೆಯು ಮನುಕುಲವನ್ನು ಸುರಕ್ಷಿತ ಮತ್ತು ಹಸಿವು ಮುಕ್ತ ಭವಿಷ್ಯದತ್ತ ಮುನ್ನಡೆಸಲು ಮಾರ್ಗದರ್ಶಿಯಾಗಲಿದೆ’ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ. ಬಿ ಪಾಟೀಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ.

ಭಾರತದ ಖ್ಯಾತ ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಜನಕ, ಪದ್ಮವಿಭೂಷಣ ಡಾ. ಎಂ.ಎಸ್. ಸ್ವಾಮಿನಾಥನ್ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಿಂದ ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ ಎಂದು ಅವರು ಗುರುತಿಸಲ್ಪಟ್ಟಿದ್ದರು. ಅವರ ನಿಧನದಿಂದ ದೇಶಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...